ರಾಮ ಮಂದಿರಕ್ಕೆ ಬಂದಿದ್ದ ಟನ್ಗಟ್ಟಲೆ ಬೆಳ್ಳಿ ಹೈದರಾಬಾದ್ಗೆ ಶಿಫ್ಟ್: ಕಾರಣವೇನು? ಇಲ್ಲಿದೆ ಅಸಲಿ ಸಂಗತಿ – Kannada News | Ram Mandir Silver Shift to Hyderabad: Why Ayodhya Donations are Repurposed
ಅಯೋಧ್ಯೆ, ಜುಲೈ 06: ರಾಮ ಮಂದಿರ(Ram Mandir)ದಲ್ಲಿ ದೇಣಿಗೆ ಕಳ್ಳತನದ ಆರೋಪಗಳ ಕುರಿತು ದೇಶಾದ್ಯಂತ ರಾಜಕೀಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಭಕ್ತರು ದಾನ ಮಾಡಿದ್ದ ಬೆಳ್ಳಿಯ ವಸ್ತುಗಳನ್ನು ಹೈದರಾಬಾದ್ಗೆ ಕಳುಹಿಸಿರುವ ವಿಚಾರ ಈಗ ತೀವ್ರ ಕುತೂಹಲ ಮೂಡಿಸಿದೆ. ಅಯೋಧ್ಯೆಯಲ್ಲಿದ್ದ ಬೆಳ್ಳಿಯನ್ನು ಹೈದರಾಬಾದ್ಗೆ ಏಕೆ ಕಳುಹಿಸಲಾಯಿತು ಮತ್ತು ಅದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದೇಕೆ ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಹೈದರಾಬಾದ್ಗೆ ಕಳುಹಿಸಲು ಕಾರಣವೇನು? ರಾಮ ಮಂದಿರಕ್ಕೆ ದೇಶ-ವಿದೇಶಗಳ ಭಕ್ತರು ವಿವಿಧ ರೂಪಗಳಲ್ಲಿ (ಲೋಟ, ತಟ್ಟೆ, ಒಡವೆಗಳು…