Headlines

Uttara Kannada: ಮೋಜು ಮಸ್ತಿಗಾಗಿ ಅರಣ್ಯ ಅಧಿಕಾರಿಗಳಿಂದಲೇ ಮರಗಳ ಮಾರಣ ಹೋಮ? ತನಿಖೆಗೆ ಆದೇಶ – Kannada News | Kali Tiger Reserve: Forest Officials Accused of Illegal Tree Felling for Pergola

ನಿರ್ಮಾಣ ಮಾಡಲಾಗಿರುವ ಪ್ಯಾರಾಗೋಲಾ ಉತ್ತರ ಕನ್ನಡ, ಜನವರಿ 21: ಮೋಜು ಮಸ್ತಿ, ಪಾರ್ಟಿ ಮಾಡಲು ಅರಣ್ಯ ಅಧಿಕಾರಿಗಳೇ ಮರಗಳ ಮಾರಣ ಹೋಮ ಮಾಡಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ಯಾರಾಗೋಲಾ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಅರಣ್ಯ ವಲಯ ಪ್ರದೇಶದಲ್ಲಿ ಪ್ಯಾರಾಗೋಲಾ ನಿರ್ಮಿಸಲಾಗುತ್ತಿದ್ದು, ಅರಣ್ಯ ಸಂಪತ್ತನ್ನು ಉಳಿಸ ಬೇಕಿದ್ದ ಅಧಿಕಾರಿಗಳೇ ಕಾಡು ನಾಶ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ದಟ್ಟ ಅರಣ್ಯ ಮಧ್ಯ ಎರಡರಿಂದ ಮೂರು ಮರಗಳ ಕಟಾವು ಶಂಕೆ…

Read More

ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹುಲಿ ಓಡಾಟ: ವಿಡಿಯೋ ನೋಡಿ ಆತಂಕದಲ್ಲಿ ಪ್ರವಾಸಿಗರು – Kannada News | Tiger Movement video Sparks Panic at Chandradrona Hills Tourist Spot Near Chikkamagaluru

ಚಿಕ್ಕಮಗಳೂರು, ಜನವರಿ 21: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹುಲಿ ಓಡಾಟ ಕಂಡುಬಂದಿದ್ದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸಮೀಪದ ಅತ್ತಿಗುಂಡಿ ಬಳಿ ಹುಲಿ ಓಡಾಟ ನಡೆದಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ದಾಖಲಾಗಿದೆ. ಮುಳ್ಳಯ್ಯನ ಗಿರಿ, ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಾ ಸೇರಿ ಸಾವಿರಾರು ಪ್ರವಾಸಿಗರು ನಿತ್ಯ ಭೇಟಿ ನೀಡುವ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

Video: ಸಮುದ್ರದಲ್ಲಿ ಮುಳುಗುತ್ತಿದ್ದ ಕಾರಿಂದ ಮಹಿಳೆಯನ್ನು ರಕ್ಷಿಸಿದ ಜನ – Kannada News | Seconds from Disaster, Strangers Leap In to Save Woman from Sinking SUV

ವರ್ಜೀನಿಯಾ, ಜನವರಿ 21: ನಿಯಂತ್ರಣ ತಪ್ಪಿ ರಸ್ತೆಯಿಂದ ಸಮುದ್ರಕ್ಕೆ ಕಾರು ಬಿದ್ದಿತ್ತು. ಇನ್ನೇನು ಕಾರು ಮುಳುಗುವುದರಲ್ಲಿತ್ತು, ಅಷ್ಟರೊಳಗೆ ಅಲ್ಲಿದ್ದ ಜನ ಕೂಡಲೇ ನೀರಿಗೆ ಹಾರಿ ಇನ್ನೇನು ಕಾರು ಮುಳುಗುತ್ತಿದೆ ಎನ್ನುವಷ್ಟರಲ್ಲಿ ಕಾರಿನ ಗಾಜು ಒಡೆದು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಘಟನೆ ವರ್ಜೀನಿಯಾದಲ್ಲಿ ನಡೆದಿದೆ. ಅಲ್ಲಿದ್ದವರ್ಯಾರು ಕೂಡ ಆಕೆಗೆ ಪರಿಚಿತರಲ್ಲ, ಹಾಗೆಂದ ಮಾತ್ರಕ್ಕೆ ಕಾರಿನ ವಿಡಿಯೋ ಮಾಡುತ್ತಲೂ ನಿಂತಿರಲಿಲ್ಲ. ಕೂಡಲೇ ಆಕೆಯನ್ನು ರಕ್ಷಿಸುವುದು ಮೊದ ಕರ್ತವ್ಯವೆಂದು ಅರಿತು ನೀರಿಗೆ ಹಾರಿದ್ದರು. ನೋಡನೋಡುತ್ತಲೇ ಕಾರು ಮುಳುಗಿತ್ತು. ಕೂಡಲೇ ಗಾಜನ್ನು ಒಡೆದು…

Read More

ಚಿಕ್ಕಮಗಳೂರು: ದಾರಿ ಮಧ್ಯೆ ಕೆಟ್ಟು ನಿಂತ ಕೆಎಸ್​​​ಆರ್​​ಟಿಸಿ ಬಸ್, ಸಾರಿಗೆ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ – Kannada News | KSRTC Breakdowns Rise: Chikkamagaluru Incident Highlights Transport Dept’s Challenge

ಚಿಕ್ಕಮಗಳೂರು, ಜ.21: ಸರ್ಕಾರದ ಶಕ್ತಿ ಯೋಜನೆ ಬಂದ ನಂತರ ಈ ಬಸ್​​​ಗಳು ಅಲ್ಲಲ್ಲಿ ಕೆಟ್ಟು ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸರ್ಕಾರಿ ಬಸ್ಸುಗಳು ರಸ್ತೆ ಮಧ್ಯ ಕೆಟ್ಟು ನಿಂತಿರುವ ವಿಡಿಯೋಗಳು ಕೂಡ ಆಗ್ಗಾಗೆ ವೈರಲ್​​ ಆಗುತ್ತಿದೆ. ಇದೀಗ ಚಿಕ್ಕಮಗಳೂರು ತಾಲೂಕಿನ‌ ಕೈಮರ ಸಮೀಪದಲ್ಲಿ ಇಂತಹದೇ ಘಟನೆಯೊಂದು ನಡೆದಿದೆ. ಕೆಎಸ್​​ಆರ್​​​ಟಿಸಿ ಬಸ್ಸೊಂದು ದಾರಿ ಮಧ್ಯೆದಲ್ಲಿ ನಿಂತಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್​​​ನ್ನು ​​ ಸ್ಟಾರ್ಟ್​​ ಮಾಡಲು ಚಾಲಕ, ನಿರ್ವಾಹಕ ತುಂಬಾ ಕಷ್ಟಪಟ್ಟಿದ್ದಾರೆ….

Read More

ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯೋ ಬದಲು ಈ ರೀತಿಯಾಗಿ ಪಾತ್ರೆ ಕ್ಲೀನ್‌ ಮಾಡಲು ಉಪಯೋಗಿಸಿ – Kannada News | Use banana peels in this way to remove stubborn dirt from dishes

ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ, ಅಡುಗೆಗೆ ಬಳಸುವ ಪಾತ್ರೆಗಳನ್ನು ಕ್ಲೀನ್‌ ಆಗಿ ಇಟ್ಟುಕೊಳ್ಳುವುದು ಸಹ ಮುಖ್ಯವಾಗಿದೆ. ಪ್ರತಿದಿನ ಅಡುಗೆ ಮಾಡುವ ಕಾರಣ ಎಷ್ಟೇ ಕ್ಲೀನ್‌ ಮಾಡಿದ್ರೂ ಸಹ ಕೆಲವೊಂದು ಪಾತ್ರೆಗಳಲ್ಲಿ ಜಿಡ್ಡು, ಮೊಂಡು ಕಲೆ, ಕಪ್ಪು ಪದರ ಹಾಗೆಯೇ ಉಳಿದು ಬಿಡುತ್ತವೆ. ಇದರಿಂದ ಪಾತ್ರೆಯ ಸೌಂದರ್ಯವೇ ಹಾಳಾಗುತ್ತದೆ ಎಂಬ ಕಾರಣಕ್ಕೆ ಈ ಕಲೆಗಳನ್ನು ತೆಗೆದು ಹಾಕಲು ಹಲವು ಸರ್ಕಸ್‌ಗಳನ್ನು ಮಾಡುತ್ತಾರೆ. ಇದರ ಬದಲು ಬಾಳೆಹಣ್ಣಿನ ಸಿಪ್ಪೆಯನ್ನು (banana peels) ಬಳಸಿ ಬಲು ಸುಲಭವಾಗಿ ಪಾತ್ರೆಗಳ ಮೇಲೆ ಅಂಟಿರುವ…

Read More

DHFWS Mysuru Recruitment 2026: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ – Kannada News | DHFWS Mysuru Recruitment 2026: Apply for Medical and Nursing Officer Posts Online

ಮೈಸೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದ್ದು, ವಿವಿಧ ವೈದ್ಯಕೀಯ ಮತ್ತು ನರ್ಸಿಂಗ್ ಅಧಿಕಾರಿಗಳ ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ವಿಶೇಷವಾಗಿ ಮೈಸೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳು ಜನವರಿ 27ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ…

Read More

ಉಡುಪಿಯಲ್ಲಿ ರೋಬೋಸಾಫ್ಟ್ ಝಗಮಗಿಸುವ ಬ್ಯುಲ್ಡಿಂಗ್ ಕಟ್ಟಿದ್ದರ ಹಿಂದಿನ ರಸವತ್ತಾದ ಕಥೆ ಕೇಳಿ – Kannada News | Rohith Bhat of Robosoft explains how difficult it was to retain employees for his company

ಉಡುಪಿ, ಜನವರಿ 21: ಸಣ್ಣ ಪಟ್ಟಣಗಳಲ್ಲಿ ಓದಿದವರು ದೊಡ್ಡ ನಗರಗಳಲ್ಲಿ ಕೆಲಸ ಮಾಡುವ ಇಚ್ಛೆ ಹೊಂದಿರುತ್ತಾರೆ. ಅವರ ಮನೆಯವರೂ ಕೂಡ ತನ್ನ ಮಗ ಅಥವಾ ಮಗಳು ಬೆಂಗಳೂರಿನಂತಹ ನಗರಗಳಲ್ಲಿ ದೊಡ್ಡ ಬ್ಯುಲ್ಡಿಂಗ್​ಗಳಲ್ಲಿ ಕೆಲಸಕ್ಕೆ ಹೋಗಲಿ ಎಂದು ಬಯಸುತ್ತಾರೆ. ಸಣ್ಣ ಪಟ್ಟಣಗಳಲ್ಲಿ ಒಳ್ಳೆಯ ಸಂಬಳ ಕೊಟ್ಟರೂ ಜನರು ಕೆಲಸಕ್ಕೆ ಹೋಗಲು ಹಿಂಜರಿಯುತ್ತಾರೆ. ರೋಬೋಸಾಫ್ಟ್ (Robosoft) ಎನ್ನುವ ಐಟಿ ಸರ್ವಿಸ್ ಕಂಪನಿಯ ಸಂಸ್ಥಾಪಕ ರೋಹಿತ್ ಭಟ್ (Rohith Bhat) ಅವರು ತಮ್ಮ ಒಂದು ಅನುಭವವನ್ನು ಹಂಚಿಕೊಂಡಿದ್ದಾರೆ. ವಸಂತ್ ಶೆಟ್ಟಿ ಅವರ…

Read More

ಮದ್ವೆಗೂ ಮುಂಚೆ ಪ್ರಗ್ನೆಂಟ್, ಹುಟ್ಟಿದಾಕ್ಷಣ ಹಸುಗೂಸು ಸಾವು:ಸಾವಿನ ಸುತ್ತ ಅನುಮಾನದ ಹುತ್ತ – Kannada News | Staff nurse pregnant Before marriage, A Baby Suspected death after delivery at Hassan

ಚಿಕ್ಕಮಗಳೂರು, (ಜನವರಿ 21): ಮದುವೆಗೂ (Marriage)  ಮುನ್ನವೇ ಸ್ಟಾಫ್​​ ನರ್ಸ್​ವೊಬ್ಬರು (staff nurse) ತಾಯಿ ಆಗಿದ್ದಾರೆ. ಆದ್ರೆ, ಹರಿಗೆ ಆದ ಒಂದೇ ನಿಮಿಷದಲ್ಲಿ ಹಸುಗೂಸು ಸಾವನ್ನಪ್ಪಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಹೌದು… ಚಿಕ್ಕಮಗಳೂರಿನ (Chikkamagaluru) ತರೀಕೆರೆಯ ಬಾವಿಕೆರೆ ಗ್ರಾಮದ ಸ್ಟಾಫ್ ನರ್ಸ್ ಮದುವೆಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದಾರೆ. ಆದ್ರೆ, ಮಗು ಮೃತಪಟ್ಟಿದ್ದು, ಸಮಾಜದ ಗೌರವಕ್ಕೆ ಅಂಜಿ ಕುಟುಂಬಸ್ಥರೇ ಹಸುಗೂಸನ್ನು ಕೊಲೆ ಮಾಡಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಹೀಗಾಗಿ ಈ ಸಂಬಂಧ ಲಕ್ಕವಳ್ಳಿ ಠಾಣೆಯ ಪೊಲೀಸರು ಪ್ರಕರಣ…

Read More

“ನನಗೆ ಸಿದ್ಧರಾಮಯ್ಯ ಗೊತ್ತು, ಅವರ ಮಗ ಯತೀಂದ್ರ ಗೊತ್ತು”: ಕುಟುಂಬವೊಂದಕ್ಕೆ ಕೈ ಮುಖಂಡನಿಂದ ಜೀವ ಬೆದರಿಕೆ – Kannada News | Karnataka Congress Leaders: Officials, Citizens Face Intimidation in CM’s Area

ಕುಟುಂಬವೊಂದಕ್ಕೆ ಕೈ ಮುಖಂಡನಿಂದ ಜೀವ ಬೆದರಿಕೆ ಮೈಸೂರು, ಜ.21: ಕಾಂಗ್ರೆಸ್​​ ಮುಖಂಡರು ದಬ್ಬಾಳಿಕೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗೆ ವೈರಲ್​ ಆಗುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾದ ವರುಣದಲ್ಲಿ ಮಹಿಳಾ ಸರ್ಕಾರಿ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಗಂಭೀರ ಪ್ರಕರಣವೊಂದು ನಡೆದಿತ್ತು. ಇದೀಗ ಮತ್ತೊಂದು ಪ್ರಕರಣ ಸಿಎಂ ಸಿದ್ಧರಾಮಯ್ಯ (Congress leader threats) ಕ್ಷೇತ್ರದಲ್ಲೇ ನಡೆದಿದೆ. ವರುಣ ಕ್ಷೇತ್ರದ ಕಾಂಗ್ರೆಸ್​ ಮುಖಂಡ ಕುಟುಂಬವೊಂದಕ್ಕೆ ಜೀವ ಬೆದರಿಕೆ ಹಾಕಿರುವ ಆರೋಪ…

Read More

ಗಿಲ್ಲಿ ಬಡವನಾ ಶ್ರೀಮಂತನಾ? ಮುತ್ತಿನಂಥ ಮಾತು ಹೇಳಿದ ಸೂರಜ್ – Kannada News | Bigg Boss Kannada 12: Sooraj talks about criticism against Gilli

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮುಗಿದಿದೆ. ಗಿಲ್ಲಿ ಶೋ ಗೆದ್ದು ವಿನ್ನರ್ ಎನಿಸಿಕೊಂಡಿದ್ದಾರೆ. ಆದರೆ ಗಿಲ್ಲಿ ಗೆದ್ದಿರುವುದು ಕೆಲವರಿಗೆ ಅರಗಿಸಿಕೊಳ್ಳಲಾಗಿಲ್ಲ. ಶೋ ಮುಗಿದ ಬಳಿಕ ಅಶ್ವಿನಿ ಅವರು ಗಿಲ್ಲಿಯ ಗೆಲುವನ್ನೇ ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ತಾನು ಬಡವನಂತೆ ನಾಟಕ ಮಾಡಿದ್ದಾನೆ, ಆದರೆ ಆತ ಬಡವ ಅಲ್ಲ ಎಂಬಿತ್ಯಾದಿ ಟೀಕೆಗಳನ್ನು ಮಾಡಿದ್ದಾರೆ. ಇದೀಗ ಅದೇ ಸೀಸನ್​​ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಹೋಗಿ ಚೆನ್ನಾಗಿಯೇ ಆಟ ಆಡಿದ ಸೂರಜ್ ಅವರು ಈ ವಿವಾದದ ಬಗ್ಗೆ…

Read More