Daily Devotional: ಯಾವ ದೇವರಿಗೆ ಯಾವ ಹಣ್ಣುಅರ್ಪಿಸಿದ್ರೆ ಏನೇನು ಫಲ ಗೊತ್ತಾ?
ಬೆಂಗಳೂರು, ಜನವರಿ 16: ದೇವಸ್ಥಾನಗಳಿಗೆ ಭೇಟಿ ನೀಡಿದಾಗ, ಗುರುಗಳನ್ನು, ಮಕ್ಕಳು ಅಥವಾ ಹಿರಿಯರನ್ನು ಭೇಟಿಯಾದಾಗ ಕೈಯಲ್ಲಿ ಹಣ್ಣು ಅಥವಾ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವುದು ನಮ್ಮ ಸನಾತನ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ನಡೆದುಬಂದ ಪದ್ಧತಿ. ಭಕ್ತಿ ಮತ್ತು ಭಾವನೆ ಮುಖ್ಯವಾದರೂ, ಕೆಲವು ಹಣ್ಣುಗಳನ್ನು ದೇವರಿಗೆ ಅರ್ಪಿಸುವುದರಿಂದ ನಿರ್ದಿಷ್ಟ ಫಲಗಳನ್ನು ಪಡೆಯಬಹುದು ಎಂದು ನಂಬಲಾಗಿದೆ. ಉದಾಹರಣೆಗೆ, ಬಾಳೆಹಣ್ಣನ್ನು ಅರ್ಪಿಸುವುದರಿಂದ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ತೆಂಗಿನಕಾಯಿ ಅರ್ಪಣೆಯು ಹೊಸ ಯೋಜನೆಗಳಿಗೆ ಆಲೋಚನೆಗಳನ್ನು ನೀಡಿ ಉದ್ಯೋಗದಲ್ಲಿ…