Headlines

Bengaluru: ಫ್ರೀಯಾಗಿ ಪಾನಿಪುರಿ ಕೊಡದಿದ್ದಕ್ಕೆ ವ್ಯಾಪಾರಿ ಮೇಲೆ ಡೆಡ್ಲಿ ಅಟ್ಯಾಕ್​ – Kannada News | Vendor Stabbed for Refusing Free Panipuri in Bengaluru

ಬೆಂಗಳೂರು, ಡಿಸೆಂಬರ್​​ 19: ಉಚಿತವಾಗಿ ಪಾನಿಪುರಿ ನೀಡಲು ನಿರಾಕರಿಸಿದ್ದಕ್ಕೆ ರಸ್ತೆಬದಿ ವ್ಯಾಪಾರಿಯೋರ್ವನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ರಾತ್ರಿ ವೇಳೆ ನಡೆದಿರುವ ಈ ಘಟನೆ ಬೀದಿಬದಿ ವ್ಯಾಪಾರಿಗಳು ಮತ್ತು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪೊಲೀಸರ ಮಾಹಿತಿಯ ಪ್ರಕಾರ ಬ್ಯಾಟರಾಯನಪುರ ಮುಖ್ಯ ರಸ್ತೆಯಲ್ಲಿರುವ ಪಾಮಿಪುರಿ ಅಂಗಡಿಯಲ್ಲಿ ರಾತ್ರಿ ಸುಮಾರು 10.30ರ ವೇಳೆಗೆ ಘಟನೆ ನಡೆದಿದೆ. ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವ…

Read More

ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ

ಬೆಂಗಳೂರು, ಮಾರ್ಚ್​ 10: ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್​​. ಅಶೋಕ್ ರಾಜ್ಯ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿನ ವಿಳಂಬ ಮತ್ತು ಆದ್ಯತೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಭಿಕ್ಷಾಟನೆ ನಿರ್ಮೂಲನೆಗಾಗಿ ಸಂಗ್ರಹಿಸಲಾದ 3% ಸೆಸ್‌ನಿಂದ ಕೇಂದ್ರ ಪರಿಹಾರ ಸಮಿತಿಗೆ ನೀಡಬೇಕಾದ 23.43 ಕೋಟಿ ರೂ. ಬಾಕಿ ಉಳಿದಿದೆ ಎಂದು ಸದನದ ಗಮನ ಸೆಳೆದರು. ಅಲ್ಲದೆ, ಕೋವಿಡ್‌ ಅಥವಾ ಇತರೆ ದುರಂತಗಳಿಂದ ಪೋಷಕರನ್ನು ಕಳೆದುಕೊಂಡ 26 ಸಾವಿರ ಅನಾಥ ಮಕ್ಕಳಿಗೆ ಕಳೆದ ಏಳು ತಿಂಗಳಿಂದ…

Read More

ಬಾಕ್ಸ್​ ಆಫೀಸ್​​ನಲ್ಲಿ ಸುನಾಮಿ ಎಬ್ಬಿಸಿದ ‘ದೃಶ್ಯಂ 3’; ಮೊದಲ ದಿನ ಭರ್ಜರಿ ಕಲೆಕ್ಷನ್ – Kannada News | Drishyam 3 Box Office: Mohanlal’s Thriller Creates Storm, Earns 43.37 Cr Global on Day 1

ಮಲಯಾಳಂ ಚಿತ್ರರಂಗದಲ್ಲಿ ‘ದೃಶ್ಯಂ 3’ ಚಿತ್ರಕ್ಕೆ ಅದರದ್ದೇ ಆದ ದೊಡ್ಡ ಅಭಿಮಾನಿ ವರ್ಗ ಇದೆ. ಹಿರಿಯ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ದೃಶ್ಯಂ 3’ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬದ ರಹಸ್ಯಗಳ ಸುತ್ತ ಹೆಣೆಯಲಾದ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಮೊದಲ ದಿನದ ಕಲೆಕ್ಷನ್ ವಿವರ: ದೇಶಾದ್ಯಂತ ಒಟ್ಟು 5,506 ಶೋಗಳ…

Read More

Peepal Tree: ಅರಳಿ ಮರ ಏಕೆ ಬಾಡುವುದಿಲ್ಲ? ಸೀತಾ ದೇವಿಯ ವರದಾನದ ಪೌರಾಣಿಕ ಕಥೆ ಇಲ್ಲಿದೆ – Kannada News | The Eternal Green: Unravelling the Mystery of the Peepal Tree

ಕಲಿಯುಗದಲ್ಲಿ ಎಂದಿಗೂ ಬಾಡದ ಅರಳಿ ವೃಕ್ಷದ ಹಿಂದಿನ ರಹಸ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಭಾರತೀಯ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ವಿಶೇಷ ಮಹತ್ವವಿದೆ. “ವೃಕ್ಷೋ ರಕ್ಷತಿ ರಕ್ಷಿತಃ” ಎಂಬ ನುಡಿಯಂತೆ, ವೃಕ್ಷಗಳನ್ನು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂಬುದು ಪಾರಂಪರಿಕ ನಂಬಿಕೆ. ಪೂಜ್ಯನೀಯ ವೃಕ್ಷಗಳಲ್ಲಿ, ಆಯುರ್ವೇದ ಗುಣಗಳನ್ನು ಹೊಂದಿರುವ ಮರಗಳಲ್ಲಿ, ದೇವತಾ ವೃಕ್ಷಗಳಲ್ಲಿ ಅರಳಿ ಮರಕ್ಕೆ ಅಗ್ರಸ್ಥಾನವಿದೆ. ಅನೇಕ ದೇವರುಗಳಿಗೆ ಪ್ರತೀಕವಾಗಿ ವೃಕ್ಷಗಳನ್ನು…

Read More

ಮೆಟ್ರೋ ಟಿಕೆಟ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಏರಿಕೆಯಾಗುತ್ತಾ ಕಾವೇರಿ ನೀರಿನ ದರ? ಜಲಮಂಡಳಿ ಅಧ್ಯಕ್ಷರಿಂದ ಸ್ಪಷ್ಟನೆ – Kannada News | No Proposal to Hike Cauvery Water Tariff in Bengaluru After Metro Fare Increase, Clarifies BWSSB Chairman

ಬೆಂಗಳೂರು, ಫೆಬ್ರವರಿ 5: ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರ (Water Price) ಹೆಚ್ಚಳವಾಗಲಿದೆ ಎಂಬ ವದಂತಿಗಳಿಗೆ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಬ್ರೇಕ್ ಹಾಕಿದ್ದಾರೆ. ನೀರಿನ ದರ ಏರಿಕೆ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾವೇರಿ ನೀರಿನ ಬೆಲೆ ಏರಿಕೆ ಕುರಿತು ವದಂತಿಗಳು ಹಬ್ಬಿರುವ ಕಾರಣ ಬೆಂಗಳೂರಿನಲ್ಲಿ ‘ಟಿವಿ9’ಗೆ ಮಾಹಿತಿ ನೀಡಿದ ಅವರು, ಕಾವೇರಿ ನೀರಿನ ಬೆಲೆ ಏರಿಕೆ ಕುರಿತು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ….

Read More

ತಿಂಗಳಿಗೆ ಕೇವಲ 5,000 ರೂ ಹೂಡಿಕೆಯಿಂದ 21 ವರ್ಷದಲ್ಲಿ 1 ಕೋಟಿ ಸಂಪತ್ತು ಸೃಷ್ಟಿ ಸಾಧ್ಯ – Kannada News | Monthly SIP of Rs 5,000 and 5pc step up, know how many years it take to get Rs 1 crore wealth

ಹಣದ ಸಾಂದರ್ಭಿಕ ಚಿತ್ರImage Credit source: Getty Images ಸಂಪತ್ತು ಗಳಿಸುವ ಇರುವ ಸಿದ್ಧ ಸೂತ್ರವೆಂದರೆ ಹಣ ಗಳಿಕೆ, ಹಣ ಉಳಿಸುವಿಕೆ ಮತ್ತು ಹಣ ಹೂಡಿಕೆ. ಈ ಮೂರೂ ಸೇರಿದರೆ ಮಾತ್ರ ಹಣವಂತರಾಗಲು ಸಾಧ್ಯ. ಹಣ ಎಷ್ಟೇ ಉಳಿಸಿದರೂ ಆ ಹಣವನ್ನು ಉತ್ತಮ ಆದಾಯ ತರಬಲ್ಲ ಕಡೆ ಹೂಡಿಕೆ ಮಾಡುವುದು ಬಹಳ ಮುಖ್ಯ. ಹಲವು ಹೂಡಿಕೆ ಮಾರ್ಗಗಳಲ್ಲಿ ಮ್ಯೂಚುವಲ್ ಫಂಡ್ ಎಸ್​ಐಪಿಯೂ ಒಂದು. ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್​ಗಳು ಉತ್ತಮ ಆದಾಯ ನೀಡಬಲ್ಲುವು. ವಾರ್ಷಿಕ ಶೇ. 8ರಿಂದ 14ರಷ್ಟು…

Read More

Father’s Day Special: ವಿಶ್ವ ಅಪ್ಪಂದಿರ ದಿನದಂದು ನಿಮ್ಮ ತಂದೆಗಾಗಿ ಮಾಡಿ ಆರೋಗ್ಯಕರ ರಾಗಿ ಕೇಕ್‌ – Kannada News | Father’s Day Special: Make a healthy Finger millet cake for your dad on Father’s Day

ನಮ್ಮ ಜೀವನದ ನಿಜವಾದ ಸೂಪರ್ ಹೀರೋ ತಂದೆಯೇ (Father) ಎಂಬುದನ್ನು ಅಲ್ಲಗಳೆಯುವಂತಿಲ್ಲ. ತನ್ನ ಆಸೆ ಆಕಾಂಕ್ಷೆಗಳನ್ನು ಪಕ್ಕಕ್ಕಿಟ್ಟು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ದುಡಿಯುವ ಶ್ರಮಜೀವಿ, ತ್ಯಾಗಮಯಿ  ಎಂದರೆ ಅದು ಅಪ್ಪ ಮಾತ್ರ.  ಇಂತಹ ತಂದೆಯ ತ್ಯಾಗ ಮತ್ತು ಪ್ರೀತಿಯನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರದಂದು ವಿಶ್ವ ತಂದೆಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಮಕ್ಕಳು ತಮ್ಮ ತಂದೆಗೆ ಗಿಫ್ಟ್‌ ನೀಡುವ ಮೂಲಕ ಅವರನ್ನು ಖುಷಿ ಪಡಿಸುತ್ತಾರೆ. ಈ ಬಾರಿಯ ಫಾದರ್ಸ್‌ ಡೇಯಂದು ಅಪ್ಪನಿಗೆ…

Read More

ಕಾಶಿ ಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕನ್ನ: ಲಾಕರನ್ನೇ ಕದ್ದೊಯ್ದ ಕಳ್ಳರು; ಬಂಧನ – Kannada News | House Robbery During Kashi Pilgrimage: Thieves Who Stole Locker Arrested

ವಶಕ್ಕೆ ಪಡೆದುಕೊಂಡಿರುವ ಚಿನ್ನಾಭರಣಗಳುImage Credit source: tv9 kannada ಬೆಂಗಳೂರು, ಮೇ 26: ನಗರದಲ್ಲಿ ಕಳ್ಳತನ (Theft) ಕೇಸ್​​ಗಳು ಕಡಿಮೆಯಾಗುತ್ತಿಲ್ಲ. ಭಿನ್ನ ವಿಭಿನ್ನ ರೀಯಿಯಲ್ಲಿ ಖದೀಮರು ದೋಚುತ್ತಿರುತ್ತಾರೆ. ಇತ್ತೀಚೆಗೆ ಒಂದು ತಂಡ ಜ್ಯುವೆಲರಿ ಶಾಪ್​​ಗೆ ಕನ್ನ ಹಾಕಿದ್ದರು. ಇದೀಗ ಮತ್ತೊಂದು ತಂಡ ಕಾಶಿ ಯಾತ್ರೆಗೆ ಹೋಗಿದ್ದವರ ಮನೆ ಟಾರ್ಗೆಟ್ ಮಾಡಿ ನುಗ್ಗಿದ್ದಾರೆ. ಎರಡು ಕೇಸ್​​​ ಭೇದಿಸಿರುವ ಪೊಲೀಸರು ದೋಚಿರುವ ವಸ್ತುಗಳ ಸಮೇತ ಆರೋಪಿಗಳ ಹೆಡೆಮುರಿ (Arrest) ಕಟ್ಟಿದ್ದಾರೆ. ಕಾಶಿ ಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರು…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 22ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ನನ್ನ ಕೆಲಸ ಎಷ್ಟೋ ಅಷ್ಟರ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ ಎಂಬ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ಅರ್ಥಾತ್ ಎಷ್ಟು ಹಣ ಬರುತ್ತದೋ ಅದಕ್ಕೆ ತಕ್ಕಂತೆ ಕೆಲಸ ಎಂಬುದನ್ನು ಗಟ್ಟಿ ಮಾಡಿಕೊಂಡು, ಬದ್ಧರಾಗಿ ನಿಲ್ಲಲಿದ್ದೀರಿ. ದೇವಸ್ಥಾನಕ್ಕೆ ಅಥವಾ ನಿಮ್ಮ ಧಾರ್ಮಿಕ ನಂಬಿಕೆಗೆ ಅನುಸಾರವಾಗಿ ಸ್ವಲ್ಪ ಸಮಯ ಪ್ರಶಾಂತತೆ, ನೆಮ್ಮದಿ ನೀಡುವಂಥ ಸ್ಥಳಕ್ಕೆ ತೆರಳುವುದರಿಂದ ಸಮಾಧಾನದಿಂದ ಇರಲು ಸಾಧ್ಯವಾಗುತ್ತದೆ. ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವಂಥವರಿಗೆ…

Read More

ನಿರ್ಬಂಧದ ಮದ್ಯೆಯೂ ನಂದಿ ಗಿರಿಧಾಮಕ್ಕೆ ಬಂದ ಪ್ರೇಮಿಗಳು, ಸೆಲೆಬ್ರೇಷನ್​ಗೆ ಆಗಮಿಸಿ ನಿರಾಸೆಯಿಂದ ವಾಪಸ್ – Kannada News | Valentine’s Day Entry Ban at Nandi Hills: Lovers Return Disappointed After Chikkaballapur Administration Restricts Access

ಚಿಕ್ಕಬಳ್ಳಾಪುರ, ಫೆಬ್ರವರಿ 14: ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವವಿಖ್ಯಾತ ನಂದಿಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಂದಿಬೆಟ್ಟಕ್ಕೆ ಪ್ರವೇಶ ಬಂದ್ ಮಾಡಲಾಗಿದೆ. ಆದಾಗ್ಯೂ ಬೆಳ್ಳಂಬೆಳಗ್ಗೆ ಅನೇಕ ಪ್ರೇಮಿಗಳು ಪ್ರವೇಶ ದ್ವಾರದ ವರೆಗೂ ಬಂದು ನಿರಾಸೆಯಿಂದ ವಾಪಸ್ ಆದರು. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭುಜಿ ಅವರು ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಿದ್ದಾರೆ. ಪ್ರೇಮಿಗಳ ದಿನದಂದು ಹೆಚ್ಚಿನ…

Read More