ದೇವನಹಳ್ಳಿ: ಸಿಗರೇಟ್ ಸೇದಲು ಮ್ಯಾಚ್ ಬಾಕ್ಸ್ ಕೊಡದ್ದಕ್ಕೆ ಜೀವವೇ ಹೋಯ್ತು! – Kannada News | Matchbox Refusal Leads to Murder: Bengaluru Rural Youth Killed in Doddaballapur
ದೇವನಹಳ್ಳಿ, ಜನವರಿ 27: ಇಬ್ಬರ ನಡುವಿನ ಹಳೆಯ ದ್ವೇಷ, ಅಸೂಯೆಗೆಲ್ಲಾ ರಕ್ತಪಾತವಾಗುವವುದನ್ನು ನಾವು ಕಾಣುತ್ತೇವೆ. ಆದರೆ ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಕೊಟ್ಟಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕನನ್ನೇ ಕೊಲೆ ಮಾಡಿದ ಘಟನೆ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಗ್ರಾಮದ ವಿನಾಯಕ ನಗರದಲ್ಲಿ ಈ ದುರಂತ ನಡೆದಿದ್ದು, ಹಲವು ದಿನಗಳಿಂದ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಅಪ್ರಾಪ್ತ ಸೇರಿ ನಾಲ್ವರು ಅರೆಸ್ಟ್ ಹೊಸವರ್ಷದ ಸಂದರ್ಭದಲ್ಲಿ…