Headlines

ರಜನೀಕಾಂತ್​ರ ಭೇಟಿಯಾಗಿ ಪತಿ ಚಿರು ಸರ್ಜಾರ ನೆನೆದ ಮೇಘನಾ – Kannada News | Meghana Raj remembers her late husband Chiru Sarja

ಚಿರಂಜೀವಿ ಸರ್ಜಾ (Chiranjeevi Sarja) ನಿಧನರಾಗಿ ಆರು ವರ್ಷಗಳಾಗುತ್ತಾ ಬಂತು. 2020ರ ಜೂನ್ ತಿಂಗಳಲ್ಲಿ ಹಠಾತ್ತನೆ ಕಣ್ಣು ಮುಚ್ಚಿದರು ಚಿರಂಜೀವಿ ಸರ್ಜಾ. ಪತ್ನಿ ಮೇಘನಾ ಅವರನ್ನು ಅಗಲಿ, ಹುಟ್ಟಲಿದ್ದ ಮಗುವನ್ನು ಸಹ ಕಾಣದೆ ಹೊರಟು ಹೋದರು. ಆದರೆ ಮೇಘನಾ ಅವರು ಮಗನಿಗಾಗಿ ಬದುಕುತ್ತಿದ್ದಾರೆ. ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅವರು ರಜನೀಕಾಂತ್ ಜೊತೆ ಸಿನಿಮಾನಲ್ಲಿ ನಟಿಸಿದ್ದಾರೆ. ರಜನೀಕಾಂತ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿರುವ ಮೇಘನಾ, ಪತಿ ಚಿರು ಸರ್ಜಾ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಇಂದು (ಮೇ…

Read More

ಹುಬ್ಬಳ್ಳಿ ಮರ್ಯಾದೆ ಹತ್ಯೆ: ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಕೆಂಡಾಮಂಡಲ

ಹುಬ್ಬಳ್ಳಿ, (ಡಿಸೆಂಬರ್ 25): ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಗರ್ಭಿಣಿ ಪುತ್ರಿ ಮಾನ್ಯಗಳನ್ನು ತಂದೆಯೇ ಕೊಚ್ಚಿ ಕೊಂದಿದ್ದಾನೆ. ದಲಿತ ಹುಡುಗನ ಮದುವೆಯಾಗಿದ್ದಕ್ಕೆ ಈ ಮರ್ಯಾದೆ ಹತ್ಯೆ ನಡೆದಿದೆ. ಇನ್ನು ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ತಂದೆಯ ಕೃತ್ಯಕ್ಕೆ ಆಕ್ರೋಗಳು ವ್ಯಕ್ತವಾಗುತ್ತಿವೆ. ಇನ್ನು ಕೆಲವರು ಹೆತ್ತು ಹೊತ್ತು ಬೆಳೆಸಿದ ಮಗಳು ಈ ರೀತಿ ಮಾರ್ಯದೆ ತೆಗೆದಿದ್ದು ಎಷ್ಟು ಸರಿ ಎಂದು ಕೊಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಮರ್ಯಾದೆ ಹತ್ಯೆಯನ್ನು ಘಟನೆಯನ್ನು…

Read More

ಚಿನ್ನದ ಚೈನ್​ಗಾಗಿ ನಟಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟಿಗ

ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಭಾನುಕ ರಾಜಪಕ್ಸೆ ಅವರು ನಟಿ ಹರ್ಷಿ ರಸಂಗ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು ರಾಜಪಕ್ಸೆ ನಟಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಒಂದು ಚಿನ್ನದ ಸರ ಎಂಬುದು ವಿಶೇಷ. ಏನಿದು ಪ್ರಕರಣ? ಭಾನುಕ ರಾಜಪಕ್ಸೆ ಹಾಗೂ ನಟಿ ಹರ್ಷಿ ರಸಂಗ ನಡುವೆ ಈ ಹಿಂದೆ ಪ್ರೇಮ ಸಂಬಂಧವಿತ್ತು. ಆ ಸಮಯದಲ್ಲಿ ರಾಜಪಕ್ಸೆ ಅವರು ಚಿನ್ನದ ಸರ ಮತ್ತು…

Read More

ಹಳೆಯ ಟೂತ್‌ಬ್ರಷ್‌ ಎಸೆಯುವ ಬದಲು ಮನೆಯ ಈ ಎಲ್ಲಾ ಕೆಲಸಗಳನ್ನು ಮಾಡಲು ಉಪಯೋಗಿಸಿಕೊಳ್ಳಿ – Kannada News

ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ದೃಷ್ಟಿಯಿಂದ ನಾವೆಲ್ಲರೂ ಹಳೆಯದಾದ, ಮುರಿದ ವಸ್ತುಗಳನ್ನೆಲ್ಲಾ ಮನೆಯಿಂದ ಎಸೆದು ಬಿಡುತ್ತೇವೆ. ಆದರೆ ಏನು ಗೊತ್ತಾ, ಇದರಿಂದ ಉಪಯೋಗವೇ ಇಲ್ಲ ಎಂದು ಬಿಸಾಡುವ ವಸ್ತುಗಳನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳಬಹುದು. ಅಂತಹ ವಸ್ತುಗಳಲ್ಲಿ ಟೂತ್‌ಬ್ರಷ್‌ (toothbrush) ಕೂಡ ಒಂದು. ಸಾಮಾನ್ಯವಾಗಿ ಹಳೆಯ ಟೂತ್‌ಬ್ರಷ್‌ ಅನ್ನು ಎಸೆದು ಬಿಡುತ್ತೇವೆ. ಇದನ್ನು ಎಸೆಯುವ ಬದಲು ಅನೇಕ ಮನೆ ಕೆಲಸಗಳಿಗೆ ಉಪಯೋಗಿಸಬಹುದು, ಇದರ ಸಹಾಯದಿಂದ ಅನೇಕ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಹಾಗಿದ್ದರೆ ಹಳೆಯ ಟೂತ್‌ಬ್ರಷ್‌ ಸಹಾಯದಿಂದ ಯಾವೆಲ್ಲಾ ಮನೆ ಕೆಲಸಗಳನ್ನು…

Read More

IND vs AFG: ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ; ಹೇಗಿರಲಿದೆ ಪಿಚ್ ಹಾಗೂ ಪ್ಲೇಯಿಂಗ್ 11? – Kannada News

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ತಂಡಗಳು ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಎರಡೂ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ 2018 ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 262 ರನ್‌ಗಳಿಂದ ಸೋಲಿಸಿತು. ಈಗ ಎರಡೂ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಈ ಪಂದ್ಯವು ನ್ಯೂ ಚಂಡೀಗಢದ ಮಹಾರಾಜ ಯಾದವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಈ ಪಂದ್ಯದ…

Read More

ತಾನು ಕೆಲಸ ಮಾಡಿದ ಆಫೀಸಿಗೇ 91 ಲಕ್ಷ ರೂ. ಕನ್ನ! ಆರೋಪಿ ಕ್ಯಾಶಿಯರ್ ಅಂದರ್ – Kannada News | Cashier And His Friends Arrested For Stealing Rs 91 Lakh From Builders Office In Bengaluru

ಬೆಂಗಳೂರು, ಫೆಬ್ರವರಿ 27: ಸದಾಶಿವನಗರದಲ್ಲಿರುವ ಬಿಲ್ಡರ್ ನರಸಿಂಹ ಅವರ ಕಚೇರಿಯಲ್ಲಿ ನಡೆದ 91.76 ಲಕ್ಷ ರೂಪಾಯಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಚೇರಿಯ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಧನಂಜಯ್ ಮತ್ತು ಅವನ ಸ್ನೇಹಿತ ಪ್ರವೀಣ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪೊಲೀಸರ ತನಿಖೆಯಿಂದಾಗಿ ಆರೋಪಿಗಳನ್ನು ಬಂಧಿಸಲಾಗಿದ್ದು, ಕಳ್ಳತನವಾದ ಒಟ್ಟು 91,76,000 ರೂಪಾಯಿಗಳ ಪೈಕಿ 81,66,000 ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ. ಇನ್ನೂ ಇಬ್ಬರು ಆರೋಪಿಗಳು ಪತ್ತೆಯಾಗಬೇಕಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ…

Read More

Rakshasutra Colors: ಕೈಗೆ ಕಟ್ಟುವ ರಕ್ಷಾಸೂತ್ರ ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು; ಯಾವ ಬಣ್ಣ ಯಾವ ಗ್ರಹಕ್ಕೆ ಸಂಬಂಧಿಸಿದ್ದು ಗೊತ್ತಾ?

ಕೈಗೆ ಕಟ್ಟುವ ರಕ್ಷಾಸೂತ್ರImage Credit source: Pinterest ಹಿಂದೂ ಧರ್ಮದಲ್ಲಿ ಶುಭ ಕಾರ್ಯ, ಪೂಜೆ ಮತ್ತು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕೈಗೆ ಪವಿತ್ರವಾದ ರಕ್ಷಾಸೂತ್ರವನ್ನು (ಕಾಲವ ಅಥವಾ ಕೈದಾರ) ಕಟ್ಟುವ ಸಂಪ್ರದಾಯವಿದೆ. ಇದನ್ನು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ರಕ್ಷಾಸೂತ್ರದ ಬಣ್ಣ ಮತ್ತು ಅದನ್ನು ಧರಿಸುವ ವಿಧಾನವು ವ್ಯಕ್ತಿಯ ದೇಹದ ಶಕ್ತಿ (Energy) ಮತ್ತು ಅದೃಷ್ಟದ ಮೇಲೆ ತೀವ್ರ ಪ್ರಭಾವ ಬೀರುತ್ತದೆ. ತಪ್ಪು ಬಣ್ಣ ಅಥವಾ ತಪ್ಪು ವಿಧಾನದಲ್ಲಿ ದಾರವನ್ನು ಕಟ್ಟಿಕೊಳ್ಳುವುದರಿಂದ ನಕಾರಾತ್ಮಕ ಪರಿಣಾಮಗಳು…

Read More

Daily Devotional: ಮನೆ ಹತ್ತಿರ ಪಾರಿಜಾತ ಗಿಡ ಇರಬಹುದಾ? – Kannada News | Daily Devotional: The Divine Parijatha, Benefits of Growing This Auspicious Plant Near Your Home

ಬೆಂಗಳೂರು, ಫೆಬ್ರುವರಿ​ 09: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆ ಹತ್ತಿರ ಪಾರಿಜಾತ ಗಿಡ ಇರಬಹುದಾ?ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಮನೆಯ ಹತ್ತಿರ ಸಣ್ಣ ಪುಟ್ಟ ಗಿಡಗಳನ್ನು ಬೆಳೆಸುವುದು ಸಾಮಾನ್ಯ. ಆದರೆ ಕೆಲವು ಗಿಡಗಳು ಆಧ್ಯಾತ್ಮಿಕ ಮತ್ತು ವೈಜ್ಞಾನಿಕವಾಗಿ ವಿಶೇಷ ಮಹತ್ವವನ್ನು ಹೊಂದಿವೆ. ಅವುಗಳಲ್ಲಿ ಪಾರಿಜಾತ ಗಿಡವು ಅತಿ ಪ್ರಮುಖವಾದುದು. ಪಾರಿಜಾತವನ್ನು ದೇವಲೋಕದ ಗಿಡ ಎಂದು ಕರೆಯಲಾಗುತ್ತದೆ. ಇದರ ಹೂವುಗಳು ರಾತ್ರಿಯ ಸಮಯದಲ್ಲಿ ಸುಗಂಧವನ್ನು ಬೀರುತ್ತವೆ. ಮನೆಯಲ್ಲಿ ಪಾರಿಜಾತ ಗಿಡವನ್ನು ಬೆಳೆಸಬಹುದೇ ಎಂಬ ಪ್ರಶ್ನೆಗೆ ಉತ್ತರ ಹೌದು….

Read More

Nepal Bus Accident: ನೇಪಾಳದ ತ್ರಿಶೂಲಿ ನದಿಗೆ ಉರುಳಿದ ಬಸ್ 18 ಮಂದಿ ಸಾವು – Kannada News | Nepal Bus Accident: 18 Dead, Many Injured as Bus Plunges into Trishuli River

ಕಠ್ಮಂಡು, ಫೆಬ್ರವರಿ 23: ನೇಪಾಳ ರಾಜಧಾನಿಯಿಂದ ಸುಮಾರು 90 ಕಿ.ಮೀ ದೂರದಲ್ಲಿ ಭೀಕರ ಬಸ್ ಅಪಘಾತ(Bus Accident) ಸಂಭವಿಸಿದೆ. ಸೋಮವಾರ ಬೆಳಿಗ್ಗೆ ನೇಪಾಳದ ಧಾಡಿಂಗ್ ಜಿಲ್ಲೆಯ ಗಜುರಿ ಬಳಿ ಪ್ರಯಾಣಿಕ ಬಸ್ ತ್ರಿಶೂಲಿ ನದಿಗೆ ಬಿದ್ದು ಕನಿಷ್ಠ 18 ಜನರು ಸಾವನ್ನಪ್ಪಿದ್ದು, 26 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೋಖರಾದಿಂದ ಕಠ್ಮಂಡುವಿಗೆ ಬರುತ್ತಿದ್ದ ಬಸ್ ಬೆಳಗಿನ ಜಾವ 1.30 ಕ್ಕೆ ಕಠ್ಮಂಡುವಿನಿಂದ ಪಶ್ಚಿಮಕ್ಕೆ ಸುಮಾರು 90 ಕಿ.ಮೀ ದೂರದಲ್ಲಿರುವ ಪೃಥ್ವಿ ಹೆದ್ದಾರಿಯಲ್ಲಿ ತ್ರಿಶೂಲಿ ನದಿಗೆ ಬಿದ್ದು ಈ ಅಪಘಾತ…

Read More

ರಜಾ ದಿನಗಳಲ್ಲಿ ಬೆಕ್ಕುಗಳಿಗೆ ಆಹಾರ ಕೊಟ್ಟು 21 ಲಕ್ಷ ರೂ.ಗಳಿಸಿದ ವ್ಯಕ್ತಿ – Kannada News | Holiday Cat Care King: Chinese Man Makes Rs 21 Lakhs in Pet Feeding Business

ಚೀನಾ, ಮಾರ್ಚ್​ 04: ಸಾಮಾನ್ಯವಾಗಿ ಬೆಕ್ಕು(Cat) ಅಥವಾ ನಾಯಿಯನ್ನು ಬಹುತೇಕ ಎಲ್ಲರ ಮನೆಯಲ್ಲಿ ಸಾಕುತ್ತಾರೆ. ತಾವೇ ಆಹಾರ ಕೊಟ್ಟು ಮನೆಯ ಮಕ್ಕಳಂತೆ ಅವುಗಳನ್ನು ನೋಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವು ಶ್ರೀಮಂತರು ಅವುಗಳಿಗಾಗಿ ಸಹಾಯಕರನ್ನು ನೇಮಿಸಿಕೊಂಡಿರುತ್ತಾರೆ. ಚೀನಾ ವ್ಯಕ್ತಿಯೊಬ್ಬರು ರಜಾ ದಿನಗಳಲ್ಲಿ ಬೆಕ್ಕುಗಳಿಗೆ ಆಹಾರ ಕೊಟ್ಟು ಬರೋಬ್ಬರಿ 21 ಲಕ್ಷ ರೂ. ಗಳಿಸಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಬೆಕ್ಕುಗಳನ್ನು ನೋಡಿಕೊಳ್ಳುವ ಮತ್ತು ಆಹಾರ ನೀಡುವ ಕೆಲಸವು ಉದ್ಯಮವಾಗಿ ಬೆಳೆದಿದೆ. ಅದರಲ್ಲಿ…

Read More