ಬೆಂಗಳೂರು, ಜು.16: ಡಾ. ಬಸವರಾಜ ಗುರೂಜಿ ಅವರು ನೀಡಿದ ದಿನಭವಿಷ್ಯವನ್ನು ಪ್ರಸ್ತುತಪಡಿಸಿದೆ. ಪರಾಭವನಾಮ ಸಂವತ್ಸರ, ಆಷಾಢ ಮಾಸದ ಶುಕ್ಲಪಕ್ಷದ ಬಿದಿಗೆ, ಆಶ್ಲೇಷ ನಕ್ಷತ್ರದ ಈ ಶುಭ ದಿನದಂದು ಗ್ರಹಗಳ ಪ್ರಭಾವವು ದ್ವಾದಶ ರಾಶಿಗಳ ಮೇಲೆ ಇರಲಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ 3 ಗಂಟೆ 36 ನಿಮಿಷದವರೆಗೆ ರಾಹುಕಾಲವಿರುತ್ತದೆ. ಶುಭಕಾಲವು ಮಧ್ಯಾಹ್ನ 12 ಗಂಟೆ 25 ನಿಮಿಷದಿಂದ 2 ಗಂಟೆಯವರೆಗೆ ಇರಲಿದ್ದು, ಸರ್ವ ಸಿದ್ಧಿ ಮತ್ತು ಸಂಕಲ್ಪಗಳಿಗೆ ಇದು ಉತ್ತಮ ಸಮಯ. ರವಿ ಗ್ರಹವು ರಾತ್ರಿ 11 ಗಂಟೆ 44 ನಿಮಿಷಕ್ಕೆ ಕರ್ಕಾಟಕ ರಾಶಿಯನ್ನು ಪ್ರವೇಶಿಸಿ ದಕ್ಷಿಣಾಯನ ಆರಂಭವಾಗಲಿದೆ. ವೊಕ್ಕಲೇರಿಯಲ್ಲಿ ಮಾರ್ಕಂಡೋತ್ಸವ, ಶ್ರೀರಾಮ ರಥೋತ್ಸವ ಮತ್ತು ಉತ್ತರ ಶೃಂಗ ಚಂದ್ರೋದಯದ ಪರ್ವ ದಿನವೂ ಇದಾಗಿದೆ. ಮೇಷ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಆದಾಯದಲ್ಲಿ ಏರಿಕೆ ಮತ್ತು ಆಕಸ್ಮಿಕ ಧನ ಯೋಗವಿದೆ. ವೃಷಭ ರಾಶಿಯವರಿಗೆ ಆರು ಗ್ರಹಗಳ ಶುಭಫಲ ದೊರೆಯಲಿದ್ದು, ಪರಿಶ್ರಮದಿಂದ ಕಾರ್ಯಗಳಲ್ಲಿ ಶುಭವಾಗಲಿದೆ. ವ್ಯಾಪಾರ ಮತ್ತು ಆರ್ಥಿಕ ವಿಚಾರಗಳಲ್ಲಿ ಉತ್ತಮ ಬೆಳವಣಿಗೆ ಕಾಣುವಿರಿ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ