Headlines

40 ವಿಕೆಟ್​​ಗಳು… ಹೊಸ ದಾಖಲೆಗೆ ಸಾಕ್ಷಿಯಾದ ಪಾಕಿಸ್ತಾನ್ vs ವೆಸ್ಟ್ ಇಂಡೀಸ್ ಪಂದ್ಯ – Kannada News | West Indies and Pakistan Script Test History!

ವೆಸ್ಟ್ ಇಂಡೀಸ್‌ನಲ್ಲಿ ಈವರೆಗೆ ಒಟ್ಟು 273 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಆದರೆ, ಈ ಹಿಂದಿನ ಯಾವುದೇ ಪಂದ್ಯದಲ್ಲೂ ದಾಖಲಾಗದಂತಹ ಅಪರೂಪದ ದಾಖಲೆಗೆ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯ ಸಾಕ್ಷಿಯಾಗಿದೆ. ಅದು ಕೂಡ 40 ವಿಕೆಟ್​ಗಳ ಕಬಳಿಕೆಯೊಂದಿಗೆ..! ಟ್ರಿನಿಡಾಡ್​​ನ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 40 ವಿಕೆಟ್​ಗಳು ಉರುಳಿದ್ದವು. ಈ 40 ವಿಕೆಟ್​ಗಳನ್ನು ಕಬಳಿಸಿರುವುದು ವೇಗಿಗಳು ಎಂಬುದು ವಿಶೇಷ. ಅಂದರೆ…

Read More

ರಾತ್ರಿಯಾದ್ರೆ ಸಾಕು ಚಿರತೆ ಭಯ: ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಪ್ರತ್ಯಕ್ಷವಾದ ಚಿರತೆ – Kannada News | Leopard in Bengaluru: Forest Dept Fails to Capture Repeatedly Sighted Big Cat

ಬೆಂಗಳೂರು, ಜು.30: ಬ್ಯಾಡರಹಳ್ಳಿ ನಿವಾಸಿಗಳಿಗೆ ಚಿರತೆ ಕಾಟ ತಪ್ಪುತ್ತಿಲ್ಲ. ರಾತ್ರಿಯಾದ್ರೆ ಪದೇಪದೇ ಪ್ರತ್ಯಕ್ಷವಾಗ್ತಿರುವ ಚಿರತೆ, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜುಲೈ ತಿಂಗಳಿನಲ್ಲಿ ಇದು ಆರನೇ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದು, ಕಳೆದ ರಾತ್ರಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮತ್ತೊಮ್ಮೆ ದರ್ಶನ ನೀಡಿದೆ. ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಬೋನ್ ಇಟ್ಟು ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರಂಭದಲ್ಲಿ ಬೋನ್‌ ನಲ್ಲಿ ಕೋಳಿ ಇಡಲಾಗಿತ್ತು, ಆದರೆ ಈಗ…

Read More

ಚೆನ್ನಮ್ಮನವರ 11ನೇ ದಿನದ ಕಾರ್ಯ: ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ಮೌನಕ್ಕೆ ಜಾರಿದ ದೇವೇಗೌಡರು – Kannada News | HD Devegowda Offers Prayers at Chennamma’s Memorial During 11th Day Ceremony

ಹಾಸನ, ಜುಲೈ 30: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ದಿವಂಗತ ಪತ್ನಿ ಚೆನ್ನಮ್ಮನವರ ಪುಣ್ಯ ಸ್ಮರಣೆ ಅಂಗವಾಗಿ ಮಾವಿನಕೆರೆ ಬಳಿಯ ಸಮಾಧಿ ಸ್ಥಳದಲ್ಲಿ ಮೊದಲ ಪೂಜೆ ಸಲ್ಲಿಸಿದರು. ಪತ್ನಿಯ ಸಮಾಧಿಗೆ ಹೂವಿನ ಹಾರ ಹಾಕಿ, ಮಲ್ಲಿಗೆ ಹೂಗಳನ್ನು ಅರ್ಪಿಸಿ ನಮಿಸಿದರು. ನಂತರ ಅಗಲಿದ ಪತ್ನಿ ಚೆನ್ನಮ್ಮನವರ ನೆನಪಿನಲ್ಲಿ ಸಮಾಧಿ ಬಳಿ ಮೌನವಾಗಿ ಕುಳಿತು ಭಾವುಕರಾದರು. ಚೆನ್ನಮ್ಮನವರ ಉತ್ತರಕ್ರಿಯೆ ಹಿನ್ನೆಲೆಯಲ್ಲಿ ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಈ ಪೂಜಾ ಕಾರ್ಯಕ್ರಮಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರು…

Read More

ಇತಿಹಾಸ ಬರೆದ ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್ – Kannada News | Sudeep sends special gift to PV Sindhu on her win in Japan

ಕಿಚ್ಚ ಸುದೀಪ್ (Kichcha Sudeep) ಅದ್ಭುತ ನಟ, ನಿರ್ದೇಶಕ ಆಗಿರುವ ಜೊತೆಗೆ ಕ್ರೀಡಾಪಟು ಮತ್ತು ಕ್ರೀಡಾಪ್ರೇಮಿ ಸಹ. ಪ್ರತಿ ವರ್ಷವೂ ತಂಡವೊಂದನ್ನು ಕಟ್ಟಿಕೊಂಡು ಕ್ರಿಕೆಟ್ ಆಡುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿದ್ದಾರೆ ಸುದೀಪ್. ಕ್ರಿಕೆಟ್ ಎಂದರೆ ಎಲ್ಲಿಲ್ಲದ ಉತ್ಸಾಹದಿಂದ ಫೀಲ್ಡ್​​ಗೆ ಇಳಿಯುತ್ತಾರೆ. ಕ್ರಿಕೆಟ್ ಆಡುವುದು ಮಾತ್ರವೇ ಅಲ್ಲದೆ ಆಟದ ಬಗ್ಗೆ ಅಪಾರ ಪ್ರೀತಿ, ಗೌರವಗಳನ್ನು ಸಹ ಹೊಂದಿದ್ದಾರೆ. ಅಂದಹಾಗೆ ಸುದೀಪ್ ಅವರ ಕ್ರೀಡಾ ಪ್ರೀತಿ ಕ್ರಿಕೆಟ್​​ಗೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ಕ್ರೀಡೆಯನ್ನಾಗಲಿ, ಕ್ರೀಡಾಪಟುವನ್ನಾಗಲಿ ಅವರು ಗೌರವದಿಂದ ಕಾಣುತ್ತಾರೆ. ಇದಕ್ಕೆ…

Read More

ಮಂಡ್ಯದಲ್ಲಿ ಭುಗಿಲೆದ್ದ ಕಾವೇರಿ ವಿವಾದದ ಆಕ್ರೋಶ: ತಮಿಳುನಾಡು ಸಿಎಂ ವಿಜಯ್ ಸಿನಿಮಾ ಜನನಾಯಗನ್ ಪ್ರದರ್ಶನ ತಡೆಗೆ ಯತ್ನ – Kannada News | Mandya Protest Against Tamil Nadu CM Vijay’s Jana Nayagan Movie Over Cauvery Water Dispute

ಮಂಡ್ಯ, ಜುಲೈ 30: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಕನ್ನಡಪರ ಸಂಘಟನೆಗಳ ಆಕ್ರೋಶ ತೀವ್ರಗೊಂಡಿದೆ. ನಗರದ ಗುರುಶ್ರೀ ಚಿತ್ರಮಂದಿರದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ನಟಿಸಿರುವ ‘ಜನನಾಯಗನ್’ ಸಿನಿಮಾ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿ, ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಲು ಸಂಘಟನೆಗಳು ಯತ್ನಿಸಿವೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ಖ್ಯಾತೆ ತೆಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಸಿನಿಮಾ ಪ್ರದರ್ಶನ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಸಿನಿಮಾದ…

Read More

Job Interview: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ – Kannada News | How to Ace Your Next Job Interview: Key Tips and Mistakes to Avoid

ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಪ್ರತಿಯೊಬ್ಬರಿಗೂ ಸಂದರ್ಶನ (Job Interview) ಎಂಬುದು ಅತ್ಯಂತ ಮಹತ್ವದ ಹಾಗೂ ನಿರ್ಣಾಯಕ ಹಂತವಾಗಿದೆ. ನಿಮ್ಮ ಬಳಿ ಉತ್ತಮ ಶೈಶ್ಚಿಕ ಅರ್ಹತೆ, ಅನುಭವ ಮತ್ತು ಕೌಶಲ್ಯಗಳಿದ್ದರೂ, ಕೆಲವೊಮ್ಮೆ ಕಚೇರಿಯಲ್ಲಿ ಮಾಡುವ ಸಣ್ಣ-ಪುಟ್ಟ ತಪ್ಪುಗಳಿಂದಲೇ ಕೈಗೆ ಸಿಕ್ಕ ಉತ್ತಮ ಉದ್ಯೋಗದ ಅವಕಾಶ ಜಾರಿಹೋಗಬಹುದು. ಸಂದರ್ಶನದಲ್ಲಿ ಯಶಸ್ಸು ಗಳಿಸಲು ಸರಿಯಾದ ಸಿದ್ಧತೆ, ಆತ್ಮವಿಶ್ವಾಸ ಹಾಗೂ ವೃತ್ತಿಪರ ವರ್ತನೆ ಅತ್ಯಗತ್ಯ. ಹಾಗಿದ್ದರೆ, ಸಂದರ್ಶನಕ್ಕೆ ತೆರಳುವ ಮುನ್ನ ನೀವು ತಪ್ಪದೇ ನೆನಪಿನಲ್ಲಿಡಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ. ಕಂಪನಿಯ ಬಗ್ಗೆ ಪೂರ್ಣ ಮಾಹಿತಿ…

Read More

ನಿರ್ಭಯವಾಗಿ ಕರ್ತವ್ಯ ನಿರ್ವಹಿಸಿ, ಜವಾಬ್ದಾರಿ ನನ್ನದು, ಪೆಲೆಟ್ ಗನ್ ವಿವಾದದ ನಡುವೆ ಸಿಬ್ಬಂದಿಗೆ ಧೈರ್ಯ ತುಂಬಿದ ಸಿಆರ್​ಪಿಎಫ್ ಮುಖ್ಯಸ್ಥ – Kannada News | CRPF Chief Assures Personnel of Full Support Amid Crowd Control Debate

ನವದೆಹಲಿ, ಜುಲೈ 30: ದೆಹಲಿಯಲ್ಲಿ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪ ಭಾರಿ ರಾಜಕೀಯ ಕಾಡ್ಗಿಚ್ಚು ಹೊತ್ತಿಸಿರುವ ಬೆನ್ನಲ್ಲೇ, ಸಿಆರ್‌ಪಿಎಫ್ (CRPF) ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ (ಜಿ.ಪಿ.) ಸಿಂಗ್ ಅವರು ತಮ್ಮ ಸಿಬ್ಬಂದಿಯ ಬೆನ್ನಿಗೆ ನಿಂತಿದ್ದಾರೆ. ಸಾರ್ವಜನಿಕ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಾಗ ನೀವು ಕೈಗೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ನಾನೇ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಯಾವುದೇ ಭಯವಿಲ್ಲದೆ ನಿಮ್ಮ ಕರ್ತವ್ಯವನ್ನು ಮುಂದುವರೆಸಿ…

Read More

‘ರಾಮಾಯಣ’ ಟ್ರೈಲರ್ ಬಿಡುಗಡೆ ಆದರೆ ಟ್ರೆಂಡ್ ಆಗುತ್ತಿರುವುದು ಪ್ರಭಾಸ್, ಏಕೆ? – Kannada News | Ramayana movie trailer released but Prabhas’s Adipurush is trending

‘ರಾಮಾಯಣ’ (Ramayana) ಸಿನಿಮಾದ ಟ್ರೈಲರ್ ಇಂದು (ಜುಲೈ 30) ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ಟ್ರೈಲರ್ ನೋಡಿದವರೆಲ್ಲ, ಭಾರತದ ಈ ವರೆಗಿನ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಸಿನಿಮಾ ಇದೆಂದು ಕೊಂಡಾಡುತ್ತಿದ್ದಾರೆ. ವಿಎಫ್​​ಎಕ್ಸ್, ಗ್ರಾಫಿಕ್ಸ್ ಅಂತೂ ಅದ್ಭುತವಾಗಿವೆ. ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅವರು ಟ್ರೈಲರ್​​ನ ಕೇಂದ್ರವಾಗಿದ್ದರು ಮೂವರೂ ಸಹ ಸಖತ್ ಗಮನ ಸೆಳೆದಿದ್ದಾರೆ. ಅದರಲ್ಲೂ ಯಶ್ ಅಂತೂ ಟ್ರೈಲರ್​​ ನಲ್ಲಿ ಅಬ್ಬರಿಸಿಬಿಟ್ಟಿದ್ದಾರೆ. ಇಷ್ಟೆಲ್ಲ ಆಗಿದ್ದರೂ…

Read More

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಊರ್ವಶಿ ಪುತ್ರಿ ತೇಜಾಲಕ್ಷ್ಮಿ; ತೆರೆಮೇಲೆ ಒಂದಾದ ಅಮ್ಮ-ಮಗಳು – Kannada News | Veteran Actress Urvashi’s Daughter Teja Lakshmi To Make Her Kannada Debut With Bully

ಊರ್ವಶಿ ಹಾಗೂ ಅವರ ಮಗಳು ತೇಜಾಲಕ್ಷ್ಮಿ ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದವರು ನಟಿ ಊರ್ವಶಿ (Urvashi). 1984ರಲ್ಲಿ ಬಂದ ರಾಜ್​​ಕುಮಾರ್ ನಟನೆಯ ‘ಶ್ರಾವಣಬಂತು’ ಸಿನಿಮಾ ಮೂಲಕ ಅವರು ಕನ್ನಡಕ್ಕೆ ಕಾಲಿಟ್ಟರು. ಆ ಬಳಿಕ ಸಾಲು ಸಾಲು ಕನ್ನಡ ಸಿನಿಮಾ ಮಾಡಿದರು. ‘ಹಬ್ಬ’, ‘ರಾಮ ಶ್ಯಾಮ ಭಾಮ’ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಊರ್ವಶಿ ಮತ್ತೊಮ್ಮೆ ಚಂದನವನಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಬಾರಿ…

Read More

Kanwar Yatra 2026: ಕನ್ವರ್ ಯಾತ್ರೆ : ಉತ್ತರ ಭಾರತದಲ್ಲಿ ಸಂಚಾರ ಬದಲಾವಣೆ, ವೇಳಾಪಟ್ಟಿ ಮತ್ತು ಪ್ರಯಾಣ ಮಾರ್ಗದರ್ಶಿ – Kannada News | Kanwar Yatra 2026 Begins: Massive Traffic Diversions Across North India Till August 11

ನವದೆಹಲಿ, ಜುಲೈ 30: ಪವಿತ್ರ ಶ್ರಾವಣ ಮಾಸದ ಅಂಗವಾಗಿ ವಾರ್ಷಿಕ ‘ಕನ್ವರ್ ಯಾತ್ರೆ’ ಗುರುವಾರ ಬೆಳಿಗ್ಗೆಯಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಶ್ರಾವಣ ಮಾಸದ ಆಗಮನದೊಂದಿಗೆ ಉತ್ತರ ಭಾರತದಲ್ಲಿ ವಾರ್ಷಿಕ ಪವಿತ್ರ ‘ಕನ್ವರ್ ಯಾತ್ರೆ’ಆರಂಭವಾಗಿದೆ. ಕೇಸರಿ ವಸ್ತ್ರಧಾರಿಗಳಾದ ಭಕ್ತರು ತಮ್ಮ ಹೆಗಲ ಮೇಲೆ ಬಿದಿರಿನ ‘ಕನ್ವರ್’ (ಕಲಶ) ಹೊತ್ತು, ಗಂಗಾಜಲ ತುಂಬಿಕೊಂಡು ಅಚಲ ನಂಬಿಕೆಯೊಂದಿಗೆ ತಮ್ಮ ಊರುಗಳತ್ತ ಸುದೀರ್ಘ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಈ ಯಾತ್ರೆಯು ಆಗಸ್ಟ್ 11, 2026 ರವರೆಗೆ ಮುಂದುವರೆಯಲಿದೆ. ಕೋಟ್ಯಂತರ ಭಕ್ತರು ಹರಿದ್ವಾರಕ್ಕೆ ಆಗಮಿಸುವ ನಿರೀಕ್ಷೆಯಿರುವುದರಿಂದ ಉತ್ತರಾಖಂಡ…

Read More