ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಬಸವ ಜಯಂತಿ ಆಚರಿಸಿದ್ದು ಏಲ್ಲಿ ಮತ್ತು ಯಾರು ಗೊತ್ತಾ? – Kannada News | Hardekar Manjappa was the first to initiate the celebration of Basava Jayanti in Karnataka
ದಾವಣಗೆರೆಯ ವಿರಕ್ತಮಠ, ಹರ್ಡೇಕರ ಮಂಜಪ್ಪImage Credit source: tv9 kannada ದಾವಣಗೆರೆ, ಏಪ್ರಿಲ್ 20: ಜಗತ್ತಿನಾದ್ಯಂತ ಇಂದು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಜಗದ್ಗುರು ಬಸವಣ್ಣನವರ ಜಯಂತಿಯನ್ನು (Basava Jayanti) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಈ ‘ಬಸವ ಜಯಂತಿ’ ಎಂಬ ಜನೋತ್ಸವಕ್ಕೆ ನಾಂದಿ ಹಾಡಿದ್ದು ಎಲ್ಲಿ ಮತ್ತು ಯಾರು ಎಂಬುದು ಬಹುಶಃ ಇಂದಿನ ಪೀಳಿಗೆಗೆ ತಿಳಿದಿರಲಿಕ್ಕಿಲ್ಲ. ಮಹಾತ್ಮ ಗಾಂಧೀಜಿಯವರ ತತ್ವಗಳಿಗೂ ಮೊದಲೇ ಬಸವ ತತ್ವದ ಮೂಲಕ ಜನರನ್ನು ಸಂಘಟಿಸಿದ ‘ಕರ್ನಾಟಕದ ಗಾಂಧಿ’ ಹರ್ಡೇಕರ ಮಂಜಪ್ಪ ಅವರು…