ಇಂದು ಜುಲೈ 29, 2026, ಬುಧವಾರ, ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಶುಕ್ಲಪಕ್ಷದ ಹುಣ್ಣಿಮೆ ದಿನವಾದ ಇಂದು ಗುರು ಪೂರ್ಣಿಮಾ ಹಾಗೂ ವ್ಯಾಸ ಪೂರ್ಣಿಮಾ ಆಗಿರುತ್ತದೆ. ವೇದವ್ಯಾಸ ಮಹರ್ಷಿಗಳ ಜನ್ಮದಿನವನ್ನು ಆಚರಿಸುವ ಈ ದಿನ ಗುರುಗಳ ಸೇವೆ, ಗುರು ಆರಾಧನೆ, ಅನ್ನದಾನ ಮತ್ತು ಭಕ್ತಿಪೂರ್ವಕ ಸ್ಮರಣೆಗೆ ಹೆಚ್ಚಿನ ಮಹತ್ವವಿದೆ. ಇಂದು ರವಿ ಕರ್ಕಾಟಕ ರಾಶಿಯಲ್ಲಿ ಮತ್ತು ಚಂದ್ರ ಮಕರ ರಾಶಿಯ ಉತ್ತರಾಷಾಢ ನಕ್ಷತ್ರದಲ್ಲಿ ಸಂಚರಿಸಲಿದ್ದು, ರಾಹುಕಾಲ 12:25 PM ರಿಂದ 2:00 PM ರವರೆಗೆ ಇದ್ದು, ಸಂಕಲ್ಪ ಕಾಲ 10:50 AM ರಿಂದ 12:26 PM ರವರೆಗೆ ಇರಲಿದೆ. ಇಂದಿನ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.