Headlines

‘ಮದರ್ ಪ್ರಾಮಿಸ್’ ಸಿನಿಮಾ ನೋಡಿದ ಶಿವಣ್ಣ, ಹೇಳಿದ್ದೇನು? – Kannada News | Shiva Rajkumar watched and praised Mother Promise movie

ಡಾಲಿ ಧನಂಜಯ್ (Daali Dhananjaya) ನಿರ್ಮಿಸಿ, ನಟನೆ ಸಹ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಮರ್ಶಕರು ಸಹ ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ಆಗಿರುವ ‘ಮದರ್ ಪ್ರಾಮಿಸ್’ ಅನ್ನು ಕುಟುಂಬಗಳು ಒಟ್ಟಿಗೆ ಹೋಗಿ ವೀಕ್ಷಿಸುತ್ತಿವೆ. ಆದರೆ ಕೆಲವರು ಸಿನಿಮಾಕ್ಕೆ ಉದ್ದೇಶಪೂರ್ವಕವಾಗಿ ಹಾನಿ ಮಾಡುವ ಯತ್ನಗಳನ್ನು ಮಾಡುತ್ತಿದ್ದಾರೆಂದು ಚಿತ್ರತಂಡ ಆರೋಪಿಸಿದೆ. ಇದರ ನಡುವೆ ಸಿನಿಮಾಕ್ಕೆ ಶಿವರಾಜ್ ಕುಮಾರ್ ಅವರ ಬೆಂಬಲ ದೊರೆತಿದೆ….

Read More

ವೃದ್ಧಾಶ್ರಮ ಸೇರಿದ್ದ ವ್ಯಕ್ತಿಯನ್ನ ಮರಳಿ ಕುಟುಂಬಕ್ಕೆ ಸೇರಿಸಿದ ಇನ್ಸ್ಟಾಗ್ರಾಮ್​​ ಪೋಸ್ಟ್​​! – Kannada News | Instagram Post Unites Lost Elderly Man with Family in Chamarajanagar

ಚಾಮರಾಜನಗರ, ಜನವರಿ 02: ಇತ್ತೀಚೆಗೆ ಸೈಬರ್ ಬೆದರಿಕೆ, ನಕಲಿ ಸುದ್ದಿ ಹರಡುವಿಕೆಯಂತಕ ಪ್ರಕರಣಗಳಿಂದಲೇ ಸುದ್ದಿಯಾಗುತ್ತಿರುವ ಸಾಮಾಜಿಕ ಜಾಲತಾಣವೇ ವೃದ್ಧರೋರ್ವರ ಪಾಲಿಗೆ ಬದುಕಿನ ಆಶಾಕಿರಣವೆಂಬಂತೆ ಸಹಾಯ ಮಾಡಿದೆ. ದೂರದ ಮಧ್ಯಪ್ರದೇಶದಿಂದ ಕೆಲಸಕ್ಕಾಗಿ ಚಾಮರಾಜನಗರಕ್ಕೆ ಬಂದಿದ್ದ ವ್ಯಕ್ತಿ ಅಚಾನಕ್ಕಾಗಿ ಜೊತೆಗಾರರ ಸಂಪರ್ಕ ಕಳೆದುಕೊಂಡಿದ್ದರು. ಭಾಷೆ ಬರದೆ, ಊರಿನ ವಿಳಾಸ ಗೊತ್ತಿರದೆ ಸಂಕಷ್ಟಕ್ಕೆ ಸಿಲುಕಿದ್ದ ಇವರನ್ನ ಇನ್ಸ್ಟಾಗ್ರಾಮ್​​ನಒಂದೇ ಒಂದು​​ ಪೋಸ್ಟ್​​ ಮರಳಿ ಮನೆಗೆ ಸೇರಿಸಿದೆ. ಹೌದು, ಕೆಲಸ ಅರಸಿಕೊಂಡು ಉತ್ತರ ಭಾರತದ ರಾಜ್ಯಗಳ ಜನರು ಕರ್ನಾಟಕ್ಕೆ ಬರೋದು ಇತ್ತೀಚೆಗೆ ಮಾಮೂಲು. ಅದರಂತೆಯೇ…

Read More

ಕೆಲವೇ ಎಐ ಮಾಡಲ್​ಗಳು ಇಡೀ ಉದ್ಯಮವನ್ನೇ ನುಂಗಿ ನೀರು ಕುಡಿಯಲು ಬಿಡಬಾರದು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ – Kannada News | Satya Nadella warns AI could leave entire industries struggling if control stays with few companies

ವಾಷಿಂಗ್ಟನ್, ಜೂನ್ 16: ಮೈಕ್ರೋಸಾಫ್ಟ್ (Microsoft) ಕಂಪನಿಯ ಸಿಇಒ ಸತ್ಯ ನಾಡೆಳ್ಳ (Satya Nadella) ಅವರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಭವಿಷ್ಯದ ಕುರಿತು ಜಾಗತಿಕ ಉದ್ಯಮ ರಂಗಕ್ಕೆ ದೊಡ್ಡ ಎಚ್ಚರಿಕೆಯೊಂದನ್ನು ನೀಡಿದ್ದಾರೆ. “ಎಐ ತಂತ್ರಜ್ಞಾನದ ಸಂಪೂರ್ಣ ಲಾಭ ಮತ್ತು ಮೌಲ್ಯವು ಕೇವಲ ಕೆಲವು ದೈತ್ಯ ಕಂಪನಿಗಳ ಕೈಯಲ್ಲೇ ಉಳಿದುಬಿಟ್ಟರೆ, ಇಡೀ ಉದ್ಯಮ ರಂಗವೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದು ಮತ್ತು ನಾಶವಾಗಬಹುದು” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಜಾಗತೀಕರಣದ ಸಂದರ್ಭದಲ್ಲಾಗಿದ್ದ ತಪ್ಪು ಮರುಕಳಿಸದಿರಲಿ ಹಿಂದೆ ಜಾಗತೀಕರಣದ…

Read More

ಬೆಂಗಳೂರಿನಲ್ಲಿ ಕೊನೆಗೂ ಕಸ ಸಮಸ್ಯೆಗೆ ಸಿಕ್ತು ಮುಕ್ತಿ: ಬಗೆರಿದಿದ್ಹೇಗೆ? – Kannada News | Bengaluru Garbage Crisis: Bellahalli Villagers End Protest as 90 Cr Funds Promised

ಬೆಂಗಳೂರು, ಫೆಬ್ರವರಿ 19: ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಕಸದ (Garbage) ಸಮಸ್ಯೆ ಇನ್ನೂ ಕೂಡ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಬೆಳ್ಳಳ್ಳಿ ಕ್ವಾರಿಯಲ್ಲಿ ಕಸದ ವಿಲೇವಾರಿಯಲ್ಲಿ ಸಾಲು ಕಟ್ಟಿ ನಿಂತಿರುವಂತಹ ಕಸದ ಲಾರಿಗಳು. ಈ ಬಗ್ಗೆ ನಿನ್ನೆ ಟಿವಿ9 ಸುದ್ದಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳು ಸಮಸ್ಯೆಯನ್ನು ಬಗೆ ಹರಿಸಿದ್ದಾರೆ. ಜೊತೆಗೆ 90 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.  ಹೀಗಾಗಿ ಎಂದಿನಂತೆ ಲಾರಿಗಳು ಕಸ ವಿಲೇವರಿಗೆ ಮುಂದಾಗಿವೆ. ಬೆಂಗಳೂರಿನ ಕಸ ವಿಲೇವಾರಿ ಮಾಡುವ…

Read More

ಪಿಎಂ ಕಿಸಾನ್ ಯೋಜನೆ, ನೊಂದಾಯಿಸಿದ್ದರೂ 23ನೇ ಕಂತಿನ ಬಂದಿಲ್ಲವಾ? ಇವಿರಬಹುದು ಕಾರಣಗಳು – Kannada News | PM Kisan scheme, 23rd installment release, what if money not credited to account

ಕೋಲ್ಕತಾ, ಜೂನ್ 21: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Scheme) 23ನೇ ಕಂತಿನ ಹಣವನ್ನು ಜೂನ್ 20, ಶನಿವಾರದಂದು ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರ್​ನಲ್ಲಿ ಹೊಸ ಕಂತು ರಿಲೀಸ್ ಮಾಡಿದ್ದಾರೆ. 9.44 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂಗಳಂತೆ ಒಟ್ಟು 18,800 ಕೋಟಿ ರೂ ಹಣವನ್ನು ಡಿಬಿಟಿ ಮೂಲಕ ನೇರವಾಗಿ ವರ್ಗಾವಣೆ ಮಾಡಲಾಗಿದೆ. 2018ರ ಡಿಸೆಂಬರ್​ನಲ್ಲಿ ಆರಂಭಗೊಂಡ ಈ…

Read More

ವಾಟ್ಸಾಪ್​ಗೆ ಎಪಿಕೆ ಫೈಲ್​ನಲ್ಲಿ ಬಂತು ಮದುವೆ ಆಮಂತ್ರಣ: ಕ್ಲಿಕ್ ಮಾಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 9.96 ಲಕ್ಷ ರೂ. ಮಾಯ! – Kannada News | WhatsApp APK Wedding Invitation Scam: Bengaluru Forest Employee Loses Rs 9.96 Lakh After Opening Fake Invite

ಬೆಂಗಳೂರು, ಜುಲೈ 21: ವಾಟ್ಸಾಪ್‌ನಲ್ಲಿ ಎಪಿಕೆ ಫೈಲ್ (APK File)ರೂಪದಲ್ಲಿ ಬಂದಿದ್ದ ನಕಲಿ ಮದುವೆ ಆಮಂತ್ರಣವನ್ನು (Wedding Card) ಕ್ಲಿಕ್ ಮಾಡಿದ ಪರಿಣಾಮ ಅರಣ್ಯ ಇಲಾಖೆಯ ನೌಕರರೊಬ್ಬರು ಸುಮಾರು 9.96 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ವರದಿಯಾಗಿದೆ. ಈ ಸಂಬಂಧ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಸೈಬರ್ ವಂಚಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದರೊಂದಿಗೆ ಸೈಬರ್ ವಂಚಕರು ಹೊಸ ಹೊಸ ವಿಧಾನದ ಮೂಲಕ ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಂತಾಗಿದೆ….

Read More

‘ಇಲ್ಲೇ ನಿನ್ನ ಹೆಣ ಬೀಳತ್ತೆ!’ ಸಿಎಂ ತವರಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ! – Kannada News | Mysuru: Female Officer Threatened During NIMHANS Land Survey in CM’s Home land

‘ಇಲ್ಲೇ ನಿನ್ನ ಹೆಣ ಬೀಳತ್ತೆ’ ಸಿಎಂ ತವರಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ! ಮೈಸೂರು, ಜನವರಿ 17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ಮಹಿಳಾ ಸರ್ಕಾರಿ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ (Mysore) ಗುಡಮಾದನಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 31ರಂದು ನಡೆದ ಈ ಪ್ರಕರಣದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜಮೀನು ಪರಿಶೀಲನೆಗೆ ತೆರಳಿದ ಅಧಿಕಾರಿಗಳಿಗೆ ನಿಂದನೆ ಗುಡಮಾದನಹಳ್ಳಿಯಲ್ಲಿ ನಿಮ್ಹಾನ್ಸ್…

Read More

ಬಿಸಿಲಿಂದ ದೂರವಿರಿ; ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಉಷ್ಣ ಅಲೆಯ ಎಚ್ಚರಿಕೆ

ನವದೆಹಲಿ, ಏಪ್ರಿಲ್ 13: ಭಾರತದಾದ್ಯಂತ ಉಷ್ಣ ಅಲೆಗಳ (Heatwave) ಪರಿಸ್ಥಿತಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಭಾರತದಾದ್ಯಂತ ತಾಪಮಾನವು ಏರುತ್ತಲೇ ಇರುವುದರಿಂದ ಈ ವಾರ ಶಾಖ ಹೆಚ್ಚಾಗುವ ಸಾಧ್ಯತೆಯಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಬೇಸಿಗೆಯ ಶಾಖ ಹೆಚ್ಚಾಗಲಿದೆ. ಈ ಬಗ್ಗೆ ಇಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದ್ದು, ಏಪ್ರಿಲ್ 17ರ ವೇಳೆಗೆ ದೆಹಲಿಯು ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟಲಿದೆ. ಏಪ್ರಿಲ್…

Read More

ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​! – Kannada News | Belagavi: Seven Have Narrow Escape After House Wall Collapses in Heavy Rain

ಬೆಳಗಾವಿ, ಜುಲೈ 04: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆರಾಯ ಅಕ್ಷರಶಃ ರೌದ್ರಾವತಾರ ತಾಳಿದೆ. ಒಂದು ಕಡೆ ವರುಣಾರ್ಭಟಕ್ಕೆ ಮನೆ ಒಳಗೆ ನೀರು ನುಗ್ಗಿದ್ದರೆ, ಮತ್ತೊಂದು ಕಡೆ ಮನೆ ಗೋಡೆ ಕುಸಿದು ಬಿದ್ದಿದೆ. ಚಿಕ್ಕೋಡಿ ತಾಲೂಕಿನ ಜೋಡರಕುರುಳಿ ಗ್ರಾಮದಲ್ಲಿ ಗಂಗವ್ವ ವರಾಳೆ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿಯುವ ಭೀಕರ ಶಬ್ದ ಕೇಳಿ ಮನೆಯಲ್ಲಿದ್ದ 7 ಜನರು ತಕ್ಷಣ ಹೊರಗೆ ಓಡಿ ಬಂದಿದ್ದರಿಂದ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಸದ್ಯ ಮನೆ ಕಳೆದುಕೊಂಡು ಇಡೀ…

Read More

‘ಮಾರ್ಕ್’; ‘45’ ಅಬ್ಬರದಲ್ಲಿ ‘ಡೆವಿಲ್​​’ಗೆ ಸಿಕ್ಕ ಚಿತ್ರಮಂದಿರಗಳು ಇಷ್ಟೇನಾ? – Kannada News | Devil Movie Screens Shrink: Mark and 45 Impact Kannada Film Collections

‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ಅಬ್ಬರದಲ್ಲಿ ರಿಲೀಸ್ ಆಯಿತು. ಸಿನಿಮಾ ರಿಲೀಸ್ ಆಗಿ ಎರಡು ವಾರ ಕಳೆದಿದೆ. ಇಷ್ಟು ದಿನ ಸಿನಿಮಾಗೆ ಕನ್ನಡದಲ್ಲಿ ದೊಡ್ಡ ಸ್ಪರ್ಧೆ ಇರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿ ಹೋಗಿದೆ. ಚಿತ್ರಕ್ಕೆ ಕನ್ನಡ ಚಿತ್ರಗಳಿಂದಲೇ ಸ್ಪರ್ಧೆ ಏರ್ಪಡುತ್ತಾ ಇವೆ. ಕನ್ನಡದಲ್ಲಿ ಇಂದು (ಡಿಸೆಂಬರ್ 25) ‘ಮಾರ್ಕ್’ (Mark Movie) ಹಾಗೂ ‘45’ ಸಿನಿಮಗಳು ರಿಲೀಸ್ ಆಗಿವೆ. ಇದರಿಂದ ‘ಡೆವಿಲ್’ ಚಿತ್ರಕ್ಕೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ನೂರಾರು ಶೋಗಳನ್ನು ಈ ಚಿತ್ರಕ್ಕೆ ನೀಡಲಾಗಿತ್ತು….

Read More