Headlines

ದೇವಸ್ಥಾನ ನಿರ್ಮಾಣಕ್ಕೆ ಟೊಂಕ ಕಟ್ಟಿದ ಗೃಹಲಕ್ಷ್ಮಿಯರು: ಗ್ಯಾರಂಟಿ ಹಣ ದೇಣಿಗೆ ನೀಡಿದ ಮಹಿಳೆಯರು – Kannada News | Gadag: Gruhalakshmi Beneficiaries Donate Scheme Funds for Renuka Yellamma Temple

ಗದಗ, ಫೆಬ್ರವರಿ 28: ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ಮಾದರಿ ಕಾರ್ಯ ಮಾಡಿದ್ದಾರೆ. ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದ ನಿರ್ಮಾಣ ಕಾಮಗಾರಿಗೆ ತಮ್ಮ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2000 ರೂ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಸುಮಾರು 850 ಮಹಿಳೆಯರು ಸ್ವಯಂಪ್ರೇರಣೆಯಿಂದ ಈ ದೇಣಿಗೆ ಸಂಗ್ರಹದಲ್ಲಿ ಭಾಗವಹಿಸಿದ್ದಾರೆ. ನಾಲ್ಕು ದಿನದಲ್ಲಿ 2 ಲಕ್ಷ 50 ಸಾವಿರ ರೂ ಸಂಗ್ರಹಿಸಿದ್ದಾರೆ. ದೇವಸ್ಥಾನದ ಕಟ್ಟಡ ಕಾಮಗಾರಿಯು ಹಣಕಾಸಿನ ತೊಂದರೆಯಿಂದ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೀಗ, ಗೃಹಲಕ್ಷ್ಮಿ…

Read More

Chanakya Niti: ಹೆಂಡತಿಯಾದವಳು ಗಂಡನ ಮುಂದೆ ಎಂದಿಗೂ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Chanakya says that a wife should not say these things in front of her husband

ಗಂಡ ಹೆಂಡತಿಯ (Husband -Wife) ನಡುವಿನ ಸಂಬಂಧ ಚೆನ್ನಾಗಿದ್ದರೆ ಮಾತ್ರ ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಇವರಿಬ್ಬರ ನಡುವೆ ಆಗಾಗ್ಗೆ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ನಡೆಯುವುದು ಸಾಮಾನ್ಯ. ಈ ಜಗಳಗಳು ಅತಿರೇಕಕ್ಕೆ ತಿರುಗಿದರೆ ಒಂದು ಸುಂದರ ಸಂಬಂಧವೇ ಹಾಳಾಗುತ್ತದೆ. ಆದ್ದರಿಂದ ಸಂಸಾರದಲ್ಲಿ ಮನಸ್ತಾಪ ತಲೆದೋರಬಾರದೆಂದರೆ ಹೆಂಡತಿಯಾದವಳು ಈ ಒಂದಷ್ಟು ಗುಣಗಳನ್ನು ಬೆಳೆಸಿಕೊಳ್ಳಬೇಕು, ಈ ಕೆಲವೊಂದು ವಿಚಾರಗಳನ್ನು ಗಂಡನ ಮುಂದೆ ಮಾತನಾಡಬಾರದು ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ. ಹಾಗಿದ್ದರೆ ದಾಂಪತ್ಯ ಜೀವನ ಚೆನ್ನಾಗಿರಲು ಹೆಂಡತಿಯಾದವಳು ಗಂಡನ…

Read More

‘ಗೃಹಸಚಿವರೇ ನೆಟ್ಟಗಿಲ್ಲ’ ಎಂದು ಎಕ್ಸ್​​ ಪೋಸ್ಟ್​​: ದಾಖಲಾಯ್ತು ಸುಮೋಟೋ ಕೇಸ್​

ಬೆಂಗಳೂರು, ಮಾರ್ಚ್​​ 31: ಗೃಹಸಚಿವರೇ ನೆಟ್ಟಗಿಲ್ಲ, ಅವರ ಕಾಲೇಜಿನ ಪ್ರೊಫೆಸರ್ ನೆಟ್ಟಗಿರ್ತಾನಾ? ಎಂದು ಎಕ್ಸ್​​​​​ ಖಾತೆ ಮೂಲಕ ಗೃಹ ಸಚಿವ ಡಾ. ಜಿ. ಪರಮೆಶ್ವರ್​​ ಕುರಿತು ಆಕ್ಷೇಪಾರ್ಹ ಪೋಸ್ಟ್​​​ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಹಿಂದೂ ಜಾಗೃತನಾಗು ಎಂಬ ಎಕ್ಸ್ ಖಾತೆಯಲ್ಲಿ ಈ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದ್ದು, ಉದ್ದೇಶಪೂರ್ವಕ ದ್ವೇಷ ಭಾವನೆ ಮೂಡಿಸುವ ಆರೋಪ ಸಂಬಂಧ ಐಟಿ ಆ್ಯಕ್ಟ್ ಹಾಗೂ BNS U/S 299ರಡಿ ಪ್ರಕರಣ ದಾಖಲಾಗಿದೆ. ಹಿಂಮದೂ ಮತ್ತು ಮುಸ್ಲಿಂ…

Read More

ನಿತ್ಯ ಭವಿಷ್ಯ : ಇಂದು ಈ ರಾಶಿಯವರ ಪ್ರಯಾಣದಲ್ಲಿ ಅವಘಡ ಸಂಭವಿಸುವುದು.. – Kannada News | Daily Horoscope July 7: Find Your Rashi’s Fortune, Career, Love and Health Forecasts

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ನಿಜ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಷ್ಟಮೀ ತಿಥಿಯ ಮಂಗಳವಾರದಂದು ವರದಾನ, ಸ್ಪರ್ಧೆಗೆ ಸಿದ್ಧತೆ, ಹಿರಿಯರಿಂದ ಪ್ರಶಂಸೆ, ಕೊನೆಯ ಕ್ಷಣದಲ್ಲಿ ಸರಿ ನಿರ್ಧಾರ, ವಿಳಂಬ ಯೋಜನೆ, ನಿವೃತ್ತಿಯಿಂದ ಬೇಸರ, ಅಪರಿಚಿತರ ಕೋಪಕ್ಕೆ ಬಲಿ ಇವೆಲ್ಲ ಇಂದಿನ ಭವಿಷ್ಯ. ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ನಿಜ ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ :…

Read More

ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕ ಸನ್ನದ್ಧ, ಟ್ರಂಪ್ ಓಕೆ ಅನ್ನೋದೊಂದೇ ಬಾಕಿ – Kannada News | US Military Ready: Trump’s Iran War Decision Looms, Middle East on Edge

ವಾಷಿಂಗ್ಟನ್, ಫೆಬ್ರವರಿ 19: ಇರಾನ್(Iran) ಮೇಲಿನ ದಾಳಿಗೆ ಅಮೆರಿಕದ ಮಿಲಿಟರಿ ಸಿದ್ಧತೆಗಳು ಪೂರ್ಣಗೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.  ಮಧ್ಯಪ್ರಾಚ್ಯದಲ್ಲಿ, ಅಮೆರಿಕದ ಯುದ್ಧನೌಕೆಗಳು, ಯುದ್ಧ ವಿಮಾನಗಳು ಮತ್ತು ಇಂಧನ ತುಂಬುವ ವಿಮಾನಗಳು ಇರಾನ್ ವಿರುದ್ಧದ ಯುದ್ಧಕ್ಕೆ ಸಿದ್ಧವಾಗಿವೆ. ಈ ವಾರದ ಕೊನೆಯಲ್ಲಿ ಅಮೆರಿಕದ ಮಿಲಿಟರಿ ಇರಾನ್ ಮೇಲೆ ದಾಳಿ ನಡೆಸಬಹುದು ಎಂದು ವರದಿಗಳು ಹೇಳುತ್ತಿವೆ. ಅಮೆರಿಕದ ದಾಳಿಯು ಪಶ್ಚಿಮ ಏಷ್ಯಾದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು. ಆದಾಗ್ಯೂ, ಇರಾನ್ ಮೇಲಿನ ದಾಳಿಯ ಕುರಿತು ಡೊನಾಲ್ಡ್ ಟ್ರಂಪ್ ಇನ್ನೂ ಅಂತಿಮ ನಿರ್ಧಾರವನ್ನು…

Read More

ಟ್ರಂಪ್ ಭೇಟಿ ವಿಚಾರ; ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ನಾಯಕ ಶಶಿ ತರೂರ್ – Kannada News | Congress Leader Shashi Tharoor Backs PM Narendra Modi Over Donald Trump Meet in France

ನವದೆಹಲಿ, ಜೂನ್ 20: ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಗಳನ್ನು ತೀವ್ರವಾಗಿ ಟೀಕಿಸುವ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಈ ಬಾರಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ವಿಚಾರದಲ್ಲಿ ಪ್ರಧಾನಿ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೇಶದ ಹಿತಾಸಕ್ತಿ ಮತ್ತು ರಾಜತಾಂತ್ರಿಕತೆಯ ವಿಷಯ ಬಂದಾಗ ಪಕ್ಷದ ರಾಜಕೀಯವನ್ನು ಬದಿಗೆ ಸರಿಸಬೇಕು ಎಂದು ಶಶಿ ತರೂರ್ ಪ್ರತಿಪಾದಿಸಿದ್ದಾರೆ. ವಿಶ್ವ ರಾಜಕಾರಣದಲ್ಲಿ ಡೊನಾಲ್ಡ್ ಟ್ರಂಪ್ ಅವರ ನಡೆಗಳು ಮತ್ತು ಹೇಳಿಕೆಗಳು ಅತ್ಯಂತ ಅನಿರೀಕ್ಷಿತವಾಗಿರುತ್ತವೆ….

Read More

ಕಮಲಾಕರ್ ಭಟ್ ಮಾತ್ರವಲ್ಲ, ಕಲಬುರಗಿಯ ಜಮೀನ್ದಾರನ ಜೊತೆಗೂ ಸುಚಿತ್ರಾ ಲವ್ವಿಡವ್ವಿ – Kannada News | Siddapur murder Case: revealed Suchitra Love Relationship With Kalaburagi Man

ಕಾರವಾರ, (ಫೆಬ್ರವರಿ 06): ಸಿದ್ದಾಪುರ ವಸಂತ್ ನಾಯ್ಕ್​ ಕೊಲೆ ಪ್ರಕರಣದಲ್ಲಿ (Siddapur murder Case) ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಪ್ರೇಯಸಿ ಸುಚಿತ್ರಾ ಜೈಲು ಸೇರಿದ್ದು, ಇದರ ಬೆನ್ನಲ್ಲೇ ಸುಚಿತ್ರಾ ಮತ್ತು ಜ್ಯೋತಿಷಿಯ ಅನೈತಿಕ ಸಂಬಂಧದ ಬಗ್ಗೆ ಒಂದಾಂದಾಗಿ ಸಾಕ್ಷಿಗಳು ಹೊರಬರುತ್ತಿವೆ. ಇಬ್ಬರು ಮಾತನಾಡಿದ್ದಾರೆ ಎನ್ನಲಾದ ರಾಸಲೀಲೆ ಆಡಿಯೋ ರಿಲೀಸ್ ಆಗಿರುವುದು ಒಂದೇಡೆ ಆಗಿದ್ರೆ, ಇನ್ನೊಂದೆಡೆ ಸುಚಿತ್ರಾಳ ಇನ್ಸ್ಠಾ ಬಯೋ ಅನುಮಾನ ಹೆಚ್ಚಿಸಿದೆ. ಇದರ ನಡುವೆ ಇದೀಗ ಸುಚಿತ್ರಾಳ ಮೊಬೈಲ್​ ರಹಸ್ಯ ಗುಟ್ಟು ರಟ್ಟಾಗಿದ್ದು, ಸುಚಿತ್ರಾ ಹಲವರ…

Read More

ಕಾಮನ್‌ವೆಲ್ತ್ ಗೇಮ್ಸ್ ಯಾವಾಗ ಶುರು? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | Commonwealth Games 2026 Starting Date

Commonwealth Games 2026: ಬಹುನಿರೀಕ್ಷಿತ ಕಾಮನ್‌ವೆಲ್ತ್ ಗೇಮ್ಸ್​ ನಾಳೆಯಿಂದ (ಜುಲೈ 23) ಶುರುವಾಗಲಿದೆ. ಸ್ಕಾಟ್‌ಲ್ಯಾಂಡ್‌ನ ಪ್ರಸಿದ್ಧ ನಗರ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ 23ನೇ ಆವೃತ್ತಿಯ ಈ ಕ್ರೀಡಾಕೂಟದಲ್ಲಿ ಒಟ್ಟು 74 ದೇಶಗಳ ಸುಮಾರು 3000 ಅಥ್ಲೀಟ್​ಗಳು ಭಾಗವಹಿಸುತ್ತಿದ್ದಾರೆ. ಆಸ್ಟ್ರೇಲಿಯಾದಿಂದ ಸ್ಥಳಾಂತರ: ಮೊದಲು ಈ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ವಿಪರೀತ ವೆಚ್ಚದ ಕಾರಣದಿಂದಾಗಿ ಆಸ್ಟ್ರೇಲಿಯಾ ಹಿಂದೆ ಸರಿಯಿತು. ಕೊನೆಗೆ ಕ್ರೀಡಾಕೂಟವನ್ನು ಆಯೋಜನೆಯ ಉಸ್ತುವಾರಿಯನ್ನು ಸ್ಕಾಟ್‌ಲ್ಯಾಂಡ್‌ ಸರ್ಕಾರ ವಹಿಸಿಕೊಂಡಿದೆ. ಅದರಂತೆ ಈ ಬಾರಿ ಗ್ಲ್ಯಾಸ್ಗೋ ನಗರದಲ್ಲಿ ಕಾಮನ್‌ವೆಲ್ತ್…

Read More

ಕೋಲ್ಕತಾದಲ್ಲಿ ಅಮುಲ್​ನಿಂದ ವಿಶ್ವದ ಅತಿದೊಡ್ಡ ಮೊಸರು ಘಟಕ; ಕರ್ನಾಟಕದಲ್ಲಿ ನಂದಿನಿ ಎದುರು ಸಿಗದ ಗೆಲುವು ಅಮುಲ್​ಗೆ ಬಂಗಾಳದಲ್ಲಿ ಸಿಗುತ್ತಾ?

ಕೋಲ್ಕತಾ, ಜೂನ್ 1: ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಳ (GCMMF) ಒಡೆತನದ ಅಮುಲ್ ಸಂಸ್ಥೆಯು ಪಶ್ಚಿಮ ಬಂಗಾಳದ ಕೋಲ್ಕತ್ತಾ ಸಮೀಪದ ಹೌರಾದಲ್ಲಿರುವ ಸಂಕ್ರೇಲ್ ಫುಡ್ ಪಾರ್ಕ್‌ನಲ್ಲಿ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಸಮಗ್ರ ಡೈರಿ ಘಟಕವನ್ನು ಸ್ಥಾಪಿಸುತ್ತಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಮೊಸರು ಉತ್ಪಾದನಾ ಘಟಕ (Curd plant) ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಘಟಕವು ಪ್ರತಿದಿನ 10 ಲಕ್ಷ ಕಿಲೋಗ್ರಾಂ (1,000 ಮೆಟ್ರಿಕ್ ಟನ್) ಮೊಸರು ಉತ್ಪಾದಿಸುವ ಹಾಗೂ ದಿನಕ್ಕೆ…

Read More

ಉತ್ತರ ಕನ್ನಡ ಜಿಲ್ಲೆಯ ದಶಕಗಳ ರೈಲು ಕನಸಿಗೆ ರೆಕ್ಕೆ: ಹುಬ್ಬಳ್ಳಿ-ಅಂಕೋಲಾ ಹಳಿ ಜೋಡಣೆಗೆ ಸಿಕ್ತು ಗ್ರೀನ್ ಸಿಗ್ನಲ್ – Kannada News | Uttar Kannada Rail Dream: Hubballi Ankola Project Overcomes Hurdles, Set to Begin Work

ಕಾರವಾರ, ಜೂ.23: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಭಾಗದ ಜನರ ಬಹುದಿನಗಳ ಕನಸಿನ ಯೋಜನೆಯಾದ ‘ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗ’ ಆದಷ್ಟು ಬೇಗ ಅನುಷ್ಠಾನಕ್ಕೆ ಬರಲಿದೆ ಎಂದು ಕಾರವಾರ-ಅಂಕೋಲಾ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಈ ರೈಲು ಯೋಜನೆಯು ಕೇವಲ ಕರಾವಳಿ ಭಾಗದ ಜನರಿಗಷ್ಟೇ ಸೀಮಿತವಾಗಿರದೆ, ಇಡೀ ಕರ್ನಾಟಕ ರಾಜ್ಯದ ಆರ್ಥಿಕತೆಗೆ (Karnataka Economy) ದೊಡ್ಡ ಮಟ್ಟದ ಬಲ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯು…

Read More