ಸರ್ಕಾರದ ಕ್ರಮಕ್ಕೆ ಕಂಗಾಲಾದ ವಯೋವೃದ್ಧ ಪಿಂಚಣಿದಾರರು: ಕಚೇರಿಗೆ ಅಲೆದಾಟ
ಹುಬ್ಬಳ್ಳಿ, ಜುಲೈ 03: ರಾಜ್ಯ ಸರ್ಕಾರ ಕೇಂದ್ರದ ಸಹಕಾರದೊಂದಿಗೆ ಸಾಮಾಜಿಕ ಭದ್ರತೆಯಡಿ ಪಿಂಚಣಿಗಳನ್ನು ನೀಡುತ್ತದೆ. 60 ವರ್ಷ ವಯಸ್ಸಾದವರು, ವಿಧವೆಯರು ಸೇರಿದಂತೆ ಅನೇಕರಿಗೆ ಮಾಸಿಕ ಪಿಂಚಣಿ ನೀಡುತ್ತದೆ. ಆದರೆ ಗ್ಯಾರಂಟಿ ಯೋಜನೆಗಳ ಅನರ್ಹ ಫಲಾನುಭವಿಗಳನ್ನು ತೆಗೆದುಹಾಕಲು ಪರಿಷ್ಕರಣೆ ಜೊತೆಗೆ ಇದೀಗ ಪಿಂಚಣಿ ಫಲಾನುಭವಿಗಳ ಪರಿಷ್ಕರಣೆ (Pension Revision) ಕೂಡ ಮಾಡಲಾಗುತ್ತಿದೆ. ಪಿಂಚಣಿ ಪಡೆಯುತ್ತಿರುವರಲ್ಲಿ ಶಂಕಾಸ್ಪದ ಪಿಂಚಣಿ ಫಲಾನುಭವಿಗಳಿಗೆ ಕಳೆದ ಕೆಲ ತಿಂಗಳಿಂದ ಪಿಂಚಣಿ ಹಾಕಿಲ್ಲ. ಇದೀಗ ಅವರು ಹೊಸದಾಗಿ ದಾಖಲಾತಿಗಳನ್ನು ನೀಡಬೇಕು. ಇದಕ್ಕಾಗಿ ವೃದ್ದರು ತಹಶೀಲ್ದಾರ್ ಕಚೇರಿಯಲ್ಲಿ…