ಇಂದು ಆಗಸ್ಟ್ 4, 2026ರ ಮಂಗಳವಾರ, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷದ ಷಷ್ಠಿ ತಿಥಿ ಹಾಗೂ ರೇವತಿ ನಕ್ಷತ್ರದ ಈ ದಿನವು ಸಾಕ್ಷಾತ್ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಪಡೆಯಲು ವಿಶೇಷವಾಗಿದೆ. ಇಂದು ಬಾಲಗಂಗಾಧರ ತಿಲಕರ ಜಯಂತಿ ಹಾಗೂ ಮೈಸೂರಿನ ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವದ ಶುಭ ದಿನವೂ ಹೌದು. ಇಂದಿನ ರಾಹುಕಾಲ ಮಧ್ಯಾಹ್ನ 3:34 ರಿಂದ ಸಂಜೆ 5:09 ರವರೆಗೆ ಇರಲಿದ್ದು, ಮಧ್ಯಾಹ್ನ 12:25 ರಿಂದ 1:58 ರವರೆಗೆ ಸರ್ವಸಿದ್ಧಿ ಹಾಗೂ ಸಂಕಲ್ಪದ ಶುಭಕಾಲವಾಗಿದೆ. ‘ಟಿವಿ9 ಡಿಜಿಟಲ್’ ವಾಹಿನಿಯ ‘ದಿನಭವಿಷ್ಯ’ ಕಾರ್ಯಕ್ರಮದಲ್ಲಿ ಪ್ರಸಿದ್ಧ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ಅವರು ಇಂದಿನ ದ್ವಾದಶ ರಾಶಿಗಳ ಫಲಗಳನ್ನು ವಿವರಿಸಿದ್ದಾರೆ.