Headlines

ಈ 7 ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಾರದು ಎಚ್ಚರ! – Kannada News | How Caffeine on an Empty Stomach Affects Digestion and Energy

ಕೆಲವರಿಗೆ ಚಹಾ (Tea) ಕೇವಲ ಪಾನೀಯವಲ್ಲ, ಅದು ಅವರ ದಿನಚರಿಯ ಪ್ರಮುಖ ಭಾಗ. ಪ್ರತಿದಿನವನ್ನು ಚಹಾದೊಂದಿಗೆ ಪ್ರಾರಂಭಿಸುವುದು ಹಲವರಿಗೆ ಅಭ್ಯಾಸ. ಅದರಲ್ಲಿಯೂ ಹಾಸಿಗೆಯಿಂದ ಎದ್ದ ತಕ್ಷಣ ಚಹಾ ಕುಡಿಯುವವರಿದ್ದಾರೆ, ಇನ್ನು ಕೆಲವರು ಚಹಾ ಕುಡಿದ ಮೇಲೆಯೇ ಶಕ್ತಿ ಬರುತ್ತದೆ ಎಂದು ಅದನ್ನೇ ಅವಲಂಬಿಸಿರುತ್ತಾರೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಮನಸ್ಸಿಗೆ ಖುಷಿ ನೀಡಬಹುದು. ಆದರೆ ಆರೋಗ್ಯಕ್ಕೆ… ಹೌದು, ಆರೋಗ್ಯ ತಜ್ಞರು ಈ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುತ್ತಾರೆ. ಅದರಲ್ಲಿಯೂ 7 ರೀತಿಯ ಜನರು…

Read More

ಪಿಒಕೆಯ ದೌರ್ಜನ್ಯಗಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿ’: ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತ ಆಗ್ರಹ – Kannada News | Hold Pakistan Accountable For Violence In PoK Indian Government Urges International Community

ನವದೆಹಲಿ, ಜುಲೈ 31: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಸಾರ್ವಜನಿಕರ ಮೇಲಿನ ಕ್ರೂರ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಸಮುದಾಯವು ತಕ್ಷಣವೇ ಹೊಣೆಗಾರರನ್ನಾಗಿ ಮಾಡಬೇಕೆಂದು ಭಾರತ ಸರ್ಕಾರ ಬಲವಾಗಿ ಆಗ್ರಹಿಸಿದೆ. ಪಿಒಕೆಯಲ್ಲಿ ನಡೆಯುತ್ತಿರುವ ನಿಯಂತ್ರಣವಿಲ್ಲದ ಹಿಂಸಾಚಾರ, ಶಾಂತಿಯುತ ಪ್ರತಿಭಟನಾಕಾರರ ಹತ್ಯೆ ಮತ್ತು ಅಲ್ಲಿನ ಸ್ಥಳೀಯ ಪ್ರಜೆಗಳ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಪಾಕಿಸ್ತಾನಿ ಸರ್ಕಾರದ ನಡೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ…

Read More

ICC ODI Rankings: ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ ಗಿಲ್; ಅಗ್ರ ಐವರಲ್ಲಿ ಮೂವರು ಭಾರತೀಯರು – Kannada News | ICC ODI Rankings: Shubman Gill Overtakes Virat Kohli; Team India Dominates List

ಐಸಿಸಿ ಬಿಡುಗಡೆ ಮಾಡಿರುವ ಇತ್ತೀಚಿನ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾದ ಆಟಗಾರರ ಪ್ರಾಬಲ್ಯ ಮುಂದುವರೆದಿದೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಆಟಗಾರರೆಲ್ಲ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಮುಂಬಡ್ತಿ ಪಡೆದಿದ್ದಾರೆ. ಅದರಲ್ಲೂ ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಅಫ್ಘಾನಿಸ್ತಾನದ ವಿರುದ್ಧ ಅಬ್ಬರಿಸಿದ್ದ ಶುಭ್​ಮನ್ ಗಿಲ್, ಏಕದಿನ ರ್ಯಾಂಕಿಂಗ್​ನಲ್ಲಿ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ (PC-PTI). ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಕೊಹ್ಲಿ ತಪ್ಪಿಸಿಕೊಂಡಿದ್ದರು. ಹೀಗಾಗಿ ಕೊಹ್ಲಿ ಏಕದಿನ ರ್ಯಾಂಕಿಂಗ್​ನಲ್ಲಿ ಕುಸಿತ ಅನುಭವಿಸಿದ್ದಾರೆ. ಇದರ ಫಲವಾಗಿ ಶುಭ್​ಮನ್…

Read More

ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪತ್ರ: ಕರ್ನಾಟಕ ಸಿಎಂ ಆಗ್ರಹವೇನು? – Kannada News | Siddaramaiah’s Letter to PM Modi: Karnataka CM Demands Halt to VB G Ramji Act

ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಬೆಂಗಳೂರು, ಡಿಸೆಂಬರ್​​ 30: ವಿಬಿ-ಜಿ ರಾಮ್ ಜಿ ಕಾಯ್ದೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಹೊಸ ಕಾಯ್ದೆಯು ಉದ್ಯೋಗ ಖಾತರಿ ತತ್ವಕ್ಕೆ ಮಾರಕವಾಗಿದೆ. ಈ ಹಿಂದಿನ ಮನರೇಗಾ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ್ದು ಶೇ. 90 ಮತ್ತು ಶೇ.10 ರಾಜ್ಯದ ಹಂಚಿಕೆಯಿತ್ತು. ಆದರೆ ಈಗಿನ ಕಾಯ್ದೆಯು ರಾಜ್ಯ ಸರ್ಕಾರದ ಆರ್ಥಿಕತೆಗೆ ಹೊರೆಯಾಗಲಿದ್ದು, 258, 250ನೇ ವಿಧಿಯ ಉಲ್ಲಂಘನೆ ಆಗಿದೆ ಎಂದಿದ್ದಾರೆ. ಸಿದ್ದರಾಮಯ್ಯ ಬರೆದ…

Read More

ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳ ವಿರುದ್ಧ FIR ಹಾಕುವ ಪೊಲೀಸರಿಗೆ ಹೊಸ ಮಾರ್ಗಸೂಚಿ – Kannada News | Karnataka DGP Saleem new guidelines To Police For FIR Against social media posts

ಬೆಂಗಳೂರು, (ಫೆಬ್ರವರಿ 09): ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ಪೊಲೀಸರ (Police) ಮೇಲೆ ಸಾಕಷ್ಟು ಆರೋಪಗಳು ಕೇಳಿಬರುತ್ತಿರುವುದು ವರದಿಯಾಗಿವೆ. ಹೀಗಾಗಿ ರಾಜ್ಯದ ಪೊಲೀಸರಿಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ, ಐಜಿಪಿ) ಎಂಎ ಸಲೀಂ (DG IGP dr Saleem) ಮಹತ್ವದ ಸೂಚನೆ ನೀಡಿದ್ದರು. ಪೊಲೀಸರು ಜನರ ಜೊತೆ ಹೇಗೆ ನಡೆದುಕೊಳ್ಳಬೇಕೆಂದು ಮಾರ್ಗಸೂಚಿಯನ್ನು ಹೊರಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸುವುದು ಮತ್ತು ಆರೋಪಿಗಳನ್ನು ಬಂಧಿಸುವ ಕುರಿತು ಡಿಜಿ, ಐಜಿಪಿ ಹೊಸ…

Read More

IND vs BAN: ತಂಡದಿಂದ ಹೊರಗಿಟ್ಟಿದ್ದವರಿಗೆ ಮೊದಲ ಓವರ್​ನಲ್ಲೇ ಉತ್ತರ ನೀಡಿದ ರೇಣುಕಾ – Kannada News | Renuka Singh’s Fiery Comeback: Wicket in First Over vs Bangladesh | 2026 T20 World Cup

2026 ರ ಮಹಿಳಾ ಟಿ20 ವಿಶ್ವಕಪ್‌ನ ( Women’s T20 World Cup 2026) 23 ನೇ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು (India vs Bangladesh) ಎದುರಿಸಿತ್ತು. ಈ ಪಂದ್ಯಾವಳಿಯಲ್ಲಿ ಎರಡೂ ತಂಡಗಳ ನಾಲ್ಕನೇ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಇತ್ತ ಟಾಸ್ ಸೋತ ಟೀಂ ಇಂಡಿಯಾ ಈ ಪಂದ್ಯಕ್ಕೆ ಎರಡು ಬದಲಾವಣೆಗಳನ್ನು ಮಾಡಿತ್ತು. ಅದರಂತೆ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದ ಅನುಭವಿ ವೇಗದ…

Read More

ಗೊಂಬೆಯಂತಿದ್ದ ಹೆಂಡತಿಯನ್ನು ಬಿಟ್ಟು ಪರಸ್ತ್ರೀ ಜತೆಗೆ ಸಂಬಂಧ: ಪೆನ್ ಡ್ರೈವ್​​ನಲ್ಲಿತ್ತು ಗಂಡನ ರಾಸಲೀಲೆ, ಕಿರುಕುಳದ ಸಾಕ್ಷಿ! – Kannada News | Davangere Murder: Govt Employee Kills Wife; Dowry Harassment, Affair Suspected

ದಾವಣಗೆರೆ ಪತ್ನಿ ಕೊಲೆ,Image Credit source: tv9 kannada ದಾವಣಗೆರೆ, ಏ.18: ಮದುವೆಯ ಹೊತ್ತಿನಲ್ಲಿ ಆ ದಂಪತಿಗಳು ಸ್ವರ್ಗದಿಂದ ಇಳಿದು ಬಂದ ಜೋಡಿಯಂತೆ ಕಂಡಿದ್ದರು. ಎಲ್ಲರೂ, ವಾವ್ಹ್ ಏನ್ ಚೆನ್ನಾಗಿದೆ ಜೋಡಿ, ಅದರಲ್ಲೂ ಹುಡುಗಿಯನ್ನು ಸುಂದರ ಹುಡುಗಿ ಎಂದು ಹೇಳಿದ್ದರು. ಅವರು ಅದ್ಧೂರಿ ಪ್ರೀ ವೆಡ್ಡಿಂಗ್ ಶೂಟಿಂಗ್, ಮದುವೆ ಮಾಡಿಕೊಂಡಿದ್ದರು. ಎಲ್ಲವೂ ಸುಖಾಂತ್ಯ ಕಾಣಬೇಕಿತ್ತು. ಆದರೆ, ಎರಡೇ ವರ್ಷಕ್ಕೆ ಆ ಸುಂದರ ಸಂಸಾರ ಚಿತೆಯೇರಿದೆ. ಪರಸ್ತ್ರೀ ಸಂಘಕ್ಕೆ ಬಿದ್ದ ಪತಿ, ತನ್ನನ್ನೇ ನಂಬಿ ಬಂದ ಪತ್ನಿಯನ್ನು ಚಿತ್ರಹಿಂಸೆ…

Read More

‘ದುಬೈ’ನಲ್ಲಿ ಸಿನಿಮಾ ಮುಹೂರ್ತ: ಕನಸು ಹಂಚಿಕೊಂಡ ಆರ್ ಚಂದ್ರು – Kannada News | R Chandru talks about his upcoming movies here is the video

ಕನ್ನಡದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾಗಿರುವ ಆರ್ ಚಂದ್ರು (R Chandru), ನಿರ್ಮಾಪಕರೂ ಸಹ ಹೌದು. ‘ತಾಜ್ ಮಹಲ್’, ‘ಕಬ್ಜ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಅವರ ನಿರ್ಮಾಣದ ‘ಫಾದರ್’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ‘ಫಾದರ್’ ಸಿನಿಮಾದ ಬಿಡುಗಡೆ ಮಾಹಿತಿ ಹಂಚಿಕೊಂಡಿರುವ ಆರ್ ಚಂದ್ರು, ತಮ್ಮ ನಿರ್ದೇಶನದ ಹೊಸ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ನಾನು ಹೊಸದೊಂದು ಸಿನಿಮಾ ಕತೆ ರೆಡಿ ಮಾಡಿಕೊಂಡಿದ್ದೀನಿ. ಈ ಬಾರಿ ಕಂಟೆಂಟ್ ಚೆನ್ನಾಗಿ ಮಾಡಿಕೊಂಡಿದ್ದೀನಿ. ದುಬೈಗೆ ಹೋಗಿದ್ದಾಗ, ಇಲ್ಲಿ ಆಫೀಸ್ ಮಾಡಿ,…

Read More

ರಾಮಾಯಣದ ಬಗ್ಗೆ ಪ್ರಕಾಶ್ ರಾಜ್ ಮಾತನಾಡಿದ ವಿಡಿಯೋ ವೈರಲ್; ತೀವ್ರ ಟೀಕೆ – Kannada News | Prakash Raj gets trolled for saying Ram a North Indian and Ravan a South Indian

ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರು ರಾಜಕೀಯದ ವಿಷಯಗಳ ಬಗ್ಗೆ ಆಗಾಗ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಬಿಜೆಪಿ ನಿಲುವುಗಳನ್ನು ಅವರು ಆಗಾಗ ವಿರೋಧಿಸುತ್ತಾರೆ. ಆ ಕಾರಣದಿಂದ ಅವರನ್ನು ವಿರೋಧಿಗಳು ಟ್ರೋಲ್ ಮಾಡುತ್ತಾರೆ. ಕೇರಳ ಸಾಹಿತ್ಯ ಉತ್ಸವದ ವೇದಿಕೆಯಲ್ಲಿ ಪ್ರಕಾಶ್ ರಾಜ್ ಅವರು ಮಾತನಾಡಿದ್ದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ರಾಮಾಯಣದ (Ramayana) ಬಗ್ಗೆ ಮಾತನಾಡಿದ್ದಾರೆ. ಈಗಿನ ರಾಜಕೀಯ ಪರಿಸ್ಥಿತಿಯ ವಿಡಂಬನೆಗೆ ಅವರು ರಾಮಾಯಣವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಅವರು ಮಾತನಾಡಿದ್ದನ್ನು ಅನೇಕರು ಖಂಡಿಸುತ್ತಿದ್ದಾರೆ….

Read More

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಕಲ್ಲಿದ್ದಲು ಗಣಿ ಸ್ಫೋಟ: 32 ಮಂದಿ ಸಾವು – Kannada News | Quetta Coal Mine Explosion: 32 Dead, Mine Safety Concerns Emerge in Pakistan

ಇಸ್ಲಾಮಾಬಾದ್, ಜುಲೈ 31: ಪಾಕಿಸ್ತಾನ(Pakistan)ದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 32 ಕಾರ್ಮಿಕರು ಸಾವನ್ನಪ್ಪಿದ್ದು, 10 ಮಂದಿ ಸಿಲುಕಿಕೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದೆಂಬ ಭೀತಿಯ ನಡುವೆ ರಕ್ಷಣಾ ತಂಡಗಳು ಗಣಿಯಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಬಲೂಚಿಸ್ತಾನ್‌ನ ಪ್ರಾಂತೀಯ ರಾಜಧಾನಿ ಕ್ವೆಟ್ಟಾದ ಹೊರವಲಯದಲ್ಲಿ ಸ್ಫೋಟ ಸಂಭವಿಸಿದೆ. ಸರ್ಕಾರಿ ಗಣಿ ನಿರೀಕ್ಷಕ ಘನಿ ಬಲೂಚ್ ಪ್ರಕಾರ, ಭೂಗತ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸಾಮಾನ್ಯ ಆದರೆ ಮಾರಕ ಅಪಾಯವಾದ ಗಣಿ ಒಳಗೆ ಮೀಥೇನ್ ಅನಿಲ ಸಂಗ್ರಹವಾಗುವುದರಿಂದ…

Read More