ಬೀಗ ಹಾಕಿದ ಮನೆಯೊಳಗೆ ನಾಲ್ವರು ಮಕ್ಕಳ ಭೀಕರ ಹತ್ಯೆ, ತಾಯಿ ನಾಪತ್ತೆ – Kannada News | Four Children Found Dead Inside Locked Home in Uttar Pradesh, Probe Underway
ಲಕ್ನೋ, ಮೇ 03: ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಕ್ರೌರ್ಯದ ಪರಾಕಾಷ್ಠೆ ಮೆರೆದಿರುವ ಹಂತಕರು, ನಾಲ್ವರು ಅಪ್ರಾಪ್ತ ಒಡಹುಟ್ಟಿದವರನ್ನು ಇಟ್ಟಿಗೆಯಿಂದ ಜಜ್ಜಿ,ಚೂಪಾದ ಆಯುಧಗಳಿಂದ ಇರಿದು ಹತ್ಯೆ(Murder) ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಬೀಗ ಹಾಕಿದ ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವಗಳನ್ನು ಕಂಡು ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಕೊಲೆಯಾದವರು 8,10,12 ಮತ್ತು 14 ವರ್ಷ ವಯಸ್ಸಿನ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು. ಈ ನಾಲ್ವರೂ ಒಡಹುಟ್ಟಿದವರಾಗಿದ್ದು, ಮನೆಯೊಳಗಿನ ರಣರಂಗದಂತಹ ದೃಶ್ಯ ಕಂಡು ತನಿಖಾಧಿಕಾರಿಗಳೇ…