ಮಾನವೀಯತೆಯ ಮಹಾ ಮಾತೆ: ಮನೆ ಮಾರಿ ಸೈನಿಕರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ಕ್ಯಾನ್ಸರ್ ಪೀಡಿತ ನಿವೃತ್ತ ಶಿಕ್ಷಕಿ ಕರಿಬಸಮ್ಮ – Kannada News | Davanagere Retired Teacher KB Karibasamma Donates Rs 10 Lakh to Soldiers Fund by Selling House
ದಾವಣಗೆರೆ ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿಗೆ ಚೆಕ್ ಹಸ್ತಾಂತರಿಸಿದ ಕೆಬಿ ಕರಿಬಸಮ್ಮImage Credit source: tv9 ದಾವಣಗೆರೆ, ಜೂನ್ 22: ದೇಶ ಕಾಯುವ ಸೈನಿಕರ ಮೇಲಿನ ಗೌರವ ಮತ್ತು ದೇಶಪ್ರೇಮಕ್ಕೆ ಸಾಟಿಯಿಲ್ಲದಂತಹ ಹೃದಯಸ್ಪರ್ಶಿ ವಿದ್ಯಮಾನಕ್ಕೆ ದಾವಣಗೆರೆ (Davanagere) ಜಿಲ್ಲೆ ಸಾಕ್ಷಿಯಾಗಿದೆ. ಜಿಲ್ಲೆಯ ಹಿರಿಯ ನಿವಾಸಿ, ನಿವೃತ್ತ ಶಿಕ್ಷಕಿ ಹಾಗೂ ದಯಾಮರಣ ಹೋರಾಟಗಾರ್ತಿಯೂ ಆಗಿರುವ 86 ವರ್ಷ ವಯಸ್ಸಿನ ಕೆಬಿ ಕರಿಬಸಮ್ಮ ಅಜ್ಜಿ (KB Karibasamma) ತಮ್ಮ ಆಸ್ತಿಯನ್ನು ಸೈನಿಕರ ನಿಧಿಗೆ ಅರ್ಪಿಸಿದ್ದಾರೆ. ಭಾರತದ ಗಡಿ ಕಾಯುವ ಯೋಧರ ಕಲ್ಯಾಣಕ್ಕಾಗಿ…