Headlines

ಅಜ್ಜನಂತೆ ಅಜಾತಶತ್ರು ಆಗುವುದೇ ನನ್ನ ಗುರಿ: ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಶಾಸಕ ಸಮರ್ಥ್​​ ಶಾಮನೂರು – Kannada News | Aim to Be an ‘Ajatashatru’ Like My Grandfather: Davanagere South MLA Samarth Shamanur

ದಾವಣಗೆರೆ, ಮೇ 06: ಅಭಿವೃದ್ಧಿ ಕೆಲಸ ಮಾಡುವ ಸಾಮರ್ಥ್ಯ ಇದೆ ಎಂದುನ ಜನರು ನನ್ನ ಗೆಲ್ಲಿಸಿದ್ದಾರೆಬ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಶಾಸಕ ಸಮರ್ಥ್ ಶಾಮನೂರು ಹೇಳಿದ್ದಾರೆ. ನನ್ನ ಅಜ್ಜನ ರೀತಿಯಲ್ಲಿ ಅಜಾತಶತ್ರು ಆಗ್ತೇನೆ, ಅದೇ ನನ್ನ ಗುರಿ. ಜನರ ಪಾಲಿಗೆ ನಮ್ಮ ಮನೆ ಮತ್ತು ಮನಸ್ಸಿನ ಬಾಗಿಲು ತೆರೆದಿರುತ್ತದೆ. ಯಾರೇ ಬಂದರೂ ನಮ್ಮ ಮನೆಯ ಬಾಗಿಲು ಓಪನ್​​ ಆಗಿರಲಿದ್ದು, ದಾವಣಗೆರೆ ದಕ್ಷಿಣ ಶಾಸಕರ ಜನಸಂಪರ್ಕ ಕಚೇರಿ ತೆರೆಯುತ್ತೇನೆ ಎಂದವರು ತಿಳಿಸಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು…

Read More

ಅಬುಧಾಬಿ ಬಿಎಪಿಎಸ್ ದೇವಾಲಯ ಏಕತೆಯ ಸಂಕೇತ; ಯುಎಇ ಅಧ್ಯಕ್ಷರ ಸಾಂಸ್ಕೃತಿಕ ಸಲಹೆಗಾರರಿಂದ ಶ್ಲಾಘನೆ – Kannada News | UAE Cultural Advisor Zaki Anwar Nusseibeh visit to BAPS Hindu Mandir in Abu Dhabi

ನವದೆಹಲಿ, ಜನವರಿ 17: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷರ ಸಾಂಸ್ಕೃತಿಕ ಸಲಹೆಗಾರ ಮತ್ತು ಯುಎಇ ವಿಶ್ವವಿದ್ಯಾಲಯದ ಕುಲಪತಿ ಜಾಕಿ ಅನ್ವರ್ ನುಸ್ಸೀಬೆಹ್ ಅವರು ಇತ್ತೀಚೆಗೆ ಅಬುಧಾಬಿಯಲ್ಲಿರುವ ಬಿಎಪಿಎಸ್ ಹಿಂದೂ ದೇವಾಲಯಕ್ಕೆ (BAPS Hindu Temple) ಭೇಟಿ ನೀಡಿದರು. ತಮ್ಮ ಭೇಟಿಯ ಸಮಯದಲ್ಲಿ, ಅವರು ದೇವಾಲಯದ ಮುಖ್ಯಸ್ಥ ಸ್ವಾಮಿ ಬ್ರಹ್ಮವಿಹಾರಿ ದಾಸ್ ಅವರನ್ನು ಭೇಟಿಯಾದರು. ಅವರು ಬಿಎಪಿಎಸ್ ದೇವಾಲಯವನ್ನು 21ನೇ ಶತಮಾನದ ಜಾಗತಿಕ ಏಕತೆಯ ದಾರಿದೀಪವೆಂದು ಶ್ಲಾಘಿಸಿದರು. ಈ ದೇವಾಲಯವು ಸಂಸ್ಕೃತಿ ಮತ್ತು ಮೌಲ್ಯಗಳ ಕೇಂದ್ರವಾಗಿದೆ ಎಂದು…

Read More

ಅತ್ತಿಗೆ ರಶ್ಮಿಕಾ ಬಗ್ಗೆ ವಿಜಯ್ ಸಹೋದರ ಆನಂದ್ ದೇವರಕೊಂಡ ಹೇಳಿದ್ದೇನು? – Kannada News | Vijay Deverakonda brother Anand Deverakonda Insta post about Rashmika Mandanna

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ವಿವಾಹವಾಗಿದ್ದಾರೆ. ಇವರಿಬ್ಬರ ವಿವಾಹ ಉದಯಪುರದ ಐಟಿಸಿ ಮೆಮಂಟೋಸ್​​ನಲ್ಲಿ ಅದ್ಧೂರಿಯಾಗಿ ನಡೆದಿದೆ. ಎರಡೂ ಕುಟುಂಬದ ಆಪ್ತರು, ಬಹಳ ಆಪ್ತ ಸ್ನೇಹಿತರು ಸಂಬಂಧಿಗಳ ಎದುರು ಈ ಜೋಡಿ ಅಧಿಕೃತವಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ರಶ್ಮಿಕಾ ಅವರು ಇದೀಗ ಅಧಿಕೃತವಾಗಿ ದೇವರಕೊಂಡ ಮನೆ ಸೊಸೆ. ದೇವರಕೊಂಡ ಕುಟುಂಬದವರು ಹೊಸ ಸದಸ್ಯೆಯನ್ನು ಬಲು ಪ್ರೀತಿಯಿಂದ ಕುಟುಂಬಕ್ಕೆ ಸ್ವಾಗತಿಸಿದ್ದಾರೆ. ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ಅವರು ರಶ್ಮಿಕಾಗೆ ತಮ್ಮ ಕುಟುಂಬದಲ್ಲಿ ತಲೆ-ತಲಾಂತರಗಳಿಂದ ಬಂದಿದ್ದ…

Read More

Video: ಮುದ್ದು ಕಂದನ ಬಾಯಲ್ಲಿ ಶ್ರೀ ಕೃಷ್ಣನ ಭಜನೆ ಹಾಡು, ವೈರಲ್ ಆಯ್ತು ದೃಶ್ಯ – Kannada News | A little boy sang a bhajan of Lord Krishna, video goes viral

ಮುದ್ದು ಮಕ್ಕಳ (little kids) ಆಟ-ತುಂಟಾಟಗಳನ್ನು ನೋಡುವುದೇ ಚಂದ. ಪುಟಾಣಿಗಳ ಬಾಯಲ್ಲಿ ತೊದಲು ನುಡಿ, ಹಾಡುಗಳನ್ನು ಕೇಳಿದರೆ ಮನಸ್ಸಿನ ನೋವೆಲ್ಲಾ ಮರೆಯಾಗುತ್ತದೆ. ಈ ಪುಟಾಣಿಗಳ ಮುದ್ದು ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಪುಟಾಣಿಯೊಂದು ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ ಸ್ತೋತ್ರವನ್ನು ಭಕ್ತಿಭಾವದಿಂದ ಹಾಡಿದೆ. ಮುದ್ದು ಕಂದನ ಕಂಠಸಿರಿಯಲ್ಲಿ ಮೂಡಿಬಂದ ಈ ಭಜನಾ ಹಾಡಿಗೆ ನೆಟ್ಟಿಗರು ಮನಸೋತಿದ್ದಾರೆ. ಮಣಿಕರ್ಣಿಕ ಕಟೋಚ್ (Manikarnika Katoch) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿಯೊಂದು ದೇವರ ಕೋಣೆಯಲ್ಲಿ…

Read More

ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅಕ್ಷಯ್ ಕುಮಾರ್; ಹಿಗ್ಗಾಮುಗ್ಗಾ ಟ್ರೋಲ್

ಬಾಲಿವುಡ್‌ ನಟ ಅಕ್ಷಯ್ ಕುಮಾರ್ (Akshay Kumar) ಅವರು ಯಾವಾಗಲೂ ತಮ್ಮ ಶಿಸ್ತು ಮತ್ತು ಸ್ಟೈಲಿಶ್ ಉಡುಗೆಯಿಂದಲೇ ಗುರುತಿಸಿಕೊಳ್ಳುವವರು. ಆದರೆ, ಇದೇ ಮೊದಲ ಬಾರಿಗೆ ಅವರ ಫ್ಯಾಷನ್ ಆಯ್ಕೆ ತಪ್ಪಾಗಿದೆ. ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅವರನ್ನು ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ಏಪ್ರಿಲ್ 6ರಂದು ‘ಭೂತ್ ಬಂಗ್ಲ’ (Bhoot Bangla) ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅಕ್ಷಯ್ ಕುಮಾರ್ ಅವರನ್ನು ಈ ರೀತಿ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ….

Read More

Video: ವಿವಾಹೇತರ ಸಂಬಂಧ ಹೊಂದುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಯುವತಿ – Kannada News | Young woman says corporate employees are more likely to have extramarital affairs

ಇಂದಿನ ಯುವಪೀಳಿಗೆಯೂ ದಾಂಪತ್ಯ ಜೀವನಕ್ಕೆ ನಿಷ್ಠಾವಂತರಾಗಿರುವುದು ತುಂಬಾನೇ ಕಡಿಮೆನೇ. ಕೆಲಸ ಮಾಡುವ ಸ್ಥಳಗಳಲ್ಲಿ ಸಂಬಂಧ ಹೊಂದಿ ಪತಿ ಅಥವಾ ಪತ್ನಿಗೆ ಮೋಸ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈ ಕಾರ್ಪೋರೇಟ್ ಜಗತ್ತಿನಲ್ಲಿ (corporate world) ವಿವಾಹೇತರ ಸಂಬಂಧಗಳು ಕಾಮನ್ ಅಂತೆ. ವಿವಾಹೇತರ ಸಂಬಂಧದ ಬಗ್ಗೆ ಯುವತಿಯೊಬ್ಬಳು (young woman) ಖಾರವಾಗಿ ಮಾತನಾಡಿದ್ದಾಳೆ. ಈ ವೇಳೆ ಆಕೆ ಅಚ್ಚರಿಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾಳೆ. ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ನಾನಾ ರೀತಿಯ ಅಭಿಪ್ರಾಯ…

Read More

ಅಮೆರಿಕ ಹೊಸ ‘ವರಸೆ’; ಫೋರ್ಸ್ಡ್ ಲೇಬರ್ ಹೆಸರಲ್ಲಿ ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಯೋಜನೆ – Kannada News

ವಾಷಿಂಗ್ಟನ್, ಜೂನ್ 3: ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳು ಪುನರಾರಂಭಗೊಂಡ ಬೆನ್ನಲ್ಲೇ, ಭಾರತಕ್ಕೆ ಅಮೆರಿಕ ಹೊಸದೊಂದು ಆಘಾತ ನೀಡಿದೆ. ಬಲವಂತದ ಕಾರ್ಮಿಕ ಕ್ರಮ ಮೂಲಕ ತಯಾರಾದ ಸರಕುಗಳಿಗೆ ನಿರ್ಬಂಧ ಹಾಕಿಲ್ಲ ಎನ್ನುವ ಕಾರಣವೊಡ್ಡಿ 60 ದೇಶಗಳಿಗೆ ಅಮೆರಿಕ ಶೇ. 12.5ರಷ್ಟು ಹೆಚ್ಚುವರಿ ಸುಂಕವನ್ನು (Tariff) ವಿಧಿಸಲು ಯೋಜಿಸಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್) ಇಂಥದ್ದೊಂದು ಪ್ರಸ್ತಾಪ ಮಾಡಿದ್ದಾರೆ. ಈ 60 ದೇಶಗಳ ಪಟ್ಟಿಯಲ್ಲಿ ಭಾರತ, ಚೀನಾ, ರಷ್ಯಾ ಮೊದಲಾದವು…

Read More

ಭಾರತದ ಅತಿದೊಡ್ಡ ಆಧ್ಯಾತ್ಮಿಕ ರಾಯಭಾರಿ; 70ನೇ ವರ್ಷಕ್ಕೆ ಕಾಲಿಟ್ಟ ರವಿಶಂಕರ್ ಗುರೂಜಿಗೆ ಸಿಎಂಗಳು, ರಾಜ್ಯಪಾಲರು, ಸಚಿವರಿಂದ ಅಭಿನಂದನೆ – Kannada News | Sri Sri Ravi Shankar turns 70 Global Leaders, Governors, Ministers gathers at Bengaluru Art Of Living

ಬೆಂಗಳೂರು, ಮೇ 15: ಆಧ್ಯಾತ್ಮಿಕ ಗುರು, ಆರ್ಟ್ ಆಫ್ ಲಿವಿಂಗ್​ನ ಗುರುದೇವ ಶ್ರೀ ಶ್ರೀ ರವಿಶಂಕರ್ (Sri Sri Ravi Shankar) ಅವರು 70ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಆರ್ಟ್ ಆಫ್ ಲಿವಿಂಗ್ 45 ವರ್ಷಗಳ ಜಾಗತಿಕ ಸೇವೆ, ಮಾನವೀಯ ಸಂಪರ್ಕ ಮತ್ತು ಆಧ್ಯಾತ್ಮಿಕ ಪಯಣವನ್ನು ಕೂಡ ಮುಗಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಆಧ್ಯಾತ್ಮಿಕ ನಾಯಕರು, ನೀತಿ ನಿರೂಪಕರು, ಕಲಾವಿದರು, ಕೈಗಾರಿಕೋದ್ಯಮಿಗಳು, ಶಿಕ್ಷಣತಜ್ಞರು,…

Read More

IPL 2026: ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನಾಡಲು ಒಪ್ಪಿಗೆ ಸೂಚಿಸಿದ ಆರ್​ಸಿಬಿ ಫ್ರಾಂಚೈಸಿ..! ಆದರೆ? – Kannada News | Breaking! RCB to Play All IPL 2026 Home Matches at Bengaluru’s Chinnaswamy Stadium

19ನೇ ಆವೃತ್ತಿಯ ಐಪಿಎಲ್‌ (IPL 2026) ಆರಂಭಕ್ಕೆ ದಿನಗಳ ಏಣಿಕೆ ಶುರುವಾಗಿದೆ ಹೊಸ ಸೀಸನ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲು ಅಭಿಮಾನಿಗಳ ಮನದಲ್ಲಿ ಮೂಡಿರುವ ಪ್ರಮುಖ ಪ್ರಶ್ನೆಯೆಂದರೆ, ಹಾಲಿ ಚಾಂಪಿಯನ್ ಆರ್​ಸಿಬಿ (RCB) ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡುತ್ತದೆಯೇ? ಎಂಬುದು. ಏಕೆಂದರೆ ಪಂದ್ಯಾವಳ ಸನಿಹವಾಗುತ್ತಾ ಬಂದರೂ ಆರ್​ಸಿಬಿ ಫ್ರಾಂಚೈಸಿ ಮಾತ್ರ ತನ್ನ ತವರು ನೆಲವನ್ನು ಇದುವರೆಗೂ ಖಚಿತಪಡಿಸಿರಲಿಲ್ಲ. ಆದರೀಗ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy…

Read More

Bengaluru Air Quality: ಬಳ್ಳಾರಿಯಲ್ಲಿ ಉಸಿರಾಡಿದರೂ ಸಾಕು 3 ಸಿಗರೇಟ್ ಸೇದಿದ ಹಾಗೆ! – Kannada News | Bangalore Air Pollution Crisis: Ballary have Air quality worse than Bengaluru

ಬಳ್ಳಾರಿಯಲ್ಲಿ ಉಸಿರಾಡಿದರೂ ಸಾಕು 3 ಸಿಗರೇಟ್ ಸೇದಿದ ಹಾಗೆ ಬೆಂಗಳೂರು, ಜನವರಿ 24: ರಾಜ್ಯದೆಲ್ಲೆಡೆ ವಾಯು ಗುಣಮಟ್ಟ (Bengaluru Air Quality) ಆತಂಕಕಾರಿ ಮಟ್ಟದಲ್ಲಿಯೇ ಇದೆ. ಬೆಂಗಳೂರಿನ ಗಾಳಿಯ ಗುಣಮಟ್ಟ 165 ಇದ್ದು, ಅನಾರೋಗ್ಯಕಾರಿ ಹಂತದಲ್ಲೇ ಇದೆ. ಆದರೆ ರಾಜಧಾನಿಯನ್ನೂ ಮೀರಿಸುವಷ್ಟು AQI ಹೊಂದಿರುವುದು ಬಳ್ಳಾರಿ. ಕೆಲ ತಿಂಗಳ ಹಿಂದೆಯೂ ಒಮ್ಮೆ ಬಳ್ಳಾರಿಯ ವಾಯ ಗುಣಮಟ್ಟ 200ಕ್ಕೇರಿತ್ತು. ಅದಾದ ಬಳಿಕ ಇಂದು ಮತ್ತೊಮ್ಮೆ ಕಳಪೆ ಮಟ್ಟಕ್ಕೆ ತಲುಪಿದೆ. 200ರ ಗಡಿ ದಾಟಿದ ಬಳ್ಳಾರಿಯ AQI ಕೆಲ ದಿನಗಳ…

Read More