
ದೆಹಲಿ,ಫೆ.6: ಪ್ರಧಾನಿ ನರೇಂದ್ರ ಮೋದಿ ಅವರು ‘ಪರೀಕ್ಷಾ ಪೇ ಚರ್ಚಾ’ 2026 ರ ಸಂವಾದದಲ್ಲಿ ವಿದ್ಯಾರ್ಥಿಗಳನ್ನು ಕೇವಲ ಓದುವ ಮಕ್ಕಳಂತೆ ನೋಡದೆ, ದೇಶದ ಭವಿಷ್ಯದ ನಿರ್ಧಾರಕರು ಎಂಬಂತೆ ಮಾತನಾಡಿದ್ದಾರೆ. ಅವರ ಭಾಷಣದ ಈ ಭಾಗವು ಅತ್ಯಂತ ಸ್ಪೂರ್ತಿದಾಯಕವಾಗಿದ್ದು, ದೇಶಪ್ರೇಮ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. “ಭಾರತವು ಸ್ವಾತಂತ್ರ್ಯದ ನೂರನೇ ವರ್ಷವನ್ನು (2047) ಆಚರಿಸುವಾಗ ನೀವು 35 ರಿಂದ 40 ವರ್ಷದವರಾಗಿರುತ್ತೀರಿ. ಅಂದರೆ ವಿಕಸಿತ ಭಾರತದ ಫಲವನ್ನು ಉಣ್ಣುವವರು ಮತ್ತು ಅದನ್ನು ಮುನ್ನಡೆಸುವವರು ನೀವೇ. ಇಂದು ನಾನು ಕಷ್ಟಪಟ್ಟು ‘ವಿಕಸಿತ ಭಾರತ’ದ ಬುನಾದಿ ಹಾಕುತ್ತಿರುವುದು ನಿಮಗಾಗಿ. ಹಾಗಿದ್ದ ಮೇಲೆ, ನಿಮ್ಮ ಭವಿಷ್ಯಕ್ಕಾಗಿ ನೀವು ಈಗಿನಿಂದಲೇ ಶ್ರಮಿಸಬೇಡವೇ?” ಎಂದು ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳಲ್ಲಿ ಕೇಳಿದ್ದಾರೆ. ನಾವು ಬಳಸುವ ವಸ್ತುಗಳು, ಆಟಿಕೆಗಳು ಅಥವಾ ತಂತ್ರಜ್ಞಾನ ಇರಲಿ, ಸಾಧ್ಯವಾದಷ್ಟು ಭಾರತೀಯ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ