ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ಅವಳಿ ಸಹೋದರರಲ್ಲಿ ಓರ್ವ ಆತ್ಮಹತ್ಯೆ
ಕಾಮರೆಡ್ಡಿ, ಮಾರ್ಚ್ 22: ತೆಲಂಗಾಣದ ಕಾಮರೆಡ್ಡಿಯಲ್ಲಿ ದುರಂತವೊಂದು ಸಂಭವಿಸಿದೆ. ಇತ್ತೀಚೆಗಷ್ಟೇ ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ಅವಳಿ ಸಹೋದರರಲ್ಲಿ ಓರ್ವ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ನಾಲ್ವರು ಹಸೆಮಣೆ ಏರಿದ್ದರು, ಸಂಭ್ರದ ನಡುವೆ ಈ ದುರ್ಘಟನೆ ನಡೆದಿದೆ. ಮದುವೆಯಾದ ಒಂದು ತಿಂಗಳೊಳಗೆ ಈ ದುರಂತ ಸಂಭವಿಸಿದ್ದು, ಎರಡೂ ಕುಟುಂಬಗಳು ತೀವ್ರ ದುಃಖದಲ್ಲಿ ಮುಳುಗಿವೆ. ಕಾಮರೆಡ್ಡಿ ಜಿಲ್ಲೆಯ ಮಾಚರೆಡ್ಡಿ ಮಂಡಲದ ಘನಪುರ ಗ್ರಾಮದ ವಿನಯ್ ಕುಮಾರ್ (31) ಮತ್ತು ವಿಜಯ್ ಕುಮಾರ್ ಅವಳಿ ಸಹೋದರರು ಕೀರ್ತಿ ಮತ್ತು ಕೀರ್ತನಾ…