Headlines

ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ನವದೆಹಲಿ, ಮಾರ್ಚ್ 31: ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಿಗೆ (Small Savings Schemes) ಬಡ್ಡಿದರವನ್ನು ಪ್ರತೀ ಕ್ವಾರ್ಟರ್​ಗೆ ಪರಿಷ್ಕರಿಸುತ್ತದೆ. 2026ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಗೆ (April-June quarter) ಬಡ್ಡಿದರ ಪರಿಷ್ಕರಿಸಿದೆ. ಹಿಂದಿನ ಕ್ವಾರ್ಟರ್ ಆದ ಜನವರಿ-ಮಾರ್ಚ್ ಅವಧಿಯಲ್ಲಿ ಇದ್ದ ದರಗಳನ್ನೇ ಮುಂದುವರಿಸಲಾಗಿದೆ. ಸತತ ಎಂಟು ಕ್ವಾರ್ಟರ್​ಗಳಿಂದಲೂ ಬಡ್ಡಿದರ ಯಥಾಸ್ಥಿತಿಯಲ್ಲಿದೆ. ಕೊನೆಯ ಬಾರಿ ಬಡ್ಡಿದರದಲ್ಲಿ ಬದಲಾವಣೆ ಆಗಿದ್ದು 2024ರ ಜನವರಿ-ಮಾರ್ಚ್ ಕ್ವಾರ್ಟರ್​ನಲ್ಲಿ. 2026ರ ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಸಣ್ಣ ಉಳಿತಾಯ ಯೋಜನೆಗಳ ವಾರ್ಷಿಕ ಬಡ್ಡಿದರ ಸುಕನ್ಯಾ ಸಮೃದ್ಧಿ…

Read More

Karnataka Budget 2026: ನಾಳೆ ಸಿಎಂ ಸಿದ್ದರಾಮಯ್ಯ ಬಜೆಟ್, 17ನೇ ಬಾರಿ ಆಯವ್ಯಯ ಮಂಡಿಸಿ ದಾಖಲೆ ಬರೆಯಲು ಸಜ್ಜು – Kannada News | Karnataka Budget 2026: CM Siddaramaiah Set to Present Record 17th Budget with Focus on Guarantee Schemes

ಬೆಂಗಳೂರು, ಮಾರ್ಚ್ 5: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ ಬಜೆಟ್ ಮಂಡನೆಗೆ ಸಿದ್ಧರಾಗಿದ್ದಾರೆ. ವಿಧಾನಸಭೆಯಲ್ಲಿ ಶುಕ್ರವಾರ 2026-27ನೇ ಸಾಲಿನ ಆಯವ್ಯಯವನ್ನು ಮಂಡಿಸಲು ಅವರು ಸಜ್ಜಾಗಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 17ನೇ ಬಜೆಟ್ ಆಗಿದ್ದು, ಇದು ಒಂದು ದಾಖಲೆಯಾಗಿದೆ. ಜನಸಾಮಾನ್ಯರು ಈ ಬಜೆಟ್‌ನಿಂದ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಇಲಾಖಾವಾರು ಚರ್ಚೆ ನಡೆಸಿ ಬಜೆಟ್ ಅಂತಿಮಗೊಳಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ರಾಜ್ಯದ ಆರ್ಥಿಕ…

Read More

82 ವರ್ಷದ ಮಹಿಳೆಗೆ ಅಪ್ಪರ್ ಬರ್ತ್​ ಅಲಾಟ್ ಮಾಡಿದ ರೈಲ್ವೆ ವಿರುದ್ಧ ದೂರು, ಭಾರತೀಯ ರೈಲ್ವೆ ಕೊಟ್ಟ ಉತ್ತರವೇನು? – Kannada News | Indian Railways Lower Berth Policy: Senior Citizen Upper Berth Sparks Clarification

ನವದೆಹಲಿ, ಮಾರ್ಚ್​ 02: ಭಾರತೀಯ ರೈಲ್ವೆ(Indian Railways) ಹಿರಿಯ ನಾಗರಿಕರಿಗೆ ಬರ್ತ್​ಗಳನ್ನು ಹೇಗೆ ನಿಗದಿಪಡಿಸುತ್ತದೆ ಎಂಬುದರ ಕುರಿತು ಎಕ್ಸ್​​ನಲ್ಲಿ ಮಾಡಲಾದ ಪೋಸ್ಟ್​ ಚರ್ಚೆಗೆ ನಾಂದಿ ಹಾಡಿದೆ. ಪ್ರಯಾಣಿಕರೊಬ್ಬರು ತಾವು ಟಿಕೆಟ್ ಬುಕ್ ಮಾಡಿದಾಗ  ಬೇರೆ ಸೀಟುಗಳು ಲಭ್ಯವಿದ್ದರೂ 82 ವರ್ಷದ ಮಹಿಳೆಗೆ ಕೂಡ ಅಪ್ಪರ್ ಬರ್ತ್​ ನಿಗದಿಪಡಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈಗ ಅದೇ ಕೆಳಗಿನ ಬರ್ತ್‌ಗಳನ್ನು ಪ್ರೀಮಿಯಂ ತತ್ಕಾಲ್‌ನಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವೈರಲ್ ಪೋಸ್ಟ್​ನಲ್ಲಿ ತಿಳಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ, 45ವರ್ಷಕ್ಕಿಂತ…

Read More

ಕರೋನಾ ರೀತಿಯ ಮಾರಣಾಂತಿಕ ರೋಗ: ಇಂದಿರಾ ಪ್ರಿಯದರ್ಶಿನಿ ಮೃಗಾಲಯ ಬಂದ್ – Kannada News | Anagodu indira Priyadarshini zoo Closed for four Deer Death from hemorrhagic septicemia virus

ದಾವಣಗೆರೆ, (ಜನವರಿ 19):  ದಾವಣಗೆರೆ ತಾಲೂಕಿನ ಆನಗೋಡು ಬಳಿಯಿರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ (indira Priyadarshini zoo )ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಅಲ್ಲದೆ ಇಡೀ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸದ್ಯ ಮೃಗಾಲಯದಲ್ಲಿ ಇರುವ ಇತರೆ ಜಿಂಕೆಗಳಿಗೂ ಸೋಂಕು ಹರಡದಂತೆ ತಡೆಯಲು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.‌ ಉಳಿದ ಜಿಂಕೆಗಳ ಮೇಲೆ ಅಧಿಕಾರಿಗಳು, ವೈದ್ಯರು ನಿಗಾವಹಿಸಿದ್ದಾರೆ. ಕರೋನಾ ರೀತಿಯ ಮಾರಣಾಂತಿಕ ರೋಗ ಇದೇ…

Read More

ವೆಂಕಿಯ ಬೆಂಕಿ ಸೆಲೆಬ್ರೇಷನ್​ ಅರ್ಥವೇನು ಗೊತ್ತಾ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಈ ಅರ್ಧಶತಕ ಪೂರೈಸುತ್ತಿದ್ದಂತೆ ಅಯ್ಯರ್ ತಮ್ಮ ಕೈಗಳನ್ನು ಮೇಲೆಕ್ಕೆತ್ತುವ ಮೂಲಕ ವಿಶೇಷ ಸ್ಟ್ರೈಲ್​ನಲ್ಲಿ ಸಂಭ್ರಮಿಸಿದ್ದರು. ಇದರ ಬೆನ್ನಲ್ಲೇ ಈ ಸಂಭ್ರಮಕ್ಕೆ ಕಾರಣವೇನು? ಇದರ ಅರ್ಥವೇನು? ಎಂಬ ಗೂಗಲ್ ಹುಡುಕಾಟಗಳು ಶುರುವಾಗಿದ್ದವು. ಈ ಪ್ರಶ್ನೆಗಳಿಗೆ ಸಿಗುವ ಉತ್ತರ…

Read More

ಮೇ 30ರಿಂದ 3ನೇ ಹಂತದ SIR: ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ – Kannada News | Election Commission of India Announces SIR Phase 3 in 16 States Including Karnataka and 3 Union Territories

ನವದೆಹಲಿ, ಮೇ 14: ಕರ್ನಾಟಕ ಸೇರಿದಂತೆ 16 ರಾಜ್ಯಗಳು, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ. ದೇಶದಲ್ಲಿ 3ನೇ ಹಂತದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮೇ 30ರಿಂದ ಆರಂಭವಾಗಲಿದ್ದು, ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳು ನೇಮಿಸಿರುವ 3.42 ಲಕ್ಷ ಬೂತ್ ಮಟ್ಟದ ಏಜೆಂಟ್‌ಗಳ ಸಹಾಯದಿಂದ 36.73 ಕೋಟಿ ಮತದಾರರನ್ನು ಮನೆಮನೆಗೆ ತೆರಳಿ ಪರಿಶೀಲಿಸುವ ಕಾರ್ಯ ನಡೆಯಲಿದೆ….

Read More

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಪಿಂಕ್ ಲೈನ್ ಹಳಿ ಮೇಲೆ ಆರ್‌ಡಿಎಸ್‌ಒ ಪರೀಕ್ಷೆ ಆರಂಭ! – Kannada News | Namma Metro Pink Line Update: RDSO Testing Begins on Kalena Agrahara Tavarekere Stretch

ಪಿಂಕ್ ಲೈನ್ ಹಳಿ ಮೇಲೆ ಆರ್‌ಡಿಎಸ್‌ಒ ಪರೀಕ್ಷೆ ಆರಂಭ! Image Credit source: MediaForge AI ಬೆಂಗಳೂರು, ಏಪ್ರಿಲ್ 28: ರಾಜಧಾನಿಯ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಸಜ್ಜಾಗುತ್ತಿರುವ ನಮ್ಮ ಮೆಟ್ರೋದ ‘ಪಿಂಕ್ ಲೈನ್’ (Pink Line) ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು ತಲುಪಲಾಗಿದೆ. ಇಂದಿನಿಂದ (ಏ.28) ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆಯ (RDSO) ತಜ್ಞರು ಈ ಮಾರ್ಗದಲ್ಲಿ ತಾಂತ್ರಿಕ ಪರೀಕ್ಷೆಗಳನ್ನು ಆರಂಭಿಸಲಿದ್ದು, ಮೇ 12ರವರೆಗೆ ತಪಾಸಣೆ ಮುಂದುವರಿಯಲಿದೆ. ವೇಗ ಪರೀಕ್ಷೆ ಬಿಎಂಆರ್‌ಸಿಎಲ್ (BMRCL) ಮೂಲಗಳ ಪ್ರಕಾರ,…

Read More

IPL 2026: ಹೊಸ ಲುಕ್​ನೊಂದಿಗೆ ಆರ್​ಸಿಬಿಗೆ ಮರಳಿದ ಕಿಂಗ್ ಕೊಹ್ಲಿ! ವಿರಾಟ್ ಹೇಗಿದ್ದಾರೆ ನೋಡಿ

ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಹೊಸ ಸೀಸನ್‌ಗೆ ತಯಾರಿ ನಡೆಸಲು ಮಾರ್ಚ್ 18 ರಂದು ಆರ್​ಸಿಬಿ ತಂಡದ ಶಿಬಿರ ಆರಂಭವಾಗಿದೆ. ತಂಡದ ಆಟಗಾರರು ಶಿಬಿರಕ್ಕೆ ಮರಳಿರುವ ಚಿತ್ರವನ್ನು ಎಕ್ಸ್​ ಖಾತೆಯಲ್ಲಿ ಆರ್​​ಸಿಬಿ ಹಂಚಿಕೊಂಡಿದೆ. ಮಾರ್ಚ್ 18, ಬುಧವಾರ ತಂಡವನ್ನು ಸೇರಿಕೊಂಡ ಕಿಂಗ್ ಕೊಹ್ಲಿ ಮೊದಲ ತರಬೇತಿ ಅವಧಿಯಲ್ಲಿ ಭಾಗವಹಿಸಿದರು. ವಿರಾಟ್ ಕೊಹ್ಲಿ ನೆಟ್ಸ್​​ನಲ್ಲಿ ಭಾಗವಹಿಸಿರುವುದು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದ್ದು, ಐಪಿಎಲ್ ಮೊದಲ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಕೊಹ್ಲಿ ತಂಡ ಸೇರಿರುವ ಕೆಲವು ಫೋಟೋಗಳನ್ನು…

Read More

ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು – Kannada News | India will remain fastest growing economy, despite global headwinds, predicts IMF

ನವದೆಹಲಿ, ಏಪ್ರಿಲ್ 15: ಯುದ್ಧಗಳು, ತೈಲ ಬಿಕ್ಕಟ್ಟು, ಟ್ರಂಪ್ ಟ್ಯಾರಿಫ್ ಇತ್ಯಾದಿ ಜಾಗತಿಕವಾಗಿ ಪ್ರತಿಕೂಲ ಪರಿಸ್ಥಿತಿ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆ (India GDP growth) ಉತ್ತಮವಾಗಿ ಸಾಗಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತಿವೇಗವಾಗಿ ಬೆಳೆಯುತ್ತಿದೆ. ಮುಂದೆಯೂ ಇದೇ ಹಾದಿಯಲ್ಲಿ ಭಾರತದ ಆರ್ಥಿಕತೆ ಸಾಗಲಿದೆ ಎಂದು ವಿವಿಧ ಏಜೆನ್ಸಿಗಳು ಹೇಳುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯಾದ ಐಎಂಎಫ್ ಕೂಡ ಇದನ್ನು ಪುಷ್ಟೀಕರಿಸಿದೆ. ಐಎಂಎಫ್ ಪ್ರಕಾರ 2026ರಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಹೆಚ್ಚಬಹುದು. ಇದು ಈ…

Read More

ಇರಾನ್​-ಇಸ್ರೇಲ್ ಯುದ್ಧ ಪರಿಣಾಮ: ತರಕಾರಿ ಬೆಲೆ ದಿಢೀರ್ ಕುಸಿತ! ಯಾವ ತರಕಾರಿಗೆ ಎಷ್ಟಾಗಿದೆ ನೋಡಿ

ಕೋಲಾರ, ಮಾರ್ಚ್ 16: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಮಧ್ಯಪ್ರಾಚ್ಯಕ್ಕೆ ಸೀಮಿತವಾಗದೆ, ಅದರ ಆರ್ಥಿಕ ಪರಿಣಾಮಗಳು ಕರ್ನಾಟಕಕ್ಕೂ ತಟ್ಟಿದೆ. ಕರ್ನಾಟಕದ ಹೋಟೆಲ್ ಉದ್ಯಮದ ಬೆನ್ನಲ್ಲೇ ಇದೀಗ ಕೃಷಿ ವಲಯಕ್ಕೂ ಯುದ್ಧದ ಬಿಸಿ ತಟ್ಟಲು ಶುರುವಾಗಿದೆ. ಯುದ್ಧದ ಕಾರಣದಿಂದಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಗಳು ಹೋಟೆಲ್ ಉದ್ಯಮಕ್ಕೆ ಭಾರಿ ನಷ್ಟವನ್ನುಂಟು ಮಾಡಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಪ್ರಮುಖ ನಗರಗಳಲ್ಲಿ ಮತ್ತು ಕೋಲಾರದಂತಹ (Kolar) ಜಿಲ್ಲೆಗಳಲ್ಲಿಯೂ ಹೋಟೆಲ್‌ಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. ಇದು ತರಕಾರಿಗಳ…

Read More