Headlines

‘ರೋಬೊ’ ಸಿನಿಮಾಕ್ಕೂ ಇವಿಎಂಗೂ ಇರುವ ಸಂಬಂಧ ಗೊತ್ತೆ? – Kannada News | Tamil Movie industry veteran Sujata is behind the India’s EVM invention

ಇವಿಎಂ ಅಥವಾ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಚುನಾವಣೆಯಲ್ಲಿ ಕ್ರಾಂತಿಯನ್ನೇ ಮಾಡಿದೆ. ಚುನಾವಣಾ ಅಕ್ರಮಗಳನ್ನು ದೊಡ್ಡ ಸಂಖ್ಯೆಯಲ್ಲಿ ಕಡಿಮೆ ಮಾಡಿದೆ, ವಾರಗಳ ಗಟ್ಟಲೆ ನಡೆಯುತ್ತಿದ್ದ ಮತದಾನ ಮತ್ತು ಮತ ಎಣಿಕೆಯನ್ನು ಗಂಟೆಗಳಿಗೆ ಇಳಿಸಿದೆ. ಚುನಾವಣಾ ಪ್ರಕ್ರಿಯೆ ಅತ್ಯಂತ ತ್ವರಿತವಾಗಿ ನಡೆಯುವಂತೆ ಮಾಡಿದೆ ಇವಿಎಂ. ಕೆಲವರು ಇವಿಎಂ ಹ್ಯಾಕಿಂಗ್ ಬಗ್ಗೆ ಆರೋಪ ಮಾಡುತ್ತಲೇ ಇರುತ್ತಾರಾದರೂ ಯಾವುದೂ ಸಹ ಈ ವರೆಗೆ ಸಾಬೀತಾಗಿಲ್ಲ. ಆದರೆ ಈ ಇವಿಎಂಗೂ ‘ರೋಬೊ’ ಸಿನಿಮಾಕ್ಕೂ ಅಥವಾ ತಮಿಳು ಚಿತ್ರರಂಗಕ್ಕೂ…

Read More

ಕೋಲ್ಡ್ ಡ್ರಿಂಕ್ ಜೊತೆ ಚಿಪ್ಸ್ ತಿನ್ನುವ ಅಭ್ಯಾಸವಿದ್ಯಾ? ಹಾಗಿದ್ರೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ – Kannada News | Cold Drink and Chips Side Effects: What AIIMS Nutrition Experts Say

ಬೇಸಿಗೆಯ (Summer) ತಾಪಮಾನ ಹೆಚ್ಚಾದಂತೆ ಜನ ತಂಪಾದ ಪಾನೀಯಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಮಾರುಕಟ್ಟೆಯಲ್ಲಿ ಬಗೆಬಗೆಯ ಕೋಲ್ಡ್ ಡ್ರಿಂಕ್‌ಗಳು ಇರುವುದರಿಂದ ಅದನ್ನು ಕುಡಿದು ಆನಂದಿಸುತ್ತಾರೆ. ಅದರಲ್ಲಿ ಕೆಲವರು ಅವುಗಳ ಜೊತೆ ಚಿಪ್ಸ್ ಕೂಡ ತಿನ್ನುತ್ತಾರೆ. ಇದು ಕೆಲವರಿಗೆ ಸಾಮಾನ್ಯ ಅಭ್ಯಾಸಗಳಲ್ಲಿ ಒಂದು. ಆದರೆ ಆರೋಗ್ಯ ತಜ್ಞರ ಪ್ರಕಾರ, ಈ ಆಹಾರ ಸಂಯೋಜನೆ ಒಳ್ಳೆಯದಲ್ಲ. ಇದು ದೇಹಕ್ಕೆ ಹಾನಿಕಾರಕವಾಗಬಹುದು ಎನ್ನುತ್ತಾರೆ. ಈ ರೀತಿ ಅಭ್ಯಾಸ ನಿಮಗೂ ಇದ್ದಲ್ಲಿ ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳಲೇಬೇಕು ಜೊತೆಗೆ ಈ ರೀತಿ ಕೋಲ್ಡ್ ಡ್ರಿಂಕ್‌…

Read More

ಮುಸುಕುದಾರಿ ಗ್ಯಾಂಗ್​​​​​​ನ​​​ ಹೆಡೆಮುರಿ ಕಟ್ಟಿದ ಖಾಕಿ: 1.26 ಕೋಟಿ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ – Kannada News | Gadag Betageri Theft Solved: Police Recover 1.26 Crore Gold and Silver, 11 Arrested

ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರುImage Credit source: tv9 kannada ಗದಗ, ಏಪ್ರಿಲ್​ 30: ಗದಗ ಮತ್ತು ಬೆಟಗೇರಿ (Gadag-Betageri) ಅವಳಿ ನಗರದಲ್ಲಿ ಮುಸುಕುದಾರಿ ಕಳ್ಳರ (thieves) ಹಾವಳಿ ಹೆಚ್ಚಾಗಿತ್ತು. ಕೈಯಲ್ಲಿ ಆಯುಧ ಹಿಡಿದು ಓಡಾಡುತ್ತಿದ್ದ ಭಯಾನಕ ಕಳ್ಳರಿಂದ ಜನರು ಬೆಚ್ಚಿಬಿದ್ದಿದ್ದರು. ಕಳ್ಳರ ಪತ್ತೆಗೆ ಆಗ್ರಹಿವು ಕೇಳಿಬಂದಿತ್ತು. ಆ ಬೆನ್ನಲ್ಲೇ ಕೊನೆಗೂ ಖದೀಮರ ಗುಂಪನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ 1 ಕೋಟಿ 26 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರ…

Read More

ಹಿಮಾಚಲ ಪ್ರದೇಶದ ಚಿಂತ್‌ಪುರಿ ಬಳಿ ಕಣಿವೆಗೆ ಉರುಳಿದ ಕಾರು; ಇಬ್ಬರು ಸಾವು – Kannada News | Car plunged into deep gorge near Chintpuri Himachal Pradesh 2 people dead

ಚಿಂತ್​ಪುರಿ, ಏಪ್ರಿಲ್ 30: ಹಿಮಾಚಲ ಪ್ರದೇಶದ ಉನಾದಲ್ಲಿ ಕಾರು ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಮಾತಾ ಚಿಂತ್‌ಪೂರ್ಣಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಇಬ್ಬರು ಅಪಘಾತದಲ್ಲಿ (Road Accident) ಸಾವನ್ನಪ್ಪಿದ್ದಾರೆ. ಕಾರು ಕಣಿವೆಗೆ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆ. ಕಾರನ್ನು ಅತಿ ವೇಗದಲ್ಲಿ ಚಲಾಯಿಸುತ್ತಿದ್ದಾಗ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ತಿಳಿಸಿದ್ದಾರೆ. ಭರ್ವೈನ್-ಹೋಶಿಯಾರ್‌ಪುರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮಾತಾ ಚಿಂತ್‌ಪೂರ್ಣಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಕಾರಿನೊಳಗೆ ಇಬ್ಬರು ಇದ್ದರು. ಆ ಕಾರು ಲುಧಿಯಾನದ…

Read More

ಪ್ರೇಯಸಿಯನ್ನೇ ಅತ್ಯಾಚಾರಗೈದು ಹತ್ಯೆಗೈದಿದ್ದ ಪ್ರಿಯಕರನಿಗೆ ಜೈಲಲ್ಲೇ ಕೊಳೆಯುವ ಶಿಕ್ಷೆ – Kannada News | Hassan Lover Murder Case: Boy friend gets Life Imprisonment

ಹಾಸನ, (ಏಪ್ರಿಲ್ 30): ಬೇಲೂರು ತಾಲ್ಲೂಕಿನ ಯುವತಿಯನ್ನ ಪ್ರೀತಿಸೋದಾಗಿ (Love) ನಂಬಿಸಿ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿರುವ ಪ್ರಿಯಕರಿನಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರೇಮಿ ಪ್ರವೀಣ್ ಗೆ ಜೀವಾವದಿ ಶಿಕ್ಷೆ ವಿಧಿಸಿ ಹಾಸನದ (Hassan) 3ನೇ ಅಧಿಕ ಸಷೆನ್ಸ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇನ್ನು ಸಾಕ್ಷಿನಾಶ ಆರೋಪದಲ್ಲಿ ಎ2 ತಮ್ಮಣ್ಣಿಗೆ ಎರಡು ವರ್ಷ. ಕಠಿಣ ಜೈಲು ಶಿಕ್ಷೆ ವಿಧಿಸಿದೆ. 2018 ರ ಏಪ್ರಿಲ್ 22ರಂದು ತನ್ನ‌ ಹುಟ್ಟು ಹಬ್ಬ ಆಚರಣೆ ಮಾಡಲು ಬಂದ…

Read More

‘ಕೆಡಿ’ ಸಿನಿಮಾ ನೋಡಿ ಜನ ಹೇಳಿದ್ದೇನು? ವಿಡಿಯೋ ನೋಡಿ – Kannada News | KD Movie release here is audience reaction after watching movie

ಧ್ರುವ ಸರ್ಜಾ (Dhruva Sarja) ನಟಿಸಿ, ಪ್ರೇಮ್ ನಿರ್ದೇಶಿಸಿರುವ ‘ಕೆಡಿ: ದಿ ಡೆವಿಲ್’ ಸಿನಿಮಾ ಇಂದು (ಏಪ್ರಿಲ್ 30) ಬಿಡುಗಡೆ ಆಗಿದೆ. ಸುಮಾರು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯವನ್ನು ಈ ಸಿನಿಮಾಕ್ಕಾಗಿ ಧ್ರುವ ಸರ್ಜಾ ಮತ್ತು ಪ್ರೇಮ್ ಹಾಗೂ ಇತರರು ವ್ಯಯಿಸಿದ್ದಾರೆ. ಸಿನಿಮಾ ಬಿಡುಗಡೆ ಆಗುವ ಮುಂಚೆ ಹಾಡಿನಿಂದ ಕೆಲ ವಿವಾದಗಳು ಸಹ ಆಗಿದ್ದವು. ಇನ್ನೂ ಕೆಲವು ಕಾರಣಗಳಿಗೆ ಸಿನಿಮಾದ ಮೇಲೆ ಎಲ್ಲರ ಕಣ್ಣಿತ್ತು, ಇದೀಗ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಅನ್ನು ನೋಡಿದ ಜನ ನೀಡಿದ…

Read More

ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ – Kannada News | Gangavathi BJP Leader Venkatesh kurubar murder case: death sentence to 6 convicts

ಕೊಪ್ಪಳ, (ಏಪ್ರಿಲ್ 30): ಗಂಗಾವತಿ (Gangavathi) ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಕೊಲೆ ಪ್ರಕರಣದ (Venkatesh Kurbur Murder Case) ಆರು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜೊತೆ ದಂಡ ವಿಧಿಸಲಾಗಿದೆ. ಯಾಗಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಗಂಗಾವತಿ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ, ಆರು ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ ಇಂದು (ಎಪ್ರಿಲ್ 30) ಆದೇಶ ಹೊರಡಿಸಿದ್ದಾರೆ. ಇದರ…

Read More

ಬೆಂಗಳೂರಿನಲ್ಲಿ ಮಳೆಯಿಂದ ಸರಣಿ ಅವಾಂತರ: ಇನ್ಮುಂದೆ ಫುಟ್‌ಪಾತ್​ನಲ್ಲಿ ವ್ಯಾಪಾರಕ್ಕೆ ಬ್ರೇಕ್! – Kannada News | Bengaluru Bowring Hospital Wall Collapse: No Business on Footpaths; Says DK Shivakumar

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada ಬೆಂಗಳೂರು, ಏಪ್ರಿಲ್​ 30: ಬುಧವಾರ ಸಂಜೆ 1 ಗಂಟೆ ಅಬ್ಬರಿಸಿದ ಬಿರುಗಾಳಿ, ಆಲಿಕಲ್ಲು ಸಹಿತ ಮಳೆ (Rain) ಬೆಂಗಳೂರಿನಲ್ಲಿ ಸಾಲು ಸಾಲು ಅವಘಡಗಳನ್ನು ಸೃಷ್ಟಿಸಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಒಂದು ಮಗು ಸೇರಿ 7 ಮಂದಿ ಉಸಿರು ಚೆಲ್ಲಿದ್ದಾರೆ. ವ್ಯಾಪಾರ ಮಾಡ್ತಿದ್ದವರು, ಖರೀದಿ ಮಾಡಲು ಬಂದಿದ್ದವರು ಸಾವಿನ ಮನೆ ಸೇರಿದ್ದಾರೆ. ಈ ಬೆನ್ನಲ್ಲೇ ಇನ್ಮುಂದೆ ಫುಟ್‌ಪಾತ್‌ನಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಎಂದು ಉಪಮುಖ್ಯಮಂತ್ರಿ…

Read More

ಸಂಜಯ್ ಕಪೂರ್ ಆಸ್ತಿ ವಿವಾದ; ದೆಹಲಿ ಹೈಕೋರ್ಟ್​ನಿಂದ ಕರಿಷ್ಮಾ ಕಪೂರ್ ಮಕ್ಕಳಿಗೆ ಬಿಗ್ ರಿಲೀಫ್ – Kannada News | Big Relief For Karisma Kapoor’s Children In Sunjay Kapur Property Row

ನವದೆಹಲಿ, ಏಪ್ರಿಲ್ 30: ಕಳೆದ ವರ್ಷ ಜೂನ್‌ನಲ್ಲಿ ಲಂಡನ್‌ನಲ್ಲಿ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ ಆಸ್ತಿಗಳನ್ನು ಫ್ರೀಜ್ ಮಾಡಲಾಗಿದೆ. ಅವರು 30,000 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ ಕಪೂರ್ ಮತ್ತು ನಟಿ ಕರಿಷ್ಮಾ ಕಪೂರ್ (Karishma Kapoor) ಅವರ ಎರಡನೇ ಮದುವೆಯಿಂದ ಪಡೆದ ಮಕ್ಕಳಾದ ಕಿಯಾನ್ ಕಪೂರ್ ಮತ್ತು ಸಮೈರಾ ಕಪೂರ್ ನಡುವಿನ ಗಲಾಟೆ ತಾರಕಕ್ಕೇರಿತ್ತು. ಇದೀಗ ಕುಟುಂಬ ವಿವಾದದ ನಡುವೆ ಅವರ ಆಸ್ತಿಗಳನ್ನು…

Read More

ಬಸ್ಸು ಓಡಿಸುತ್ತಿರುವಾಗಲೇ ಪ್ರಜ್ಞೆ ತಪ್ಪಿದ ಚಾಲಕಿ: ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ – Kannada News | Students Take Control After Driver Collapses, Avert Bus Crash in Mississippi

ಶಾಲಾ ಬಸ್ ಚಲಾಯಿಸುತ್ತಿರುವಾಗ ಚಾಲಕಿಗೆ ಏಕಾಏಕಿ ಆಸ್ತಮಾ ಅಟ್ಯಾಗಿ ಆಗಿ ಪ್ರಜ್ಞೆ ತಪ್ಪಿದ್ದರು. ಕೂಡಲೇ ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.  ಬುಧವಾರ ಬೆಳಗ್ಗೆ ಸುಮಾರು 12 ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಚಾಲಕಿ ಲಿಯಾ ಟೇಲರ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಆಸ್ತಮಾ ಅಟ್ಯಾಕ್ ಆಗಿತ್ತು. ಹ್ಯಾನ್ಕಾಕ್ ಕೌಂಟಿ ಸ್ಕೂಲ್ ಡಿಸ್ಟ್ರಿಕ್ಟ್ ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಗಳಲ್ಲಿ, ಚಾಲಕಿ ಸ್ಟೀರಿಂಗ್ ಮೇಲೆಯೇ ಕುಸಿದು ಬೀಳುವ ದೃಶ್ಯಗಳು ಸೆರೆಯಾಗಿವೆ. ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಲು ಪ್ರಾರಂಭಿಸಿತು. ಬಸ್ಸಿನ…

Read More