Headlines

ಸಂಕ್ರಾಂತಿ ಸಂಭ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಸೌಮ್ಯ ರೆಡ್ಡಿ! – Kannada News | Bengaluru Celebrates Lohri with Ministers Ramalinga Reddy and Sowmya Reddy

ಬೆಂಗಳೂರು, ಜನವರಿ 14: ನಗರದಲ್ಲಿ ಮಕರ ಸಂಕ್ರಾಂತಿ (Makar Sankranti) ಹಬ್ಬದ ಅಂಗವಾಗಿ ಲೋಹ್ರಿ ಆಚರಣೆಯನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ನಗರದ ಪಂಜಾಬಿ ಸಮುದಾಯದ ಮುಖಂಡರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸೌಮ್ಯಾರೆಡ್ಡಿ ಭಾಗವಹಿಸಿ ಸಂಭ್ರಮಪಟ್ಟರು. ಈ ಹಬ್ಬದ ಆಚರಣೆಯು ಕೆಆರ್ ಮಾರುಕಟ್ಟೆ ಪ್ರದೇಶ ಸೇರಿದಂತೆ ಹಲವೆಡೆ ಹಬ್ಬದ ಕಳೆ ಹೆಚ್ಚಿಸಿತ್ತು. ಕಾರ್ಯಕ್ರಮದ ವೇಳೆ ಡೋಲು ಸದ್ದು ಕೇಳುತ್ತಿದ್ದಂತೆ, ಸೌಮ್ಯಾರೆಡ್ಡಿ ಅವರು ಸಖತ್ ಡ್ಯಾನ್ಸ್ ಮಾಡಿ ನೆರೆದಿದ್ದವರ ಗಮನ ಸೆಳೆದರು. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು…

Read More

ವೆಂಕಣ್ಣನ ಸನ್ನಿಧಿಯಲ್ಲಿ ಹಸಿವು ಎಂಬ ಪದಕ್ಕೆ ಜಾಗವಿಲ್ಲ, ಇಲ್ಲಿ ಪ್ರತಿದಿನ ಎಷ್ಟು ಜನರಿಗೆ ಅನ್ನದಾನ ನಡೆಯುತ್ತದೆ ಗೊತ್ತಾ? – Kannada News | Venkateswara Swamy’s Tirumala Anna Prasadam: TTD’s Massive Free Food Program Details

ಕಲಿಯುಗದ ವೈಕುಂಠ, ಶ್ರೀಮಾನ್​ ನಾರಾಯಣ ವೆಂಕಟೇಶ್ವರನಾಗಿ (Tirumala Anna Prasadam) ನೆಲೆ ನಿಂತಿರುವ ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ದಿನನಿತ್ಯದ ಅನ್ನಪ್ರಸಾದದ ವಿಶೇಷತೆ ಬಗ್ಗೆ ಕೇಳಿರಲು ಸಾಧ್ಯವಿಲ್ಲ. ಟಿಟಿಡಿ ಪ್ರತಿದಿನ 3 ಲಕ್ಷ ಭಕ್ತರಿಗೆ ಅದ್ಭುತವಾದ ಅನ್ನಪ್ರಸಾದವನ್ನು ನೀಡುಲಾಗುತ್ತದೆ. ಕಲಿಯುಗದ ಜೀವಂತ ದೇವರು ಎಂದು ಕರೆಯಲ್ಪಡುವ ವೆಂಕಟೇಶ್ವರ ಸ್ವಾಮಿಯ ವಾಸಸ್ಥಾನವಾಗಿರುವ ತಿರುಮಲ ದೇಗುಲದಲ್ಲಿ ಭಕ್ತರು ಹಸಿದುಕೊಂಡು ಇರಬಾರದು ಎಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ. ದೇವರ ದರ್ಶನದ ನಂತರ ಜನರು ಇಲ್ಲಿ ಬಂದು ಅನ್ನ ಪ್ರಸಾದವನ್ನು ಸ್ವೀಕರ ಮಾಡುತ್ತಾರೆ….

Read More

Video: ಹಲ್ಲಿಯನ್ನು ಸಲೀಸಾಗಿ ಬರಿಗೈಯಲ್ಲಿ ಹಿಡಿದು ಮುತ್ತು ನೀಡಿದ ಪುಟಾಣಿ – Kannada News | A little boy effortlessly holds a lizard in his bare hands

ಕೆಲ ಪುಟಾಣಿಗಳೇ (little kids) ಹಲ್ಲಿ ಜಿರಳೆಗಳನ್ನು ನೋಡಿದರೆ ಸಾಕು, ಅವುಗಳನ್ನು ಕೈಯಲ್ಲಿ ಹಿಡಿಯುವ ಧೈರ್ಯ ಮಾಡ್ತಾರೆ. ಇನ್ನು ಕೆಲ ಮಕ್ಕಳು ಹಲ್ಲಿಯನ್ನು (lizard) ಕಂಡು ಭಯ ಪಡುವುದಿದೆ. ಆದರೆ ಈ ಪುಟಾಣಿಗೆ ಭಯ ಅನ್ನೋದು ಹೇಗಿರುತ್ತದೆ ಎನ್ನುವುದು ತಿಳಿದೇ ಇಲ್ಲ ಎಂದೆನಿಸುತ್ತದೆ. ಹೌದು, ಈ ಪುಟ್ಟ ಬಾಲಕ ಹಲ್ಲಿಯನ್ನು ಕೈಯಲ್ಲಿ ಹಿಡಿದು ಮುತ್ತು ನೀಡಿರುವ ವಿಡಿಯೋ ಸದ್ಯ ವೈರಲ್‌ ಆಗಿದೆ. ನೆಟ್ಟಿಗರು ಈ ಪುಟಾಣಿಯ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. @mithirasmalaii ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ…

Read More

ಪಶ್ಚಿಮ ಬಂಗಾಳದಲ್ಲೊಬ್ಬ ನರಭಕ್ಷಕ, ಜನರ ಕೊಂದು ಮೃತದೇಹ ತಿನ್ನುತ್ತಿದ್ದ ವ್ಯಕ್ತಿಯ ಸೆರೆ – Kannada News | Gruesome Incident in Cooch Behar: Man Found Dragging Body and Consuming Flesh

ಕೂಚ್​ಬೆಹಾರ್, ಜನವರಿ 14: ಪಶ್ಚಿಮ ಬಂಗಾಳ(West Bengal)ದಲ್ಲಿ ನರಭಕ್ಷಕನೊಬ್ಬ ಪತ್ತೆಯಾಗಿದ್ದಾನೆ. ಈತ ಜನರನ್ನು ಕೊಂದು ಮೃತದೇಹವನ್ನು ಎಳೆದುಕೊಂಡು ಹೋಗಿ ತಿನ್ನುತ್ತಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದು ಇಡೀ ಬಂಗಾಳದ ಜನತೆಯೇ ಬೆಚ್ಚಿಬಿದ್ದಿದ್ದಾರೆ.  ಆರೋಪಿ ಅಪರಿಚಿತ ವ್ಯಕ್ತಿಯನ್ನು  ಕೊಲೆ(Murder) ಮಾಡಿ ನಂತರ ಅವನ ಮಾಂಸವನ್ನು ತಿನ್ನಲು ದೇಹವನ್ನು ಮನೆಗೆ ಎಳೆದುಕೊಂಡು ಹೋಗುತ್ತಿದ್ದ, ದಿನ್ಹಾಟಾ ಉಪಜಿಲ್ಲಾ ಪೊಲೀಸ್ ಅಧಿಕಾರಿ ಧಿಮಾನ್ ಮಿತ್ರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜನವರಿ 10 ರಂದು, ದಿನ್ಹಾಟಾ ಗಡಿಗೆ ಹೊಂದಿಕೊಂಡಿರುವ ಕುರ್ಷಾ ಹ್ಯಾಟ್‌ನಲ್ಲಿರುವ ದೂರದ…

Read More

Vastu Shastra: ಮನೆಯಲ್ಲಿ ಪಾರಿವಾಳ ಮೊಟ್ಟೆ ಇಟ್ಟರೆ ಏನರ್ಥ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Pigeon Nesting at Home: Vastu Shastra, Good or Bad Luck and Spiritual Insights

ಪಾರಿವಾಳಗಳು ಮನೆಯ ಬಾಲ್ಕನಿಯಲ್ಲಿ ಅಥವಾ ತಾರಸಿಯ ಮೇಲೆ ಗೂಡು ಕಟ್ಟುವುದು ಬಹಳ ಸಾಮಾನ್ಯ. ಕೆಲವೇ ದಿನಗಳಲ್ಲಿ ಅವು ಅಲ್ಲಿ ಮೊಟ್ಟೆಗಳನ್ನು ಇಡುವುದರಿಂದ, ಇದನ್ನು ನೋಡಿದ ಹಲವರು ಇದು ಸಹಜ ಪ್ರಕ್ರಿಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇನ್ನೂ ಕೆಲವರು ಇದನ್ನು ವಾಸ್ತು ದೃಷ್ಟಿಯಿಂದ ಮನೆಗೆ ಶುಭವೋ ಅಥವಾ ಅಶುಭವೋ ಎಂಬ ಕುತೂಹಲದಿಂದ ಚಿಂತಿಸುತ್ತಾರೆ. ಈ ವಿಚಾರದಲ್ಲಿ ವಾಸ್ತು ಶಾಸ್ತ್ರ ಮತ್ತು ಆಧ್ಯಾತ್ಮಿಕ ಗುರುಗಳು ವಿಭಿನ್ನ ಅಭಿಪ್ರಾಯಗಳನ್ನು ನೀಡಿದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ ಪಾರಿವಾಳವನ್ನು ಶಾಂತಿ, ಪ್ರೀತಿ ಮತ್ತು…

Read More

ಟ್ರಾಫಿಕ್ ಪೊಲೀಸರ ಎಐ ಕ್ಯಾಮರಾಗಳ ಕಣ್ಣುತಪ್ಪಿಸ್ತಿವೆ ಈ ನಂಬರ್ ಪ್ಲೇಟ್​ಗಳು! – Kannada News | Bengaluru AI Cameras Blinded by Defective Plates

ಟ್ರಾಫಿಕ್ ಪೊಲೀಸರ ಎಐ ಕ್ಯಾಮರಾಗಳ ಕಣ್ಣುತಪ್ಪಿಸ್ತಿವೆ ಈ ನಂಬರ್ ಪ್ಲೇಟ್​ಗಳು! ಬೆಂಗಳೂರು, ಜನವರಿ 14: ಸಂಚಾರ ನಿಯಂತ್ರಣ ಮತ್ತು ಕಾನೂನು ಜಾರಿಗೆ ನಿಗಾ ಕ್ಯಾಮೆರಾಗಳ ಅವಲಂಬನೆ ಹೆಚ್ಚುತ್ತಿರುವ ನಡುವೆಯೇ, ದೋಷವಿರುವ ಹಾಗೂ ಫ್ಯಾನ್ಸಿ ನಂಬರ್ ಪ್ಲೇಟ್​ಗಳು ಬೆಂಗಳೂರು ಸಂಚಾರ ಪೊಲೀಸರಿಗೆ (BTP) ದೊಡ್ಡ ಸವಾಲಾಗಿ ಪರಿಣಮಿಸಿವೆ. ಇಂತಹ ನಂಬರ್ ಪ್ಲೇಟ್​ಗಳನ್ನು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ (ANPR) ಕ್ಯಾಮೆರಾಗಳು ಪತ್ತೆಹಚ್ಚಲು ವಿಫಲವಾಗುತ್ತಿದ್ದು, ಇದರಿಂದ ಕಾನೂನು ಜಾರಿ ಹಾಗೂ ಅಪರಾಧ ತನಿಖೆಗೆ ಅಡ್ಡಿಯಾಗುತ್ತಿದೆ. ಡಿಫೆಕ್ಟಿವ್ ನಂಬರ್ ಪ್ಲೇಟ್​ಗಳಿಂದ ಅಪರಾಧ…

Read More

KSRTC ಬಸ್ಸಿನಡಿ ಸಿಲುಕಿದರೂ ಪ್ರಯಾಣಿಕ ಪವಾಡಸದೃಶ ಪಾರು: ವಿಡಿಯೋ ವೈರಲ್​​ – Kannada News | KSRTC Bus Hits Elderly Man in Chikkamagaluru, Video Goes Viral

ಚಿಕ್ಕಮಗಳೂರು, ಜನವರಿ 14: KSRTC ಬಸ್​​ನಡಿ ಸಿಲುಕಿದರೂ ಪ್ರಯಾಣಿಕ ಪವಾಡಸದೃಶ ಪಾರಾಗಿರುವ ಘಟನೆ ಚಿಕ್ಕಮಗಳೂರಿನ ಬಸ್ ನಿಲ್ದಾಣದಲ್ಲಿ ನಡೆದಿದೆ. ಬೆಚ್ಚಿ ಬೀಳಿಸುವ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕುರುವಂಗಿ ಮೂಲದ ಆಂಜನೇಯ (75) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುರುವಂಗಿ ಗ್ರಾಮಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ಆಂಜನೇಯ ಬಂದಿದ್ದಾಗ ಅವಘಡ ಸಂಭವಿಸಿದ್ದು, ನಿರ್ಲಕ್ಷ್ಯದ ಚಾಲನೆ ಮಾಡಿದ ಬಸ್ ಚಾಲಕನ ವಿರುದ್ಧ ಸಂಚಾರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಜನವರಿ 7ರಂದು…

Read More

ಹಾವೇರಿ: ಶಾಲೆ ಆವರಣದಲ್ಲೇ ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ, ವಿಡಿಯೋ ವೈರಲ್ – Kannada News | Guest Teacher, SDMC President Clash Inside Government School in Haveri; Fight Video Goes Viral

ಹಾವೇರಿ, ಜನವರಿ 14: ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿರುವ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕ ಮತ್ತು ಶಾಲಾ ಅಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರ ನಡುವೆ ನಡೆದ ಹೊಡೆದಾಟವು ತೀವ್ರ ಚರ್ಚೆಗೆ ಕಾರಣವಾಗಿದೆ. ಕೈಕೈ ಮಿಲಾಯಿಸಿ, ಶರ್ಟ್ ಹಿಡಿದು ಪರಸ್ಪರ ಪುಂಡರಂತೆ ಹೊಡೆದಾಡಿಕೊಂಡ ಘಟನೆ ಶಾಲಾ ಆವರಣದಲ್ಲೇ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ಅತಿಥಿ ಶಿಕ್ಷಕ ಗಂಟೇರ್ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಬೋಸ್ಲೆ…

Read More

ಸಲ್ಲು ಜೊತೆ ಕಾರು ಡ್ರಿಫ್ಟ್ ಮಾಡಿದ ಧೋನಿ; ಫಾರ್ಮ್​​ಹೌಸ್​​ನಲ್ಲಿ ಮಸ್ತಿ

ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಎಂಎಸ್ ಧೋನಿಗೆ ವಾಹನಗಳ ಬಗ್ಗೆ ವಿಶೇಷ ಕ್ರೇಜ್ ಇದೆ. ಈಗ ಸಲ್ಮಾನ್ ಖಾನ್ ಫಾರ್ಮ್​​​ಹೌಸ್​​ಗೆ ತೆರಳಿರೋ ಅವರು ವಾಹನವೊಂದನ್ನು ಓಡಿಸಿ ಅದನ್ನು ಡ್ರಿಫ್ಟ್ ಮಾಡಿ ಗಮನ ಸೆಳೆದಿದ್ದಾರೆ. ಸಿಂಗರ್ ಎಪಿ ದಿಲ್ಲೋನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಧೋನಿ ಹಾಗೂ ಸಲ್ಲು ಹೆಗಲಮೇಲೆ ಕೈ ಹಾಕಿ ನಿಂತಿದ್ದಾರೆ. ಧೋನಿ ಅವರು ರೇನ್​ಕೋಟ್ ಹಾಕಿ ಪೋಸ್ ಕೊಟ್ಟಿದ್ದಾರೆ. ಸಲ್ಮಾನ್ ಖಾನ್ ಫಾರ್ಮ್​​ಹೌಸ್​​ನಲ್ಲಿ ಅವರು ಸಮಯ…

Read More

ನೆಲಮಂಗಲದಲ್ಲಿ ಚಿರತೆ ದಾಳಿ ಹೆಚ್ಚಳ: ನಾಯಿಯನ್ನು ಎಳೆದುಕೊಂಡ ಹೋದ ಭಯಾನಕ ದೃಶ್ಯ ಸೆರೆ – Kannada News | Leopard Menace in Hemaganga Layout: Frightened Residents Demand Action Following Dog Attacks

ಬೆಂಗಳೂರು, ಜ.14; ನೆಲಮಂಗಲದ ಹೇಮಗಂಗಾ ಬಡಾವಣೆಯಲ್ಲಿ ಚಿರತೆ ಹಾವಳಿ ತೀವ್ರಗೊಂಡಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಚಿರತೆಗಳ ದಾಳಿ ನಿರಂತರವಾಗಿ ಹೆಚ್ಚಾಗುತ್ತಿದ್ದು, ಜನರಲ್ಲಿ ಭೀತಿ ಮನೆ ಮಾಡಿದೆ. ತಮ್ಮ ಸಾಕುಪ್ರಾಣಿಗಳ ಸುರಕ್ಷತೆಗಾಗಿ ಜನ ರಾತ್ರಿಯಿಡೀ ದೊಣ್ಣೆ ಹಿಡಿದು ಕಾವಲು ಕಾಯುವಂತಹ ಪರಿಸ್ಥಿತಿ ಎದುರಾಗಿದೆ. ಮುಂಜಾನೆ 4 ಗಂಟೆ 17 ನಿಮಿಷಕ್ಕೆ ಚಿರತೆಯೊಂದು ಬಡಾವಣೆಯ ನಾಯಿಯೊಂದರ ಮೇಲೆ ದಾಳಿ ನಡೆಸಿದ್ದು, ಈ ಘಟನೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಚಿರತೆ ನಾಯಿಯನ್ನು ಎಳೆದುಕೊಂಡು ಹೋಗಲು ಯತ್ನಿಸಿದರೂ, ನಾಯಿಯು…

Read More