Headlines

ಜೆಮಿಮಾ ರೊಡ್ರಿಗಸ್​ಗೆ 12 ಲಕ್ಷ ರೂ. ದಂಡ

ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿ ಕಣಕ್ಕಿಳಿಯುತ್ತಿರುವ ಜೆಮಿಮಾ ರೊಡ್ರಿಗಸ್​ಗೆ (Jemimah Rodrigues) 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಗುಜರಾತ್ ಜೈಂಟ್ಸ್ ವಿರುದ್ಧದದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ ಸಮಯದೊಳಗೆ 20 ಓವರ್​ಗಳನ್ನು ಪೂರ್ಣಗೊಳಿಸದ ಕಾರಣ ಅವರಿಗೆ ದಂಡ ವಿಧಿಸಿದ್ದಾರೆ. ವುಮೆನ್ಸ್ ಪ್ರೀಮಿಯರ್ ಲೀಗ್​ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್​ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಈ ಸಮಯದೊಳಗೆ 20 ಓವರ್​ಗಳನ್ನು ಪೂರ್ಣಗೊಳಿಸದಿದ್ದರೆ ಆಯಾ ತಂಡಗಳ ನಾಯಕಿಯರಿಗೆ…

Read More

ದೈವದ ಅನುಕರಣೆ ಮಾಡಿದ ಬಾಲಿವುಡ್ ಸ್ಟಾರ್ ರಣ್ವೀರ್​​ಗೆ ಹೈಕೋರ್ಟ್ ತರಾಟೆ – Kannada News | Karnataka High Court slams Ranveer Singh in hurting religious sentiment case

‘ಕಾಂತಾರ’ (Kantara) ಸಿನಿಮಾ ಕರಾವಳಿಯ ಸಂಸ್ಕೃತಿ, ದೈವದ ಆಚರಣೆಗಳನ್ನು ವಿಶ್ವದಾದ್ಯಂತ ಪರಿಚಯ ಮಾಡಿಸಿತು. ಆದರೆ ಸಿನಿಮಾ ನೋಡಿದ ಮಂದಿ ಕೆಲವರು ಹಾಸ್ಯಕ್ಕಾಗಿ, ಇನ್ನಿತರೆ ಕಾರಣಗಳಿಗಾಗಿ ದೈವದ ಅನುಕರಣೆ ಮಾಡಲು ಆರಂಭಿಸಿದರು. ಇದರಿಂದ ದೈವವನ್ನು ನಂಬುವ ಭಕ್ತರ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂದು ಚಿತ್ರತಂಡ ಹೇಳಿದರೂ ಸಹ ಅನುಕರಣೆ ನಿಂತಿಲ್ಲ. ಕೆಲ ತಿಂಗಳ ಹಿಂದೆ ಬಾಲಿವುಡ್ ಸ್ಟಾರ್ ನಟ ರಣ್​​ವೀರ್ ಸಿಂಗ್ ಸಹ ಗೋವಾ ಸಿನಿಮೋತ್ಸವದಲ್ಲಿ ವೇದಿಕೆ ಮೇಲೆ ಅಸಭ್ಯವಾಗಿ ದೈವದ ಅನುಕರಣೆ ಮಾಡಿದ್ದರು. ಬಳಿಕ ಕ್ಷಮೆ ಕೇಳಿದರಾದರೂ…

Read More

Amarnath Yatra: ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಚಾರ ಮುಕ್ತ – Kannada News | Amarnath Yatra Resumes: Pilgrims Head to Baltal After 6 Day Halt in Jammu and kashmir

ಅಮರನಾಥ ಯಾತ್ರೆ ಪುನರಾರಂಭImage Credit source: Getty Images ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ, ಭೂಕುಸಿತ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಪವಿತ್ರ ಅಮರನಾಥ ಯಾತ್ರೆಯನ್ನು ಶನಿವಾರದಂದು ಆಡಳಿತ ಮಂಡಳಿಯು ಅಧಿಕೃತವಾಗಿ ಪುನರಾರಂಭಿಸಿದೆ. ಹವಾಮಾನ ಸುಧಾರಿಸಿ, ಉಧಮ್‌ಪುರ-ರಾಂಬನ್ ಮಾರ್ಗದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಅವಶೇಷಗಳನ್ನು ತೆರವುಗೊಳಿಸಿದ ನಂತರ, ಭಗವತಿ ನಗರದ ಮೂಲ ಶಿಬಿರದಿಂದ ಹೊಸ ಯಾತ್ರಿಕರ ತಂಡಕ್ಕೆ ಅಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದಾರೆ. 18 ನೇ ಬ್ಯಾಚ್‌ನಿಂದ ಬಾಲ್ಟಾಲ್ ಮಾರ್ಗದತ್ತ ಪ್ರಯಾಣ:…

Read More

ಪಶ್ಚಿಮ ಘಟ್ಟದಲ್ಲಿ ಮಳೆಯ ಅಬ್ಬರ: ಹಾಲ್ನೊರೆಯಂತೆ ಧುಮ್ಮಿಕ್ಕಿದ ಗೋಕಾಕ್ ಜಲಪಾತ – Kannada News | Gokak Falls Roars Amidst Western Ghats Torrential Rains: Ghataprabha River Overflows, Bridge Submerged

ಬೆಳಗಾವಿ, ಜುಲೈ 30: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ಮತ್ತು ಜಲಪಾತಗಳು ತುಂಬಿ ಹರಿಯುತ್ತಿವೆ. ಮಳೆಯ ಅಬ್ಬರಕ್ಕೆ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿರುವ ಪ್ರಸಿದ್ಧ ಗೋಕಾಕ್ ಜಲಪಾತ ಹಾಲ್ನೊರೆಯಂತೆ ಧುಮ್ಮಿಕ್ಕಿ ಭೋರ್ಗರೆಯುತ್ತಿದೆ. ಹೆಚ್ಚಿದ ನೀರಿನ ಮಟ್ಟದಿಂದಾಗಿ ಸ್ಥಳೀಯ ಜನಜೀವನಕ್ಕೆ ತೊಂದರೆಯಾಗಿದ್ದು, ಗೋಕಾಕ್ ನಗರ ಮತ್ತು ಶಿಂಗಳಾಪುರ ಗ್ರಾಮದ ನಡುವೆ ಇರುವ ಪ್ರಮುಖ ಬ್ರಿಡ್ಜ್‌ ಕಮ್ ಬ್ಯಾರೇಜ್ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದರಿಂದಾಗಿ ಈ…

Read More

ಮೊದಲ ಬಾರಿಗೆ ಮಗಳ ಪರಿಚಯಿಸಿದ ನೀನಾಸಂ ಸತೀಶ್ – Kannada News | Ninasam Satish Introduce Her Daughter To fans video goes viral

ನೀನಾಸಂ ಸತೀಶ್ ಅವರ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ರವಿಚಂದ್ರನ್, ದುನಿಯಾ ವಿಜಯ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ವೇದಿಕೆ ಮೇಲೆ ಮತ್ತೋರ್ವ ವಿಶೇಷ ವ್ಯಕ್ತಿ ಗಮನ ಸೆಳೆಯುತ್ತಿದ್ದರು. ಅವರೇ ನೀನಾಸಂ ಸತೀಶ್ ಅವರ ಮಗಳು. ಇಷ್ಟು ದಿನ ಸತೀಶ್ ಅವರು ವೇದಿಕೆ ಮೇಲೆ ಮಗಳನ್ನು ಪರಿಚಯ ಮಾಡಿಸಿಲ್ಲ. ಈಗ ಅವರು ಮಗಳನ್ನು ವೇದಿಕೆ ಮೇಲೆ ಕರೆದರು. ಆ ಸಂದರ್ಭದಲ್ಲಿ ಮಗಳು ಭಾವುಕಳಾದಳು. ಅಪ್ಪನಿಗೆ ಆಲ್…

Read More

ಕಂಡೋರ ಕಾಸಲ್ಲಿ ಶೋಕಿ ಮಾಡ್ತಿದ್ದ ಶ್ರೀಕಿ: ಬೇನಾಮಿಯಾಗಿ ಶ್ರೀಕೃಷ್ಣ ಸಂಪಾದಿಸಿದ್ದ ಕೋಟಿ ಕೋಟಿ ಆಸ್ತಿ – Kannada News | Bitcoin Scam Kingpin Sriki’s Benami Empire: ED Uncovers Lavish Life

ಬೆಂಗಳೂರು, ಏಪ್ರಿಲ್​​ 22: ಬಿಟ್ ಕಾಯಿನ್ ಕಿಂಗ್ ಶ್ರೀಕಿ (Sriki) ಲೈಫ್ ಸ್ಟೈಲ್ ಯಾವ ಕುಬೇರನಿಗೂ ಕಡಿಮೆ ಇರಲಿಲ್ಲ. ಸ್ವಂತ ಅಂತ ಏನಿಲ್ಲ ಅಂದರೂ ಬೇರೆಯವರ ದುಡ್ಡಲ್ಲಿ ಈತ ಶೋಕಿ ಮಾಡುತ್ತಿದ್ದ. ಇಡಿ ದಾಳಿ ಬೆನ್ನಲ್ಲೆ ಶ್ರೀಕಿಯ ಒಂದೊಂದೆ ಲೀಲೆಗಳು ಹೊರಬರುತ್ತಿವೆ. ಬೇನಾಮಿಯಾಗಿ ಶ್ರೀಕಿ ಕೋಟಿ ಕೋಟಿ ಆಸ್ತಿ (Property) ಸಂಪಾದಿಸಿದ್ದ. ಶ್ರೀಕಿ ಪರಿಚಯವೇ ನಲಪಾಡ್​ಗೂ ಸಂಕಷ್ಟ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ, ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್. ನಿನ್ನೆಯಷ್ಟೆ ಇ.ಡಿ ಅಧಿಕಾರಿಗಳು ದಾಳಿ ಮಾಡಿ…

Read More

ಕೇಂದ್ರದ ಈ ಪ್ರಮುಖ ಹಣಕಾಸು ಯೋಜನೆಗಳಲ್ಲಿ ಮಹಿಳೆಯರೇ ಹೆಚ್ಚು ಫಲಾನುಭವಿಗಳು

ಇವತ್ತು ಮಾರ್ಚ್ 18, ಅಂತರರಾಷ್ಟ್ರೀಯ ಮಹಿಳೆಯರ ದಿನ (International Women’s Day). ಕೇಂದ್ರ ಸರ್ಕಾರ ಮಹಿಳೆಯರ ಅಭ್ಯುದಯ ದೃಷ್ಟಿಯಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಹಾಕಿದೆ. ಮಹಿಳೆಯರಿಗೆಂದೇ ಸೀಮಿತವಾದ ಸುಕನ್ಯಾ ಸಮೃದ್ದಿ ಯೋಜನೆಯಂತಹ ಸ್ಕೀಮ್​ಗಳಿವೆ. ಹಾಗೆಯೇ, ಸರ್ವರಿಗೂ ಅನ್ವಯವಾಗುವಂತೆ ಸರ್ಕಾರ ರೂಪಿಸಿದ ಕೆಲ ಉತ್ತಮ ಹಣಕಾಸು ಯೋಜನೆಗಳೂ ಕೂಡ ಮಹಿಳೆಯರಿಗೆ ವರದಾನವಾಗಿವೆ. ಅಸಂಘಟಿತ ವಲಯದಲ್ಲಿರುವ ಮಹಿಳೆಯರಿಗೆ ಬಹಳ ಉಪಯುಕ್ತವಾಗಿರುವ ಮೂರು ಪ್ರಮುಖ ಹಣಕಾಸು ಯೋಜನೆಗಳ ವಿವರ ಇಲ್ಲಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆ ಹತ್ತು ವರ್ಷದ ಹಿಂದೆ ಆರಂಭವಾದ ಪಿಎಂ ಮುದ್ರಾ…

Read More

ಪ್ರಧಾನಿ ಮೋದಿ ರಾಜಿ ಮಾಡಿಕೊಂಡು ರಾಷ್ಟ್ರವನ್ನೇ ಮಾರಿದ್ದಾರೆ; ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಆರೋಪ – Kannada News | PM Modi is compromised, sold the nation Rahul Gandhi lashes out on US trade deal

ನವದೆಹಲಿ, ಫೆಬ್ರವರಿ 3: ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾಗ ಭಾರಿ ಗದ್ದಲ ಭುಗಿಲೆದ್ದಿತು. ಚೀನಾದ ವಿಷಯದ ಕುರಿತು ರಾಹುಲ್ ಗಾಂಧಿಯವರ ಭಾಷಣವನ್ನು ವಿರೋಧಿಸಿದ್ದರಿಂದ ಎರಡೂ ಕಡೆಯವರು ಗದ್ದಲ ಮಾಡುತ್ತಲೇ ಇದ್ದರು. ತನಗೆ ಮಾತನಾಡಲು ಬಿಡದಿದ್ದಕ್ಕೆ ಆಕ್ರೋಶಗೊಂಡ ರಾಹುಲ್ ಗಾಂಧಿ, “ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ವಿರೋಧ ಪಕ್ಷದ ನಾಯಕ. ಸದನದಲ್ಲಿ ಮಾತನಾಡುವುದು ನನ್ನ ಹಕ್ಕಾಗಿದ್ದರೂ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ” ಎಂದು ಹೇಳಿದ್ದಾರೆ. ಅಮೆರಿಕದೊಂದಿಗಿನ…

Read More

ನಮ್ಮ ಮೆಟ್ರೋ 3ನೇ ಹಂತದ ಯೋಜನೆ: 3,627 ಮರಗಳ ಹನನಕ್ಕೆ BMRCLನಿಂದ ಪ್ರಸ್ತಾವನೆ ಸಲ್ಲಿಕೆ – Kannada News | Namma Metro Phase 3: Green Cover at Risk as BMRCL Proposes Felling of 3,627 Trees in Bengaluru

ಸಾಂದರ್ಭಿಕ ಚಿತ್ರImage Credit source: PTI and Getty Images ಬೆಂಗಳೂರು, ಜೂನ್​​ 19: ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗಾಗಿ ಮರಗಳ ಹನನಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಬೆಂಗಳೂರಿನಲ್ಲಿ (Bengaluru) ಬರೋಬ್ಬರಿ 3,627 ಮರಗಳ ಮಾರಣಹೋಮಕ್ಕೆ ಸಿದ್ಧತೆ ನಡೆದಿದೆ. ಈ ಸಂಬಂಧ ಗ್ರೇಟರ್​​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅರಣ್ಯ ವಿಭಾಗಕ್ಕೆ BMRCL ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಆ ಬೆನ್ನಲ್ಲೇ ಮರಗಳನ್ನು ಕಡಿಯುವ ಸಂಬಂಧ  ಸಾರ್ವಜನಿಕ ಪ್ರಕಟಣೆ ಕೂಡ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ ಜಿಬಿಎ ಅವಕಾಶ ನೀಡಿದೆ. ಮುಖ್ಯಾಂಶಗಳು…

Read More

Weather Forecast: ಮುಂದಿನ 5 ದಿನ ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕು; ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ – Kannada News | Karnataka Monsoon Update: Rain in Coastal, 40 km/h Wind Alert for Bengaluru and 12 Districts

ಬೆಂಗಳೂರು, ಜು.14: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಚುರುಕಾಗಲಿದ್ದು, ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಜಿಲ್ಲಾವಾರು ಮುನ್ಸೂಚನೆ ಹಾಗೂ ಗಾಳಿಯ ವೇಗದ ಎಚ್ಚರಿಕೆಯನ್ನು ನೀಡಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಇರಲಿದ್ದು, ಗಾಳಿಯಲ್ಲಿ ಸಾಪೇಕ್ಷ ಆರ್ದ್ರತೆ ಗರಿಷ್ಠ ಮಟ್ಟದಲ್ಲಿರಲಿದೆ. ಇದರಿಂದಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನದಲ್ಲಿ ಕೊಂಚ ಇಳಿಕೆಯಾಗಲಿದ್ದು, ತಂಪಾದ…

Read More