ಸಾಲ ವಸೂಲಿ ಮಾಡುವ ವೇಳೆ ಅವಾಚ್ಯ ಶಬ್ಧದಿಂದ ನಿಂದಿಸಿದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಹಾಕಿದ ಕುಡುಕ – Kannada News | Chamarajanagar Murder: Relative Kills Man in Loan Recovery Conflict
ಚಾಮರಾಜನಗರ,ಡಿ.30: ಕೊಟ್ಟ ಸಾಲ ವಸೂಲಿ ಮಾಡುವ ವೇಳೆ ಅವಾಚ್ಯ ಶಬ್ಧದಿಂದ ನಿಂದಿಸಿದ ಎಂದು ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಂದಿರುವ ಘಟನೆ ಚಾಮರಾಜನಗರ (Chamarajanagar) ಕೊಳ್ಳೇಗಾಲ ತಾಲೂಕಿನ ಚೆನ್ನಿಪುರದೊಡ್ಡಿಯಲ್ಲಿ ನಡೆದಿದೆ. ಉಮೇಶ್ ಎಂಬಾತ ತನ್ನ ಸಂಬಂಧಿ ಸ್ವಾಮಿ ಗೌಡ ಎಂಬಾತನಿಗೆ ಸಾಲ ಕೊಟ್ಟಿದ್ದ, ಸ್ವಲ್ಪ ದಿನದ ನಂತರ ಉಮೇಶ್ ಸಾಲವನ್ನು ವಾಪಸ್ಸು ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದು, ಸ್ವಾಮಿ ಗೌಡ ಕುಡಿದ ಅಮಲಿನಲ್ಲಿ ಉಮೇಶ್ ತಲೆ, ಮುಖವನ್ನು ಮಚ್ಚಿನಿಂದ ಕೊಚ್ಚಿ ಹಾಕಿದ್ದಾನೆ. ನಂತರ ಕತ್ತು ಕೊಯ್ದು ಹಾಕಿದ್ದಾನೆ. ನಂತರ ತೀವ್ರ ಗಾಯಗೊಂಡಿದ್ದ…