Headlines

ಬೀದಿ ಬದಿ ವ್ಯಾಪಾರಿಯ ಮನೆಗೆ ಕರೆದು ಉಡುಗೊರೆ ಕೊಟ್ಟು ಸನ್ಮಾನಿಸಿದ ರಜನೀಕಾಂತ್: ಕಾರಣ? – Kannada News | Rajinikanth facilitated a street food vendor know why

ರಜನೀಕಾಂತ್ (Rajinikanth) ಕೇವಲ ಸ್ಟಾರ್ ನಟ ಮಾತ್ರವೇ ಅಲ್ಲ, ಅವರೊಬ್ಬ ಅದ್ಭುತ ವ್ಯಕ್ತಿ. ತಾವು ಒಳಿತು ಮಾಡುವ ಜೊತೆಗೆ ಒಳಿತು ಮಾಡುವವರಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನೂ ಸಹ ಮಾಡುತ್ತಲೇ ಇರುತ್ತಾರೆ. ತಮಗೆ ಹಿಡಿಸಿದ ವ್ಯಕ್ತಿ, ವಿಷಯದ ಬಗ್ಗೆ ಬಹಿರಂಗವಾಗಿ ಹೇಳಿ ಅವರ ಮೌಲ್ಯ ಹೆಚ್ಚು ಮಾಡುತ್ತಾರೆ. ‘ಕಾಂತಾರ’ ಸಿನಿಮಾ ಬಿಡುಗಡೆ ಆದಾಗ ಸಿನಿಮಾ ನೋಡಿ ಮೆಚ್ಚಿ, ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿ, ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿ, ಸನ್ಮಾನ ಮಾಡಿದ್ದರು ರಜನೀಕಾಂತ್. ಇದೀಗ ಬೀದಿ ಬದಿ…

Read More

‘ಸಲಾರ್ 2’ ಸಿನಿಮಾ ನಿಂತೇ ಹೋಯ್ತೆ? ಪ್ರಭಾಸ್-ನೀಲ್ ಮಾಡಿರುವ ಚರ್ಚೆ ಏನು? – Kannada News | Did Prabhas starrer Salaar 2 movie halted what is the new update

‘ಬಾಹುಬಲಿ 2’ (Bahubali 2) ಸಿನಿಮಾದ ಬಳಿಕ ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್ ಅನ್ನು ಗೆಲುವಿನ ಹಳಿಗೆ ಮರಳಿ ತಂದಿದ್ದು ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ. ನೀಲ್ ಅವರೇ ನಿರ್ದೇಶಿಸಿದ್ದ ಕನ್ನಡದ ‘ಉಗ್ರಂ’ ಸಿನಿಮಾದ ಕತೆಯನ್ನೇ ಒಳಗೊಂಡ ಆದರೆ ಪ್ರಭಾಸ್​​ ಸ್ಟಾರ್​​ಡಮ್​​ಗೆ ತಕ್ಕಂತೆ ಅದ್ಧೂರಿತನದಿಂದ ನಿರ್ಮಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಯಶಸ್ಸು ಕಂಡಿತ್ತು. ‘ಸಲಾರ್ 2’ ಸಹ ಬರಲಿದೆ ಎಂದು ‘ಸಲಾರ್’ ಸಿನಿಮಾದ ಅಂತ್ಯದಲ್ಲಿ ಘೋಷಿಸಲಾಗಿತ್ತು. ಆದರೆ ‘ಸಲಾರ್’ ಬಿಡುಗಡೆ ಆಗಿ ಮೂರು ವರ್ಷಗಳಾಗುತ್ತಾ…

Read More

ಬರೀ ಸಿಕ್ಸ್ ಸಿಕ್ಸ್ ಸಿಕ್ಸ್​… ಐಪಿಎಲ್ ಬಗ್ಗೆ ಲಿವಿಂಗ್‌ಸ್ಟೋನ್ ಅಸಮಾಧಾನ! – Kannada News

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸನ್​​ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ಆಲ್​​ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಇದೀಗ ಐಪಿಎಲ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ‘ಸ್ಟಿಕ್ ಟು ಕ್ರಿಕೆಟ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಅವರು, ಐಪಿಎಲ್ ಸಂಪೂರ್ಣವಾಗಿ ಬ್ಯಾಟರ್‌ಗಳ ಆಟವಾಗಿ ಬದಲಾಗಿದ್ದು, ಬೌಲರ್‌ಗಳಿಗೆ ಯಾವುದೇ ಗೌರವ ಇಲ್ಲದಂತಾಗಿದೆ ಎಂದು ಮುಕ್ತವಾಗಿ ಹೇಳಿಕೆ ನೀಡಿದ್ದಾರೆ. ಬರೀ ಸಿಕ್ಸ್ ಸಿಕ್ಸ್​: ಪಂದ್ಯಾವಳಿಯಲ್ಲಿ ಕೇವಲ ರನ್‌ಗಳ ಮಳೆ ಹರಿಸುವುದನ್ನೇ ಗುರಿಯಾಗಿಸಿಕೊಂಡಿರುವುದರ ಬಗ್ಗೆ ಲಿವಿಂಗ್‌ಸ್ಟೋನ್ ಬೇಸರ ವ್ಯಕ್ತಪಡಿಸಿದ್ದಾರೆ. “ಬ್ಯಾಟರ್‌ಗಳು ಕೇವಲ 6, 6,…

Read More

ಚೆಂಡು ವಿಕೆಟ್​ಗೆ ತಾಗದಿದ್ದರೂ ಔಟ್ ನೀಡಿದ್ದೇಕೆ? ಇಲ್ಲಿದೆ ಐಪಿಎಲ್ ನಿಯಮ – Kannada News | IPL 2026: Angkrish Raghuvanshi Run out explained

ಐಪಿಎಲ್ 2026ರ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯವು ಒಂದು ಅಪರೂಪದ ಮತ್ತು ವಿವಾದಾತ್ಮಕ ರನೌಟ್​​ಗೆ ಸಾಕ್ಷಿಯಾಯಿತು. ಕೆಕೆಆರ್ ತಂಡದ ಯುವ ಬ್ಯಾಟರ್ ಅಂಗ್​​ಕ್ರಿಶ್​ ರಘುವಂಶಿ ಅವರು ‘ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್’ (ಫೀಲ್ಡಿಂಗ್‌ಗೆ ಅಡ್ಡಿಪಡಿಸುವುದು) ನಿಯಮದಡಿ ಔಟ್ ಆಗುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದಾರೆ. ಪಂದ್ಯದ 5ನೇ ಓವರ್‌ನಲ್ಲಿ ಪ್ರಿನ್ಸ್ ಯಾದವ್ ಎಸೆದ ಚೆಂಡನ್ನು ಬಾರಿಸಿದ ರಘುವಂಶಿ, ಒಂದು ರನ್ ಪಡೆಯಲು ಓಡಿದರು. ಆದರೆ ಅತ್ತ…

Read More

ಬೆಂಗಳೂರಿನ ಈ ಊರಿನಲ್ಲಿ ನಡೆಯುತ್ತೇ ಅಪರೂಪದ ವಜ್ರಾಭರಣಗಳ ಜಾತ್ರೆ – Kannada News | Kempegowda’s Heritage: Devanahalli’s Grand Kote Venugopala Swamy Festival and Rare VajrabharaNa

ಬೆಂಗಳೂರು, ಫೆ.3: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ಕೋಟೆ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಅದ್ದೂರಿ ರಥೋತ್ಸವ (Devanahalli Ratha Utsav) ಮತ್ತು ಅಪರೂಪದ ವಜ್ರಾಭರಣಗಳ ಜಾತ್ರೆ. ದೇವನಹಳ್ಳಿ ಎಂದರೆ ಕೇವಲ ವಿಮಾನ ನಿಲ್ದಾಣ ಮಾತ್ರವಲ್ಲ, ಶತಮಾನಗಳ ಇತಿಹಾಸವಿರುವ ರಾಜ-ಮಹಾರಾಜರ ಕಾಲದ ವೈಭವಕ್ಕೂ ಸಾಕ್ಷಿ. ನಾಡಪ್ರಭು ಕೆಂಪೇಗೌಡರ ಪೂರ್ವಿಕರು ಈ ದೇವಾಲಯಕ್ಕೆ ಬೆಲೆಕಟ್ಟಲಾಗದ ವಜ್ರಾಭರಣಗಳನ್ನು ಕಾಣಿಕೆಯಾಗಿ ನೀಡಿದ್ದರು. ರಾಜರ ಕಾಲ ಮುಗಿದ ನಂತರ ಈ ಆಭರಣಗಳು ಸರ್ಕಾರದ ಖಜಾನೆ ಸೇರಿವೆ. ವರ್ಷಕ್ಕೊಮ್ಮೆ ನಡೆಯುವ ಈ…

Read More

Video: ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ – Kannada News | Tiger Enters Village Near Bandhavgarh, Injures Man

ಉಮಾರಿಯಾ, ಡಿಸೆಂಬರ್ 30: ಮಧ್ಯಪ್ರದೇಶದ ಬಾಂಧವ್‌ಗಢ ಹುಲಿ ಅಭಯಾರಣ್ಯದ ಹೊರವಲಯದಲ್ಲಿರುವ ಹಳ್ಳಿಯೊಂದಕ್ಕೆ ಸೋಮವಾರ ಹುಲಿಯೊಂದು ನುಗ್ಗಿ, ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ, ನಂತರ ಮಂಚದ ಮೇಲೆ ಮಲಗಿರುವ ಘಟನೆ ನಡೆದಿದೆ. ಹುಲಿ ಗೋಪಾಲ್ ಕೋಲ್ ಎಂಬ ಯುವಕನ ಮೇಲೆ ದಾಳಿ ಮಾಡಿ, ಒಂದೇ ದಾಳಿಯಲ್ಲಿ ಅವರನ್ನು ನೆಲಕ್ಕೆ ಉರುಳಿಸಿತ್ತು. ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಪ್ರಥಮ ಚಿಕಿತ್ಸೆಗಾಗಿ ಕಟ್ನಿ ಜಿಲ್ಲೆಯ ಬರ್ಹಿ ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಟ್ನಿಗೆ ಕರೆದೊಯ್ಯಲಾಯಿತು, ಅವರ ಜೊತೆ ಬಾಂಧವಗಢ…

Read More

ಮಧ್ಯಪ್ರಾಚ್ಯದಲ್ಲಿ ಯುದ್ಧ: ಹೊರದೇಶಗಳಲ್ಲಿ ಸಿಲುಕಿರುವ ರಕ್ಷಣೆಗೆ ಕೋಲಾರ ಜಿಲ್ಲಾಡಳಿತದಿಂದ ಸಹಾಯವಾಣಿ – Kannada News | Kolar district administration sets up helpline for residents stranded abroad amid Middle East war

ಕೋಲಾರ, ಮಾರ್ಚ್​ 01: ಅಮೆರಿಕ ಮತ್ತು ಇಸ್ರೇಲ್​ ಜಂಟಿ ದಾಳಿಯಲ್ಲಿ 201ಕ್ಕೂ ಹೆಚ್ಚು ಇರಾನಿಯನ್ನರು ಸಾವನ್ನಪ್ಪಿದ್ದಾರೆ. ಇರಾನ್​ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮನೈ ಕೂಡ ಹತ್ಯೆವಾಗಿದ್ದಾರೆ. ಮಧ್ಯ ಪ್ರಾಚ್ಯ ದೇಶಗಳಲ್ಲಿ (Middle East Conflict) ಯುದ್ಧದ ವಾತಾವರಣ ಹಿನ್ನೆಲೆ ಹೊರದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಸಹಾಯವಾಣಿ ಪ್ರಕಟಿಸಲಾಗಿದೆ. ಈ ಬಗ್ಗೆ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಹಿತಿ ನೀಡಿದ್ದಾರೆ. ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧದ ವಾತಾವರಣ ಹಿನ್ನೆಲೆ ಎಲ್ಲೆಡೆ ವಿಮಾನ ಹಾರಾಟ ರದ್ದು ಮಾಡಲಾಗಿದೆ. ಪರಿಣಾಮ ದುಬೈ ಸೇರಿದಂತೆ…

Read More

National Dentists Day 2026: ಇಂದು ರಾಷ್ಟ್ರೀಯ ದಂತವೈದ್ಯರ ದಿನ; ನಗುವಿನ ಹಿಂದಿನ ನಿಜವಾದ ಶಿಲ್ಪಿಗಳು – Kannada News | National Dentists’ Day: Why Oral Health and Your Dentist’s Role Matter

ಒಂದು ಸುಂದರವಾದ ನಗು ಸಾವಿರ ಮಾತುಗಳನ್ನು ಹೇಳುತ್ತದೆ. ಆದರೆ ಆ ನಗುವಿನ ಹಿಂದೆ ಇರುವ ನಿಜವಾದ ಶಿಲ್ಪಿಗಳು ದಂತವೈದ್ಯರು. ನಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿ, ನೋವನ್ನು ನಿವಾರಿಸಿ, ಆತ್ಮವಿಶ್ವಾಸದ ನಗುವನ್ನು ನೀಡುವವರು ಇವರೇ. ಈ ಮಹತ್ವದ ಸೇವೆಯನ್ನು ಗೌರವಿಸಲು ಪ್ರತಿ ವರ್ಷ ಮಾರ್ಚ್ 6 ರಂದು ರಾಷ್ಟ್ರೀಯ ದಂತವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ದಂತವೈದ್ಯರ ಸೇವೆಯನ್ನು ಗುರುತಿಸುವುದರ ಜೊತೆಗೆ, ಬಾಯಿ ಮತ್ತು ಹಲ್ಲಿನ ಆರೋಗ್ಯದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೂ ಈ ದಿನದ ಪ್ರಮುಖ ಉದ್ದೇಶವಾಗಿದೆ….

Read More

‘ಪ್ರಶಾಂತ್ ನೀಲ್ ಅವಕಾಶ ಕೊಡಲಿಲ್ಲ, ಆದರೆ ಅದೃಷ್ಟ ಕೈ ಹಿಡಿಯಿತು’ – Kannada News | Malavika Mohanan missed chance to act in Salaar then got chance in The Raja Saab

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ನಟಿಯರಿದ್ದಾರೆ. ಬಾಲಿವುಡ್​ನಲ್ಲಿ (Bollywood) ಈಗ ಜನಪ್ರಿಯವಾಗಿರುವ ಕೆಲ ಯುವ ಮತ್ತು ‘ಸ್ಟಾರ್’ ನಟಿಯರಿಗೆ ಹೋಲಿಸಿದರೆ ದಕ್ಷಿಣ ಭಾರತದ ನಟಿಯರು ಬಹಳ ಪ್ರತಿಭಾವಂತರು, ನಟನೆ ಬಲ್ಲವರು ಸಹ. ಬಾಲಿವುಡ್ ನಟಿಯರಂತೆ ಗ್ಲಾಮರ್ ಮತ್ತು ಜೀರೋ ಸೈಜ್, ಬಿಕಿನಿ ದೇಹ ಇಲ್ಲದಿದ್ದರೂ ಪ್ರತಿಭೆಗಂತೂ ಕೊರತೆ ಇಲ್ಲ. ಅಂಥಹಾ ನಟಿಯರಲ್ಲಿ ಮಾಳವಿಕಾ ಮೋಹನನ್ ಸಹ ಒಬ್ಬರು. ಈ ಹಿಂದೆ ಕನ್ನಡದ ‘ನಾನು ಮತ್ತು ವರಲಕ್ಷ್ಮಿ’ ಸಿನಿಮಾನಲ್ಲಿ ನಟಿಸಿರುವ ಮಾಳವಿಕಾ ಮೋಹನನ್, ಆ ನಂತರ ತಮ್ಮ…

Read More

ದಿನ ಭವಿಷ್ಯ: ಇಂದು ಈ ರಾಶಿಯವರನ್ನು ಎಲ್ಲದಕ್ಕೂ ಅತಿಯಾಗಿ ಬಳಸಿಕೊಳ್ಳುವರು – Kannada News | Horoscope May 15 Friday 2026; Dina Rashi Bhavishya Today, Checkout the details here

ಮೇಷ ರಾಶಿ: ಇಷ್ಟವಿಲ್ಲದ ವಿಚಾರಗಳೇ ನಿಮ್ಮ ಸುತ್ತ ಮಾತನಾಡಿ ಮಾನಸಿಕ ಹಿಂಸೆ ಕೊಡುವರು. ಇಂದು ಸ್ವಲ್ಪ ಮಟ್ಟಿಗೆ ಆರ್ಥಿಕ ಬೆಳವಣಿಗೆ ಕಾಣಿಸಿ ಸಮಾಧಾನವಾಗುವುದು. ಹಣಕಾಸು ಯೋಜನೆಗಳಲ್ಲಿ ಸ್ಪಷ್ಟತೆ ಇರಲಿ. ನಿದ್ದೆಯ ಕೊರತೆ ದೈನಂದಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರ‌ ಮಾತಿನಿಂದ ನಿಮ್ಮ ವ್ಯಕ್ತಿತ್ವವು ಬದಲಾಗುವುದು. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ವೃಷಭ ರಾಶಿ: ಆಹಾರ ವ್ಯತ್ಯಾಸದಿಂದ ಉದರ ಬಾಧೆ ಹೆಚ್ಚಾಗುವುದು. ಹಿರಿಯರ‌ ಸೇವೆಯ ಬಗ್ಗೆ ಹೆಮ್ಮೆ ಇರಲಿದೆ….

Read More