Headlines

ಬೆಂಗಳೂರು: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು – Kannada News | Bengaluru Accidental Fire: Sheds Housing Suspected Bangladeshi Migrants Gutted

ಆನೇಕಲ್​​, ಜನವರಿ 20: ಶಂಕಿತ ಬಾಂಗ್ಲಾ ವಲಸಿಗರು ವಾಸವಿದ್ದ ಶೆಡ್​ಗಳಿಗೆ ಬೆಂಕಿ ಬಿದ್ದಿರುವಂತಹ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್​ಸಿಟಿ ಬಳಿಯ ಎಸ್​​.ಬಿಂಗೀಪುರ ಕೆರೆ ಸಮೀಪ ಅವಘಡ ಸಂಭವಿಸಿದೆ. ಆಕಸ್ಮಿಕ ಬೆಂಕಿಯಿಂದಾಗಿ ಗುಜರಿ ಶೆಡ್​ಗಳು ಹೊತ್ತಿ ಉರಿದಿವೆ. ಒಂದು ವಾರದ ಹಿಂದೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಶಂಕಿತ ಬಾಂಗ್ಲಾ ವಲಸಿಗರನ್ನು ತೆರವುಗೊಳಿಸಿದ್ದರು. ಸದ್ಯ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶಂಕಿತ ಬಾಂಗ್ಲಾ ವಲಸಿಗರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತಷ್ಟು…

Read More

ಮಕ್ಕಳಿಗೆ ಕೋಪ ಬಂದಾಗ ನಿರ್ಲಕ್ಷಿಸಬೇಡಿ! ಈ 6 ಲಕ್ಷಣಗಳು ಕಂಡುಬಂದರೆ ಎಚ್ಚರ ವಹಿಸಿ – Kannada News | Child Behavior Problems: Signs That Need Professional Attention

ಮಕ್ಕಳ ಬಾಲ್ಯವು ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮಕ ಹಂತವಾಗಿರುವುದರಿಂದ ಪೋಷಕರು ಅವರ ಪಾಲನೆ, ಪೋಷಣೆ ಮಾಡುವಾಗ ಎಷ್ಟು ಜಾಗೃತಿ ವಹಿಸಿದರೂ ಸಾಲುವುದಿಲ್ಲ. ಇಂತಹ ವಯಸ್ಸಿನಲ್ಲಿ ಮಕ್ಕಳು ತಮ್ಮ ಭಯ, ಒತ್ತಡ (Stress) ಅಥವಾ ದುಃಖವನ್ನು ಸ್ಪಷ್ಟವಾಗಿ ಹೇಳಿಕೊಳ್ಳಲು ಸಾಧ್ಯವಾಗದೇ, ಅದನ್ನು ಕೋಪ, ಬೇಸರ ಅಥವಾ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ವ್ಯಕ್ತಪಡಿಸಬಹುದು. ಆದ್ದರಿಂದ ಮಕ್ಕಳ ಕೋಪವನ್ನು ಕೇವಲ ಹಠ ಎಂದು ನಿರ್ಲಕ್ಷ್ಯ ಮಾಡುವ ಬದಲು ಅವರ ಉದ್ದೇಶವೇನು, ಯಾಕೆ ಈ ರೀತಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ…

Read More

ಬಹ್ರೇನ್ ರಾಜ, ಸೌದಿ ಅರೇಬಿಯಾದ ಪ್ರಿನ್ಸ್​ಗೆ ಕರೆ ಮಾಡಿದ ಪ್ರಧಾನಿ ಮೋದಿ; ಎರಡೂ ದೇಶಗಳ ಮೇಲಿನ ದಾಳಿಗೆ ಖಂಡನೆ – Kannada News | PM Modi Speaks With Saudi arabia Crown Prince and Bahrain King Condemns Iran Attacks

ನವದೆಹಲಿ, ಮಾರ್ಚ್ 2: ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಬಹ್ರೇನ್ ರಾಜ ಮತ್ತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಜೊತೆ ಫೋನ್​ನಲ್ಲಿ ಮಾತನಾಡಿದ್ದಾರೆ. ಈ ಎರಡೂ ದೇಶಗಳ ಮೇಲೆ ಇರಾನ್ (Iran Attack) ನಡೆಸಿದ ದಾಳಿಯನ್ನು ಮೋದಿ ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಮತ್ತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ….

Read More

Daily Devotional: ದಂಪತಿ ಪೂಜಾ ಕಾರ್ಯಗಳಲ್ಲಿ ಕುಳಿತುಕೊಳ್ಳುವಾಗ ಈ ತಪ್ಪು ಮಾಡಲೇಬೇಡಿ – Kannada News | Understanding Traditional Seating for Couples in Pooja and Daily Activities

ದಂಪತಿಗಳು ಶುಭ ಕಾರ್ಯಗಳಲ್ಲಿ ಹೇಗೆ ಕುಳಿತುಕೊಳ್ಳಬೇಕುImage Credit source: Pinterest ದಂಪತಿಗಳು ಶುಭ ಕಾರ್ಯಗಳಲ್ಲಿ ಹೇಗೆ ಕುಳಿತುಕೊಳ್ಳಬೇಕು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಪತಿ ಮತ್ತು ಪತ್ನಿ ಒಂದು ದೇಹದ ಎರಡು ಭಾಗಗಳಿದ್ದಂತೆ ಎಂಬುದು ಭಾರತೀಯ ಸಂಸ್ಕೃತಿಯಲ್ಲಿರುವ ಆಳವಾದ ನಂಬಿಕೆ. ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯಹ ಮತ್ತು ಅರ್ಧಾಂಗಿ ಹಾಗೂ ಅರ್ಧನಾರೀಶ್ವರ ಎಂಬ ಪರಿಕಲ್ಪನೆಗಳು ಈ ಬಾಂಧವ್ಯದ ಮಹತ್ವವನ್ನು ಸಾರುತ್ತವೆ….

Read More

ವೈದ್ಯೋ ನಾರಾಯಣೋ ಹರಿಃ: ನವಜಾತ ಶಿಶುವಿಗೆ ಮರುಜೀವ ನೀಡಿದ ವೈದ್ಯೆ – Kannada News | Life Returns in Saharanpur: How a Doctor’s Instinct and Bravery Saved a Dying Baby

ಸಹಾರನ್‌ಪುರ, ಮೇ,15 : ಉತ್ತರ ಪ್ರದೇಶದ ಸಹಾರನ್‌ಪುರದ ನಾನೋಟಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪವಾಡವೊಂದು ನಡೆದಿದೆ. ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಉಸಿರಾಟ ನಿಲ್ಲಿಸಿ ಸಾವಿನ ಅಂಚಿನಲ್ಲಿದ್ದ ನವಜಾತ ಶಿಶುವಿಗೆ ವೈದ್ಯೆಯೊಬ್ಬರು ತಮ್ಮ ಉಸಿರನ್ನೇ ನೀಡಿ ಮರುಜೀವ ಕೊಟ್ಟಿದ್ದಾರೆ. ನಾನೋಟಾ ಕೇಂದ್ರದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಹುಟ್ಟಿದ ತಕ್ಷಣ ಮಗು ಉಸಿರಾಡುತ್ತಿರಲಿಲ್ಲ. ಆಸ್ಪತ್ರೆಯಲ್ಲಿದ್ದ ಆಮ್ಲಜನಕದ ಯಂತ್ರ (Oxygen Machine) ಕೆಲಸ ಮಾಡದಿದ್ದಾಗ ಅಲ್ಲಿನ ವಾತಾವರಣದಲ್ಲಿ ಗಾಬರಿ ಮತ್ತು ನಿಶ್ಯಬ್ದ ಆವರಿಸಿತು. ಇಂತಹ ಕ್ಲಿಷ್ಟ ಸಮಯದಲ್ಲಿ ಡಾ….

Read More

ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ರಿಷಬ್ ಶೆಟ್ಟಿ; ಪ್ರವಾಸೋದ್ಯಮ ನೀತಿ ಬಗ್ಗೆ ಸಮಾಲೋಚನೆ – Kannada News | Rishab Shetty meets CM DK Shivakumar in Bengaluru to discuss Coastal and Malnad tourism

ಸ್ಯಾಂಡಲ್‌ವುಡ್ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಇಂದು (ಜುಲೈ 5) ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಸಮಾಲೋಚನೆ ನಡೆಸಿದರು. ಇತ್ತೀಚೆಗಷ್ಟೇ ರಾಜ್ಯ ಸರ್ಕಾರದ ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮದ ಅಧಿಕೃತ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ, ಆ ಭಾಗದ ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ನೂತನ ನೀತಿಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಕರಾವಳಿ ಹಾಗೂ ಮಲೆನಾಡಿನ ಸಂಸ್ಕೃತಿ ಮತ್ತು…

Read More

IPL 2026: ತವರಿನ ಹೊರಗೆ ಸೇಡಿನ ಸಮರಕ್ಕೆ ಸಜ್ಜಾದ ಆರ್​​ಸಿಬಿ; ಎದುರಾಳಿ ಯಾರು? – Kannada News | IPL 2026: DC vs RCB Match 39 Preview – Date, Time, Venue and Where to Watch Live

ಐಪಿಎಲ್ 2026 ರ 39 ನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿ ಇದಾಗಿದೆ. ಈ ಮೊದಲು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಮುಖಾಮುಖಿಯಲ್ಲಿ ಆತಿಥೇಯ ಆರ್​​ಸಿಬಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿತ್ತು. ಹೀಗಾಗಿ ಎರಡನೇ ಮುಖಾಮುಖಿ ಆರ್​​ಸಿಬಿಗೆ ಸೇಡಿನ ಸಮರವಾಗಿದೆ. ಇದಕ್ಕೆ ಪೂರಕವಾಗಿ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿರುವ ಆರ್​​ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿರುವ ಡೆಲ್ಲಿ ತಂಡವನ್ನು…

Read More

ಭಾರತದಲ್ಲಿ ಬೆಳೆಯುತ್ತಿರುವ ಡೇಟಾ ಸೆಂಟರ್​ಗಳಿಂದ ಭರ್ಜರಿ ಉದ್ಯೋಗ ಸೃಷ್ಟಿ; 4 ವರ್ಷದಲ್ಲಿ 1 ಲಕ್ಷ ಎಂಜಿನಿಯರುಗಳಿಗೆ ಉದ್ಯೋಗಾವಕಾಶ – Kannada News | Data Centre industry fast growing in India, may have demand 1 lakh engineering jobs in 4 years

ನವದೆಹಲಿ, ಜುಲೈ 15: ಡೇಟಾ ಸೆಂಟರ್​ಗಳಲ್ಲಿ ಹೂಡಿಕೆ ಹೆಚ್ಚು, ಉದ್ಯೋಗ ಕಡಿಮೆ ಎನ್ನುವ ಆರೋಪಗಳ ನಡುವೆ ಹೊಸ ವರದಿಯೊಂದು ಬೇರೆಯದೇ ಕಥೆ ಹೇಳುತ್ತಿದೆ. ಡೇಟಾ ಸೆಂಟರ್ (Data Centre) ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, ಇದು ಅತಿ ಉದ್ಯೋಗ ಸೃಷ್ಟಿಯಲ್ಲೂ ಪ್ರಮುಖ ಎನಿಸಿದೆ. ಎನ್​ಎಲ್​ಬಿ ಸರ್ವಿಸಸ್ ಕಲೆಹಾಕಿದ ದತ್ತಾಂಶದ ಪ್ರಕಾರ, ಭಾರತದಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮಗಳಲ್ಲಿ ಡೇಟಾ ಸೆಂಟರ್ ಕೂಡ ಒಂದೆನಿಸುತ್ತಿದೆ. 2030ರ ವೇಳೆಗೆ ಈ ವಲಯದಲ್ಲಿ ಸುಮಾರು 1 ಲಕ್ಷ ಎಂಜಿನಿಯರುಗಳಿಗೆ ಬೇಡಿಕೆ…

Read More

ಸಿಗರೇಟ್ ಬಿಟ್ಟ ಮೆಲೋನಿ, ವಾಚ್ ಮರೆತ ಮ್ಯಾಕ್ರನ್, ಮತ್ತೆ ಮೆಲೋಡಿ ಮೋಡಿ; ಜಿ7 ಶೃಂಗಸಭೆಯ ವೈರಲ್ ಕ್ಷಣಗಳಿವು – Kannada News | Giorgia Meloni Reveals She Quit Smoking Macron Loses Watch G7 Summit Hot mics catch World leaders talks

ಎವಿಯಾನ್, ಜೂನ್ 17: ಫ್ರಾನ್ಸ್​ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಅನೇಕ ಗಂಭೀರ ವಿಚಾರಗಳು ಚರ್ಚೆಯಾಗಿವೆ. ಇದರ ಜೊತೆಗೆ ಹಾಸ್ಯಮಯ ಸನ್ನಿವೇಶವೂ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಜಾಗತಿಕ ನಾಯಕರ ತಮಾಷೆಯ ಕ್ಷಣಗಳು ಕೂಡ ರೆಕಾರ್ಡ್ ಆಗಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಧೂಮಪಾನ ತ್ಯಜಿಸಿದ ರಹಸ್ಯ ಬಿಚ್ಚಿಟ್ಟಿರುವುದು, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮರೆತುಹೋದ ವಾಚ್ ಮೇಲೆ ಟ್ರಂಪ್ ಕಣ್ಣು, ಫಿಫಾ ವಿಶ್ವಕಪ್ ಕುರಿತ ನಾಯಕರ ಹರಟೆ ಮುಂತಾದ ಕ್ಷಣಗಳು ಸೆರೆಯಾಗಿವೆ. ಮಂಗಳವಾರದ ಜಿ7 ಸಭೆಯ…

Read More

IPL 2026: 34 ಸಿಕ್ಸ್, 530 ರನ್; ಸಿಎಸ್​ಕೆ ವೇಗಿಯ ಅಪರೂಪದ ದಾಖಲೆ

ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2026 ರಿಂದ ಹೊರಬಿದ್ದಿದೆ. ಇದು ಸತತ ಮೂರನೇ ಸೀಸನ್‌ನಲ್ಲಿ ಸಿಎಸ್‌ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ತಂಡದಲ್ಲಿ ಅನುಭವಿಗಳ ಕೊರತೆಯೇ ಈ ಕಳಪೆ ಪ್ರದರ್ಶನಕ್ಕೆ ಕಾರಣ ಎನ್ನಬಹುದು. ಅದರಲ್ಲೂ ಸಿಎಸ್​ಕೆ ಬೌಲಿಂಗ್ ಘಟಕ ಎಷ್ಟು ದುರ್ಬಲವಾಗಿತ್ತೆಂದರೆ ಯಾವೊಬ್ಬ ಬೌಲರ್​ಗೂ ಪಂದ್ಯ ಗೆಲ್ಲುವ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅದರಲ್ಲೂ ಸಿಎಸ್​ಕೆ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಅನ್ಶುಲ್ ಕಾಂಬೋಜ್ 21 ವಿಕೆಟ್‌ ಉರುಳಿಸಿ ಅತಿ ಹೆಚ್ಚು…

Read More