ಕಡಿಮೆ ಸಂಭಾವನೆ ಕೊಟ್ಟರೂ ಕನ್ನಡದ ಗೀತೆಗೆ ಧ್ವನಿ ಆಗಿದ್ದ ಆಶಾ ಭೋಸ್ಲೆ

ಖ್ಯಾತ ಗಾಯಕಿ ಆಶಾ ಭೋಸ್ಲೆ (Asha Bhosle) ಅವರನ್ನು ಕಳೆದುಕೊಂಡು ಭಾರತದ ಸಂಗೀತ ಲೋಕ ಬಡವಾಗಿದೆ. ಅವರ ಅಗಲಿಕೆಯಿಂದ ತುಂಬಲಾರದ ನಷ್ಟ ಆಗಿದೆ. ಸಾವಿರಾರು ಗೀತೆಗಳ ಮೂಲಕ ಆಶಾ ಭೋಸ್ಲೆ ಅವರು ಜನಮನ ಗೆದ್ದಿದ್ದರು. ಕನ್ನಡದಲ್ಲಿ ಅವರು ಧ್ವನಿ ನೀಡಿದ್ದು 4 ಹಾಡುಗಳಿಗೆ ಮಾತ್ರ. ಆ ಪೈಕಿ ಕೊನೆಯ ಹಾಡು, ಅಂದರೆ ನಾಲ್ಕನೇ ಹಾಡು ಬಿಡುಗಡೆ ಆಗಿಲ್ಲ. ಆ ಗೀತೆಗೆ ವೀರ್ ಸಮರ್ಥ್ ಅವರು ಸಂಗೀತ ನಿರ್ದೇಶನ ಮಾಡಿದ್ದರು. ಕಡಿಮೆ ಸಂಭಾವನೆ ಕೊಟ್ಟರೂ ಕೂಡ ಆಶಾ ಭೋಸ್ಲೆ…

Read More

ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?

ಖ್ಯಾತ ಗಾಯಕಿ ಆಶಾ ಭೋಸ್ಲೆ (Asha Bhosle) ಅವರು ನಿಧನರಾಗಿದ್ದಾರೆ. ಅವರು ಕನ್ನಡದಲ್ಲಿ ಹಾಡಿದ ಮೂರು ಗೀತೆಗಳು ಬಿಡುಗಡೆ ಆಗಿವೆ. ಆದರೆ ನಾಲ್ಕನೇ ಹಾಡು ರಿಲೀಸ್ ಆಗಲೇ ಇಲ್ಲ. ಆ ಗೀತೆಗೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರು ಸಂಗೀತ ನೀಡಿದ್ದರು. ಆ ದಿನಗಳನ್ನು ವೀರ್ ಸಮರ್ಥ್ (Veer Samarth) ಅವರು ಈಗ ನೆನಪಿಸಿಕೊಂಡಿದ್ದಾರೆ. ‘ಮಾಣಿಕ್ಯ’ ಎಂಬ ಸಿನಿಮಾದ ಸಲುವಾಗಿ ಈ ಹಾಡನ್ನು ಸಿದ್ಧಪಡಿಸಲಾಗಿತ್ತು. ಆಶಾ ಭೋಸ್ಲೆ ಅವರಿಂದ ಹಾಡಿಸಬೇಕು ಎಂಬುದು ವೀರ್ ಸಮರ್ಥ್ ಅವರ ಕನಸಾಗಿತ್ತು….

Read More

ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!

ನವದೆಹಲಿ, ಏಪ್ರಿಲ್ 13: ರಾತ್ರಿಯಾಗುತ್ತಿದ್ದಂತೆ ಕಳ್ಳರು ಅಲರ್ಟ್ ಆಗಿ ಬಿಡುತ್ತಾರೆ. ಎಷ್ಟೇ ಬಂದೋಬಸ್ತ್ ಇದ್ದರೂ ಕಳ್ಳರಿಂದ ಅಂಗಡಿ, ಮನೆಗಳನ್ನು ಕಾಪಾಡಿಕೊಳ್ಳುವುದೇ ನಗರಗಳ ಜನರಿಗೆ ದೊಡ್ಡ ತಲೆನೋವು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿರುವ ವಿಡಿಯೋದಲ್ಲಿ ಕಳ್ಳರು ದರೋಡೆ ಮಾಡಲೆಂದು ಅಂಗಡಿಯೊಳಗೆ ನುಗ್ಗುತ್ತಾರೆ. ಆದರೆ, ಅಂಗಡಿಯ ಹೊರಗಿದ್ದ ಜನರು ಆ ಶಾಪ್​ನ ಶಟರ್ ಎಳೆದು ಆ ಕಳ್ಳರನ್ನು ಕೂಡಿಹಾಕುತ್ತಾರೆ. ಇದರಿಂದ ಒಳಗಿರುವ ಕಳ್ಳರು ಗಾಬರಿಯಾಗಿ ಕಿರುಚಾಡುತ್ತಾ ಶಟರ್ ಬಾಗಿಲು ಬಡಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊರಗಿದ್ದ…

Read More

ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್​: ಸಾವಿರರು ಜನರಿಗೆ ಉದ್ಯೋಗವಕಾಶ; ಸಿಎಂ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು, ಏಪ್ರಿಲ್​ 13: ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಇಂದು ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 67ನೇ ಸಭೆ ಮಾಡಲಾಗಿದೆ. 11 ಹೊಸ ಬಂಡವಾಳ ಹೂಡಿಕೆ ಹಾಗೂ 6 ಹೆಚ್ಚುವರಿ ಬಂಡವಾಳ ಹೂಡಿಕೆ ಸೇರಿದಂತೆ ಒಟ್ಟು 17 ಯೋಜನಾ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. 18,430.44 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಸುಮಾರು 15,032 ಜನರಿಗೆ ಉದ್ಯೋಗವಕಾಶ ಸಿಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೋಟ್ಯಂತರ ರೂ…

Read More

ಇದು ಅಂತಿಂಥ ದಾಖಲೆಯಲ್ಲ; ವೈಭವ್ ಸೇರಿದಂತೆ ಮೂವರು ಆಟಗಾರರು ಸೊನ್ನೆಗೆ ಔಟ್..!

ಐಪಿಎಲ್ 2026 ರ 21 ನೇ ಪಂದ್ಯ ಐಪಿಎಲ್ ಇತಿಹಾಸದಲ್ಲೇ ಕಂಡು ಕೇಳರಿಯದೆ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ನಡುವೆ ನಡೆದ ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ ಪ್ರಫುಲ್ ಹಿಂಗೆ ಐಪಿಎಲ್ ಇತಿಹಾಸದಲ್ಲೇ ಯಾವ ಆಟಗಾರನೂ ಮಾಡಿರದ ಮತ್ತು ಮುಂದೆ ಮಾಡಲು ಸಾಧ್ಯವಾಗದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡುವ ಮೂಲಕ ಐಪಿಎಲ್​ಗೆ ಪದಾರ್ಪಣೆ ಮಾಡಿದ ಪ್ರಫುಲ್ ತಾವು ಬೌಲ್ ಮಾಡಿದ ಮೊದಲ ಓವರ್​ನಲ್ಲೇ…

Read More

ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ

ನವದೆಹಲಿ, ಏಪ್ರಿಲ್ 13: ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಇಂದು ಟಿಸಿಎಸ್ ನಾಸಿಕ್‌ನಲ್ಲಿ ನಡೆದ ಲೈಂಗಿಕ ಕಿರುಕುಳ ಆರೋಪಗಳನ್ನು ಟೀಕಿಸಿದ್ದಾರೆ. “ಈ ಘಟನೆ ಗಂಭೀರವಾಗಿದ್ದು, ಕಳವಳಕಾರಿ ಮತ್ತು ದುಃಖಕರದ್ದಾಗಿದೆ” ಎಂದು ಬೇಸರ ಹೊರಹಾಕಿದ್ದಾರೆ. ಟಿಸಿಎಸ್​ (Tata Consultancy Services) ಕಂಪನಿಯ ಹಿರಿಯ ಕಾರ್ಯನಿರ್ವಾಹಕರ ನೇತೃತ್ವದಲ್ಲಿ ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಬಹುರಾಷ್ಟ್ರೀಯ ಕಂಪನಿಯ ಕಚೇರಿಯಲ್ಲಿ 8 ಮಹಿಳಾ ಉದ್ಯೋಗಿಗಳಿಂದ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪಗಳು ಕೇಳಿಬಂದಿತ್ತು….

Read More

ಕಚೇರಿ ಸಮಯ ಬದಲಾವಣೆ: ವಿಜಯಪುರ ಸರ್ಕಾರಿ ಅಧಿಕಾರಿ-ಸಿಬ್ಬಂದಿಗೆ ಹೇಳೋರಿಲ್ಲ, ಕೇಳೋರಿಲ್ಲ

ವಿಜಯಪುರ, ಏಪ್ರಿಲ್ 13: ಜಿಲ್ಲೆಯಲ್ಲಿನ ಸರ್ಕಾರಿ ಇಲಾಖೆಯ ಅಧಿಕಾರಿಗಳು (government offices) ಹಾಗೂ ಸಿಬ್ಬಂದಿ ಅನ್ನ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದೆ. ಕಾರಣ ಯಾರೋಬ್ಬರು ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸುತ್ತಿಲ್ಲ. ಬಿಸಿಲಿನ (summer) ಕಾರಣ ಎಲ್ಲಾ ಸರ್ಕಾರಿ ಇಲಾಖೆಗಳ ಸಮಯ ಬೆಳಿಗ್ಗೆ 8ರಿಂದ ಮದ್ಯಾಹ್ನ 1:30 ರವರೆಗೆ ನಿಗದಿ ಮಾಡಲಾಗಿದೆ. ಆದರೆ 9ಗಂಟೆಯಾದರೂ ಅಧಿಕಾರಿಗಳು, ಸಿಬ್ಬಂದಿ ಕಚೇರಿಗೆ ಆಗಮಿಸದೇ ಸೇವಾ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚುತ್ತಿರುವ ತೀವ್ರ…

Read More

ಸಿದ್ದರಾಮಯ್ಯ ಹೆಸರಿನ ಸೇತುವೆ ಉದ್ಘಾಟನೆ: 6 ದಶಕಗಳ ಕನಸು ನನಸು, 30 ಕಿಮೀ ಸುತ್ತಾಟ ಈಗ 3 ಕಿಮೀಗೆ ಇಳಿಕೆ

ಚಿಕ್ಕಮಗಳೂರು, (ಏಪ್ರಿಲ್ 13): ಎನ್‌ಆರ್‌ಪುರ (NR Pura) ಪಟ್ಟಣದ ಹೊರಹೊಲಯದಲ್ಲಿ ನಿರ್ಮಾಣಗೊಂಡಿರುವ ತಮ್ಮದೇ ಹೆಸರಿನ ಸೇತುವೆಯನ್ನು (Siddaramaiah Bridge) ಸಿಎಂ ಸಿದ್ದರಾಮಯ್ಯ (Siddaramaiah) ಇಂದು (ಏಪ್ರಿಲ್ 13) ಉದ್ಘಾಟಿಸಿದ್ದಾರೆ. ಭದ್ರಾ ಹಿನ್ನೀರಿನ ಹಂದೂರು ಬಳಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಅರ್ಧ ಕಿಲೋ ಮೀಟರ್ ಉದ್ದದ ಸೇತುವೆ ಇದಾಗಿದ್ದು, ಹತ್ತಾರು ಹಳ್ಳಿ ಗ್ರಾಮಸ್ಥರ 6 ದಶಕಗಳ ಕನಸು ನನಸಾಗಿದೆ. ಈ ಸೇತುವೆ ನಿರ್ಮಾಣದಿಂದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ವರದಾನವಾಗಿದ್ದು, ಗ್ರಾಮಸ್ಥರು ಪಟ್ಟಣಕ್ಕೆ ಬರಲು ಮೊದಲು 30…

Read More

IPL 2026: ಇದಕ್ಕಿದ್ದಂತೆ ಐಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ ಬಿಸಿಸಿಐ

ಐಪಿಎಲ್ 2026 ರಲ್ಲಿ ಈಗಾಗಲೇ 20 ಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಪೂರ್ಣ ವೇಳಾಪಟ್ಟಿಯನ್ನು ಕೂಡ ಈಗಾಗಲೇ ಘೋಷಿಸಲಾಗಿದೆ. ಆದಾಗ್ಯೂ, ಲೀಗ್ ಆರಂಭವಾದ ಎರಡು ವಾರಗಳ ಬಳಿಕ ಬಿಸಿಸಿಐ ಇದ್ದಕ್ಕಿದ್ದಂತೆ ವೇಳಾಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಿದೆ. ಅದರಂತೆ ಎರಡು ಪ್ರಮುಖ ಪಂದ್ಯಗಳ ದಿನಾಂಕಗಳು ಮತ್ತು ಸ್ಥಳಗಳನ್ನು ಬದಲಾಯಿಸಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಎರಡು ಪಂದ್ಯಗಳಿಗೆ ಸಂಬಂಧಿಸಿದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2 ಪಂದ್ಯಗಳ ಸ್ಥಳ ಬದಲು ಈ ಬಗ್ಗೆ ಏಪ್ರಿಲ್ 13…

Read More

ಕೇಬಲ್ ಟಿವಿಯಲ್ಲಿ ‘ಜನ ನಾಯಗನ್’ ಸಿನಿಮಾ ಪ್ರಸಾರ ಮಾಡಿದ ವ್ಯಕ್ತಿ ಬಂಧನ

ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿ ದೊಡ್ಡ ವಿವಾದ ಸೃಷ್ಟಿಸಿದೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಸ್ಥಳೀಯ ಕೇಬಲ್ ಟಿವಿ (Cable Tv) ಆಪರೇಟರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಂಬತ್ತೂರು ಜಿಲ್ಲೆಯ ಕರುಮತ್ತಂಪಟ್ಟಿ ನಿವಾಸಿ ಎಸ್. ಪಳನಿಸ್ವಾಮಿ ಎಂಬಾತ ಬಂಧಿತ ಆರೋಪಿ. ಈತ ಆ ಭಾಗದಲ್ಲಿ ‘ರಾಶಿ ಕೇಬಲ್ ಟಿವಿ’ ಎಂಬ ಚಾನೆಲ್…

Read More