‘ಅಗ್ನಿಸಾಕ್ಷಿ’ ಧಾರಾವಾಹಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಈ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಹಾಗೂ ವಿಜಯ್ ಸೂರ್ಯ, ಪ್ರಿಯಾಂಕಾ, ಮುಖ್ಯಮಂತ್ರಿ ಚಂದ್ರು ನಟಿಸಿದ್ದರು. ಈ ಧಾರಾವಾಹಿಯಿಂದ ವೈಷ್ಣವಿ ಜನಪ್ರಿಯತೆ ಪಡೆದರು. ಈಗ ಹಳೆ ಬಾಟಲಿ, ಹೊಸ ಮದ್ಯ ಎಂಬಂತೆ, ಇದೇ ಟೈಟಲ್ ಒಂದಿಗೆ ಹೊಸ ಪಾತ್ರದ ಮೂಲಕ ‘ಅಗ್ನಿಸಾಕ್ಷಿ’ ಧಾರಾವಾಹಿ ಬರುತ್ತಿದೆ. ಈ ಧಾರಾವಾಹಿಗೆ ಶಮಂತ್ ಬ್ರೋ ಗೌಡ ನಾಯಕನಾದರೆ, ವರ್ಷಿಣಿ ಗೌಡ ನಾಯಕಿ.
‘ಅಗ್ನಿಸಾಕ್ಷಿ’ ಧಾರಾವಾಹಿ ಬರೋದಾಗಿ ಈ ಮೊದಲೇ ಘೋಷಣೆ ಆಗಿತ್ತು. ಈಗ ಪ್ರೋಮೋ ರಿಲೀಸ್ ಆಗಿದೆ. ಈ ಧಾರಾವಾಹಿಯಲ್ಲಿ ಶಮಂತ್ ಬ್ರೋ ಗೌಡ ಅವರು ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗಂತ ಸಾಮಾನ್ಯ ಉದ್ಯಮಿ ಎಂದು ಅಂದುಕೊಳ್ಳಬೇಡಿ. ತುಂಬಾನೇ ಧಿಮಾಕು ಇರುವ ಉದ್ಯಮಿ. ಈಗ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಶಮಂತ್ ಬ್ರೋ ಗೌಡ ಡಿಫೆಂಡರ್ ಕಾರಿನಲ್ಲಿ ಬರುತ್ತಾರೆ. ಈ ವೇಳೆ ಮಳೆ ಬರುತ್ತಾ ಇರುತ್ತದೆ. ವರ್ಷಿಣಿ ಕೈಯಿಂದ ಛತ್ರಿಯನ್ನು ಕಿತ್ತುಕೊಳ್ಳುವ ಶಮಂತ್ ತನ್ನ ಆಫೀಸ್ ಒಳಗೆ ಹೋಗುತ್ತಾನೆ. ಇದರಿಂದ ಸಿಟ್ಟಾಗುವ ವರ್ಷಿಣಿ ಬಂದು ಶಮಂತ್ಗೆ ಬೈಯುತ್ತಾರೆ.ಈ ರೀತಿಯಲ್ಲಿ ಪ್ರೋಮೋ ಇದೆ.
ಇದನ್ನೂ ಓದಿ: ‘ನನ್ನನ್ನೇಕೆ ಕುಳ್ಳಿ ಎಂದೆ’; ‘ಅಗ್ನಿಸಾಕ್ಷಿ’ ರೀಯೂನಿಯನ್ನಲ್ಲಿ ಸುಕೃತಾ-ವೈಷ್ಣವಿ ಸಖತ್ ಫನ್
ಶಮಂತ್ ಬ್ರೋ ಗೌಡ ಅವರು ‘ಬಿಗ್ ಬಾಸ್’ ಅಲ್ಲಿ ಕಾಣಿಸಿಕೊಂಡರು. ಆ ಬಳಿಕ ಅವರಿಗೆ ‘ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅವರು ನಟಿಸಿದರು. ನಂತರ ಮದುವೆ ಆಗಿ ಒಂದು ಬ್ರೇಕ್ನಲ್ಲಿದ್ದರು. ಈಗ ಈ ಧಾರಾವಾಹಿ ಮೂಲಕ ಮತ್ತೆ ಮರಳಿದ್ದಾರೆ. ಈ ಧಾರಾವಾಹಿಗಾಗಿ ಅಭಿಮಾನಿಗಳು ಕಾದಿದ್ದಾರೆ. ಇನ್ನು, ವರ್ಷಿಣಿ ಗೌಡ ಬಗ್ಗೆ ಹೇಳಲೇಬೇಕು. ಅವರು ‘ಜಯಂ’ ಹೆಸರಿನ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವರು ಕನ್ನಡದಲ್ಲಿ ಮಿಂಚಲು ರೆಡಿ ಆಗಿದ್ದಾರೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಪೂರ್ಣಗೊಂಡ ಬಳಿಕ ಈ ಧಾರಾವಾಹಿ ಪ್ರಸಾರ ಕಾಣಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.