Headlines

ಆಪರೇಷನ್ ಸಿಂಧೂರ್ ಅಬ್ಬರ, ಪಾಕ್ ಉಗ್ರರ ಕೋಟೆಗೆ ಲಗ್ಗೆ, ಒಂದು ವರ್ಷವಾದ್ರೂ ಹೊರಬರಲು ಹೆದರುತ್ತಿದ್ದಾರೆ ಸಯೀದ್-ಅಜರ್ – Kannada News | Operation Sindhoor: India’s Strike on Pakistan Terror, Hafiz Saeed and Azhar in Hiding

ಪಹಲ್ಗಾಮ್, ಏಪ್ರಿಲ್ 21: ಪಹಲ್ಗಾಮ್(Pahalgam) ದಾಳಿಯ ರಕ್ತಸಿಕ್ತ ನೆನಪುಗಳಿಗೆ ಭಾರತ ನೀಡಿದ ಪ್ರತ್ಯುತ್ತರ ಕೇವಲ ಒಂದು ಮಿಲಿಟರಿ ಕಾರ್ಯಾಚರಣೆಯಾಗಿರಲಿಲ್ಲ, ಅದು ಗಡಿಯ ಆಚೆಗಿದ್ದ ಭಯೋತ್ಪಾದಕ ಸಾಮ್ರಾಜ್ಯದ ಅಡಿಪಾಯವನ್ನೇ ನಡುಗಿಸಿದ ಚಂಡಮಾರುತ. ‘ಆಪರೇಷನ್ ಸಿಂಧೂರ್’ ಹೆಸರಿನ ಈ ಮಹಾಪ್ರಹಾರದ ರೋಚಕ ಕಥೆ ಇಲ್ಲಿದೆ. ಏಪ್ರಿಲ್ 22, 2025ರಂದು ಪಹಲ್ಗಾಮ್‌ನಲ್ಲಿ 26 ಅಮಾಯಕ ಜೀವಗಳನ್ನು ಬಲಿ ಪಡೆದ ಉಗ್ರರ ಕೃತ್ಯಕ್ಕೆ ಭಾರತ ಮೌನವಾಗಿರಲಿಲ್ಲ. ಕೇವಲ 15 ದಿನಗಳಲ್ಲಿ, ಅಂದರೆ ಮೇ 7ರಂದು ಭಾರತೀಯ ವಾಯುಪಡೆ ಮತ್ತು ವಿಶೇಷ ಪಡೆಗಳು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿತ್ತು. ಇದರ ಗುರಿ ಲಷ್ಕರ್-ಎ-ತೊಯ್ಬಾ (LeT), ಜೈಶ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಹುಟ್ಟಡಗಿಸುವುದಾಗಿತ್ತು.

ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದ ಒಳಗಿರುವ ಒಂಬತ್ತು ಪ್ರಮುಖ ಅಡಗುತಾಣಗಳನ್ನು ಧೂಳೀಪಟ ಮಾಡಿದವು.ಲಾಹೋರ್ ಸಮೀಪದ 200 ಎಕರೆ ವಿಸ್ತೀರ್ಣದ ಲಷ್ಕರ್ ಕೇಂದ್ರ ಕಚೇರಿ ಮುರಿಡ್ಕೆ ಅಕ್ಷರಶಃ ಸ್ಮಶಾನವಾಯಿತು. ಜೈಶ್-ಎ-ಮೊಹಮ್ಮದ್‌ನ ಭದ್ರಕೋಟೆಯಾಗಿದ್ದ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಕ್ಯಾಂಪಸ್ ಅನ್ನು ಭಾರತೀಯ ಪಡೆಗಳು ಗುರಿಯಾಗಿಸಿಕೊಂಡವು. ಈ ದಾಳಿಯಲ್ಲಿ ಮಸೂದ್ ಅಜರ್ ಕೇವಲ ತನ್ನ ನೆಲೆಗಳನ್ನಷ್ಟೇ ಅಲ್ಲ, ತನ್ನ ಕುಟುಂಬದ 10 ಸದಸ್ಯರನ್ನೂ ಕಳೆದುಕೊಂಡಿದ್ದಾನೆ ಎಂದು ಪಾಕ್ ಮಾಧ್ಯಮಗಳೇ ಒಪ್ಪಿಕೊಂಡವು.

ಇಲಿಗಳಂತೆ ಅಡಗಿದ ಹಂತಕರು
ಆಪರೇಷನ್ ಸಿಂಧೂರ್ ಸೃಷ್ಟಿಸಿದ ನಡುಕ ಎಷ್ಟಿತ್ತೆಂದರೆ, ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಎಂಬ ‘ಭಯೋತ್ಪಾದಕ ದೊರೆಗಳು’ ಇಂದು ಪ್ರಾಣಭೀತಿಯಿಂದ ಬಿಲ ಸೇರಿದ್ದಾರೆ. ಬಹಾವಲ್ಪುರದಿಂದ 1,200 ಕಿ.ಮೀ ದೂರದ ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಓಡಿಹೋದ ಅಜರ್, ನಂತರ ಸ್ಕಾರ್ಡುವಿನ ಮಸೀದಿಗಳು ಮತ್ತು ಅತಿಥಿ ಗೃಹಗಳಲ್ಲಿ ಅಲೆಮಾರಿಯಂತೆ ದಿನ ಕಳೆದಿದ್ದಾನೆ. ಅವನು ಅಫ್ಘಾನಿಸ್ತಾನಕ್ಕೆ ಓಡಿಹೋಗಿದ್ದಾನೆ ಎಂಬ ವದಂತಿಗಳಿದ್ದರೂ, ಅವನು ಇನ್ನೂ ಪಾಕ್ ಸೇನೆಯ ಕಾವಲಲ್ಲೇ ತಲೆಮರೆಸಿಕೊಂಡಿದ್ದಾನೆ.

ಮತ್ತಷ್ಟು ಓದಿ: Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದು ವರ್ಷ, ಗಾಯಗೊಂಡಿದ್ದ ಸ್ವರ್ಗಕ್ಕೆ ಮರಳಿದ ಚೈತನ್ಯ, ಚೇತರಿಕೆಯ ಹಾದಿ ಹೇಗಿದೆ?

2019ರಿಂದ 46 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದೇನೆ ಎಂದು ನಾಟಕವಾಡುವ ಹಫೀಜ್ ಸಯೀದ್, ಫೆಬ್ರವರಿ 2025ರವರೆಗೆ 20ಕ್ಕೂ ಹೆಚ್ಚು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ. ಆದರೆ ಆಪರೇಷನ್ ಸಿಂಧೂರ್ ನಂತರ ಅವನು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹೆದರುತ್ತಿದ್ದಾನೆ.

ಪ್ರಸ್ತುತ, ಈ ಇಬ್ಬರೂ ಹಂತಕರು ರಾವಲ್ಪಿಂಡಿ, ಕರಾಚಿ ಮತ್ತು ಲಾಹೋರ್‌ ನಡುವೆ ಪದೇ ಪದೇ ಸ್ಥಳಾಂತರಗೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಲಾವಲ್ ಭುಟ್ಟೋ ಅವರಂತಹ ನಾಯಕರು ಇವರು ಪಾಕಿಸ್ತಾನದಲ್ಲಿಲ್ಲ ಎಂಬ ನಾಟಕವಾಡುತ್ತಿದ್ದರೂ, ಭಾರತೀಯ ಗುಪ್ತಚರ ಸಂಸ್ಥೆಗಳು ಅವರ ಪ್ರತಿ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿವೆ.

ಭಾರತವನ್ನು ಕೆಣಕಿದರೆ, ಭೂಮಿಯ ಆಳದಲ್ಲಿದ್ದರೂ ನಾವು ನಿಮ್ಮನ್ನು ಹುಡುಕಿ ಹೊಡೆಯುತ್ತೇವೆ. ಒಂದು ವರ್ಷದ ನಂತರವೂ ಹಫೀಜ್ ಮತ್ತು ಮಸೂದ್ ಅಜರ್ ಅನುಭವಿಸುತ್ತಿರುವ ಈ ‘ನಿರಂತರ ಭಯ’ವೇ ಭಾರತ ಸಾಧಿಸಿದ ಅತಿದೊಡ್ಡ ವಿಜಯ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:37 pm, Tue, 21 April 26

Source link

Leave a Reply

Your email address will not be published. Required fields are marked *