Headlines

7 ವರ್ಷದ ಬಳಿಕ ಹೊಸ ಸಿನಿಮಾ ಶುರು ಮಾಡಿದ ‘ಬೆಲ್ ಬಾಟಂ’ ನಿರ್ಮಾಪಕ ಸಂತೋಷ್ – Kannada News | Bell Bottom movie producer Santhosh Kumar KC announces new movie after 7 Years

ರಿಷಬ್ ಶೆಟ್ಟಿ ಹೀರೋ ಆಗಿ ನಟಿಸಿದ್ದ ಮೊದಲ ಸಿನಿಮಾ ‘ಬೆಲ್ ಬಾಟಂ’ 2019ರಲ್ಲಿ ಬಿಡುಗಡೆ ಆಗಿತ್ತು. ಜಯತೀರ್ಥ ನಿರ್ದೇಶನದ ಆ ಸಿನಿಮಾವನ್ನು ಸಂತೋಷ್ ಕುಮಾರ್ ಕೆ.ಸಿ. (Santhosh Kumar KC) ಅವರು ನಿರ್ಮಾಣ ಮಾಡಿದ್ದರು. ಆ ಚಿತ್ರ ಸೂಪರ್ ಹಿಟ್ ಆದರೂ ಕೂಡ ಸಂತೋಷ್ ಅವರು ಇನ್ನೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿರಲಿಲ್ಲ. ಈಗ ಮತ್ತೆ ಅವರು ಬಂಡವಾಳ ಹೂಡಲು ಸಜ್ಜಾಗಿದ್ದಾರೆ. ಹೌದು, ಬರೋಬ್ಬರಿ 7 ವರ್ಷಗಳ ಗ್ಯಾಪ್ ಬಳಿಕ ಸಂತೋಷ್ ಕುಮಾರ್ ಅವರು ಹೊಸ ಸಿನಿಮಾವನ್ನು ಘೋಷಿಸಿದ್ದಾರೆ….

Read More

National Dentists Day 2026: ಇಂದು ರಾಷ್ಟ್ರೀಯ ದಂತವೈದ್ಯರ ದಿನ; ನಗುವಿನ ಹಿಂದಿನ ನಿಜವಾದ ಶಿಲ್ಪಿಗಳು – Kannada News | National Dentists’ Day: Why Oral Health and Your Dentist’s Role Matter

ಒಂದು ಸುಂದರವಾದ ನಗು ಸಾವಿರ ಮಾತುಗಳನ್ನು ಹೇಳುತ್ತದೆ. ಆದರೆ ಆ ನಗುವಿನ ಹಿಂದೆ ಇರುವ ನಿಜವಾದ ಶಿಲ್ಪಿಗಳು ದಂತವೈದ್ಯರು. ನಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿ, ನೋವನ್ನು ನಿವಾರಿಸಿ, ಆತ್ಮವಿಶ್ವಾಸದ ನಗುವನ್ನು ನೀಡುವವರು ಇವರೇ. ಈ ಮಹತ್ವದ ಸೇವೆಯನ್ನು ಗೌರವಿಸಲು ಪ್ರತಿ ವರ್ಷ ಮಾರ್ಚ್ 6 ರಂದು ರಾಷ್ಟ್ರೀಯ ದಂತವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ದಂತವೈದ್ಯರ ಸೇವೆಯನ್ನು ಗುರುತಿಸುವುದರ ಜೊತೆಗೆ, ಬಾಯಿ ಮತ್ತು ಹಲ್ಲಿನ ಆರೋಗ್ಯದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೂ ಈ ದಿನದ ಪ್ರಮುಖ ಉದ್ದೇಶವಾಗಿದೆ….

Read More

ಹಾಸನ: ವರ್ಕೌಟ್ ಮಾಡುತ್ತಿದ್ದಾಗ ಭುಜ ಟಚ್​​ ಆಗಿದ್ದಕ್ಕೆ ಯುವಕನ ತಲೆ ಜಜ್ಜಿದ ಕಿರಾತಕ! – Kannada News | Viral Video: Hassan M.J. Fitness Attack – Kirtan Suffers Skull Fracture, Varun Arrested

ಹಾಸನ, ಮೇ,14: ಹಾಸನ ನಗರದ ‘ಎಂ.ಜೆ. ಫಿಟ್‌ನೆಸ್’ (M.J. Fitness) ಜಿಮ್‌ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಭೀಕರ ಹಲ್ಲೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ವ್ಯಾಯಾಮ ಮಾಡುವಾಗ ಅಚಾತುರ್ಯದಿಂದ ಭುಜ ಟಚ್​​ ಆಗಿರುವುದು ದೊಡ್ಡ ಅಪರಾಧ ಎಂಬಂತೆ ವರ್ತಿಸಿದ ವರುಣ್ ಎಂಬಾತ, ಕೀರ್ತನ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದೀಗ ಈ ಬಗ್ಗೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಇಬ್ಬರ ನಡುವೆ ಸ್ವಲ್ಪ ಭುಜ ತಗಿದೆ. ಇದನ್ನೇ ನೆಪವಾಗಿಸಿಕೊಂಡ…

Read More

ಕನಿಷ್ಠ ವೇತನದ ಎಫೆಕ್ಟ್​​: ಪ್ಲೇಟ್​​ ಇಡ್ಲಿ ಬೆಲೆ 90 ರೂ, ಬಿರಿಯಾನಿ 500 ರೂ. ತಲುಪುವ ಎಚ್ಚರಿಕೆ ಕೊಟ್ಟ ಹೋಟೆಲ್​​ ಮಾಲಕರು – Kannada News | Minimum Wage Impact: Bengaluru Hotels Warn of Food Price Hike Across Karnataka

ಸಾಂದರ್ಭಿಕ ಚಿತ್ರImage Credit source: amexessentials.com ಬೆಂಗಳೂರು, ಮೇ 26: ಕಮರ್ಷಿಯಲ್​​ ಎಲ್​​ಪಿಜಿ ಸಿಲಿಂಡರ್​​ಗಳ ಅಭಾವದಿಂದಾಗಿ ತಿಂಡಿ-ತಿನಿಸುಗಳ ಬೆಲೆಯನ್ನು ಈಗಾಗಲೇ ಹೋಟೆಲ್​​ಗಳು ಏರಿಕೆ ಮಾಡಿರೋದು ಗ್ರಾಹಕರ ಕೈ ಸುಡುತ್ತಿದೆ. ಈ ನಡುವೆ ಹೋಟೆಲ್​​ಗಳು ಮತ್ತೊಂದು ಎಚ್ಚರಿಕೆ ನೀಡಿದ್ದು, ರಾಜ್ಯ ಸರ್ಕಾರ ಪರಿಷ್ಕರಿಸಿರುವ ಕನಿಷ್ಠ ವೇತನ ನಿಯಮಗಳಿಂದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ದರ ಹೆಚ್ಚಳ ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ (KSHA) ಹೇಳಿದೆ. ಈ ನಿರ್ಧಾರದಿಂದ ಒಂದು ಪ್ಲೇಟ್​​ ಬಿರಿಯಾನಿ ದರ 500 ರೂ….

Read More

RCB ತಂಡ ಮಾರಾಟಕ್ಕಿದೆ… ಇಷ್ಟು ಕೋಟಿ ಇದ್ದರೆ ನೀವು ಸಹ ಖರೀದಿಸಬಹುದು! – Kannada News | IPL 2026: RCB sale ‘launched’ by Diageo

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಮಾರಾಟಕ್ಕೆ ಡಿಯಾಜಿಯೋ ಕಂಪೆನಿ ಮುಂದಾಗಿದೆ. ಈ ಮಾರಾಟ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದ್ದು, ಆರ್​ಸಿಬಿ ಫ್ರಾಂಚೈಸಿಯ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ ಎಂದು ಘೋಷಿಸಲಾಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 18,000 ಕೋಟಿ ರೂ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಬಿಡ್ಡಿಂಗ್ ಸುಮಾರು 18 ಸಾವಿರ ಕೋಟಿ ರೂ.ನಿಂದ ಶುರುವಾಗಲಿದೆ. ಈಗಾಗಲೇ ಕೆಲ ಉದ್ಯಮಿಗಳು ಆರ್​ಸಿಬಿ ತಂಡದ ಖರೀದಿಗೆ ಆಸಕ್ತಿ ತೋರಿದ್ದು, ಹೀಗಾಗಿ ಈ ಮೊತ್ತವು…

Read More

ಗಾಂಜಾ ಸೇವನೆ ಆರೋಪಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ: ಹಣಕ್ಕೆ ಬೇಡಿಕೆ ಇಟ್ಟಿದ್ದರಾ ಪೊಲೀಸರು? – Kannada News | Student Dies After Police Allegedly Demand Money in Ganja Case

ಧಾರವಾಡ, ಏಪ್ರಿಲ್​​ 28: ಗಾಂಜಾ ಸೇವನೆ ಆರೋಪಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ಗಿರಿನಗರದಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ನಿವಾಸಿ ಆದಿತ್ಯ ಮ್ಯಾಗೇರಿ(20) ನೇಣಿಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಗಿರಿನಗರ ಬಡಾವಣೆಯಲ್ಲಿ ರೂಮ್ ಮಾಡಿಕೊಂಡಿದ್ದ ವಿದ್ಯಾರ್ಥಿ ಆದಿತ್ಯಗೆ 2 ದಿನಗಳಿಂದ ಪೊಲೀಸರು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಗಾಂಜಾ ಸೇವನೆ ಆರೋಪದಲ್ಲಿ ಆದಿತ್ಯ ಸೇರಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು….

Read More

ಸಿದ್ದರಾಮಯ್ಯ ಟೀಮ್​​​ಗೆ ಢವಢವ: ಈ 13 ಜನರಿಗೆ ಸಚಿವ ಸ್ಥಾನ ಫಿಕ್ಸ್​​?

ಬೆಂಗಳೂರು, ಮೇ.29: ನೂತನ ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ವಲಯದಲ್ಲಿ ಭಾರೀ ಕಸರತ್ತು ನಡೆಯುತ್ತಿದೆ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಮಾಜಿ ಸಚಿವರ ಪೈಕಿ 16 ಮಂದಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಇದ್ದು, 13 ಮಂದಿ ಮತ್ತೆ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ. ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ, ಸತೀಶ್ ಜಾರಕಿಹೊಳಿ, ಕೆ.ಜೆ. ಜಾರ್ಜ್, ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್, ಹೆಚ್.ಕೆ. ಪಾಟೀಲ್, ಶಿವರಾಜ್ ತಂಗಡಗಿ, ಕೆ.ಹೆಚ್. ಮುನಿಯಪ್ಪ, ಮಂಕಾಳ್ ವೈದ್ಯ, ಸಂತೋಷ್ ಲಾಲ್…

Read More

ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ – Kannada News | One Nation One Election: JPC Report Projects 7 Lakh Crore Savings, 1.6pc GDP Growth for India

ನವದೆಹಲಿ, ಮೇ 20: ಒಂದು ರಾಷ್ಟ್ರ, ಒಂದು ಚುನಾವಣೆಯ ವ್ಯವಸ್ಥೆಯಿಂದ (One Nation One Election) ಬಹಳಷ್ಟು ಹಣ ಉಳಿಸಬಹುದು. ದೇಶಾದ್ಯಂತ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಒಮ್ಮೆಗೇ ನಡೆಸಿದರೆ 7 ಲಕ್ಷ ಕೋಟಿ ರೂನಷ್ಟು ಹಣ ಉಳಿಸಬಹುದು. ಇದರಿಂದ ಹಣ ಉಳಿತಾಯ ಆಗುವುದರ ಜೊತೆಗೆ, ದೇಶದ ಆರ್ಥಿಕತೆ ಶೇ. 1.6ರಷ್ಟು ಹೆಚ್ಚುತ್ತದೆ. ಆಡಳಿತದ ಕ್ಷಮತೆಯೂ ಸುಧಾರಿಸುತ್ತದೆ. ಹೀಗೆಂದು ಹೇಳಿದ್ದು ಸರ್ಕಾರದ ಮಂತ್ರಿಗಳಲ್ಲ. ಜಂಟಿ ಸಂಸದೀಯ ಸಮಿತಿ (JPC- Joint Parliamentary Committee) ವ್ಯಕ್ತಪಡಿಸಿದ ಅನಿಸಿಕೆ…

Read More

Chitradurga: ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ, ಗೊತ್ತಿದ್ರೂ ಈಜಾಟ

ಚಿತ್ರದುರ್ಗ, ಮೇ 23: ಚಿತ್ರದುರ್ಗದ ಏಳು ಸುತ್ತಿನ ಕೋಟೆಯ ಸಮೀಪದ ಹೊಂಡ ಯುವಕರ ನೆಚ್ಚಿನ ಈಜುವ ತಾಣವಾಗಿದೆ. ಆದರೆ, ಕಳೆದ ಒಂದು ವರ್ಷದಿಂದ ಈ ಹೊಂಡದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ಆತಂಕ ಸೃಷ್ಟಿಸಿದೆ. ಮೊಸಳೆ ಅಪಾಯದ ಬಗ್ಗೆ ಎಚ್ಚರಿಕೆ ಫಲಕಗಳಿದ್ದರೂ ಯುವಕರು ಜೀವದ ಹಂಗು ತೊರೆದು ಈಜಾಡುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಮೊಸಳೆ ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ. ಈ ಅಪಾಯಕಾರಿ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪೋಷಕರು ತಮ್ಮ…

Read More

PBKS vs SRH: ಯಾನ್ಸನ್ ಹಿಡಿದ ಕ್ಯಾಚ್​ಗೆ ಬೆಚ್ಚಿ ಬೆರಗಾದ ಅರ್ಷದೀಪ್; ವಿಡಿಯೋ

ಭಾರತ ಟಿ20 ತಂಡದ ಬೌಲಿಂಗ್ ವಿಭಾಗದ ಪ್ರಮುಖ ಬೌಲರ್ ಎನಿಸಿಕೊಂಡಿರುವ ಅರ್ಷದೀಪ್ ಸಿಂಗ್​ಗೆ ಈ ಬಾರಿಯ ಐಪಿಎಲ್ ದುಃಸ್ವಪ್ನದಂತೆ ಕಾಡುತ್ತಿದೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಅರ್ಷದೀಪ್​ಗೆ ಮೊದಲ ಮೂರು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ. ಇತ್ತ ಅರ್ಷದೀಪ್​ ರನ್​ಗೂ ಕಡಿವಾಣ ಹಾಕುತ್ತಿರಲಿಲ್ಲ. ಇದು ಪಂಜಾಬ್​ಗೆ ದೊಡ್ಡ ತಲೆನೋವಾಗಿತ್ತು. ಇಂದು ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಅರ್ಷದೀಪ್ ತುಂಬಾ ದುಬಾರಿಯಾದರು. ಆದರೆ ಕೊನೆಗೂ ತಮ್ಮ ವಿಕೆಟ್​ಗಳ ಖಾತೆ ತೆರೆಯುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ…

Read More