ಕನ್ಯಾ ರಾಶಿಯವರಿಗೆ 2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆಯಿಂದ ಏನೆಲ್ಲ ಆಗಲಿವೆ ಎನ್ನುವುದನ್ನು ನೋಡಬಹುದು. ಅದರಲ್ಲೂ ರಾಶಿಯ ಅಧಿಪತಿ ನೀಚಸ್ಥಾನದಲ್ಲಿ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜಾಗರೂಕತೆಯಿಂದ ಇರಲೇಬೇಕಾಗುವುದು.
ಗ್ರಹಗಳ ಸ್ಥಿತಿ ಮತ್ತು ಪ್ರಭಾವ
ಶುಭ ಫಲ ನೀಡುವ ಗ್ರಹ :
ಗುರುವು ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಅಂದರೆ ಕರ್ಮ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಇದು ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತದೆ. ಮೇಲಧಿಕಾರಿಗಳಿಂದ ಮೆಚ್ಚುಗೆ ಮತ್ತು ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ಇದು ನಿಮ್ಮ ಸಾಮಾಜಿಕ ಗೌರವವನ್ನು ಹೆಚ್ಚಿಸುತ್ತದೆ.
ಶುಕ್ರನು ತನ್ನ ಸ್ವಂತ ರಾಶಿಯಾದ ವೃಷಭದಲ್ಲಿ, ನಿಮ್ಮ ಭಾಗ್ಯ ಸ್ಥಾನದಲ್ಲಿರುವುದು ಅತ್ಯಂತ ಶುಭಕರ. ಇದು ಅದೃಷ್ಟದ ಬಾಗಿಲು ತೆರೆಯುವಂತೆ ಮಾಡುತ್ತದೆ. ದೀರ್ಘಕಾಲದ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮತ್ತು ಆರ್ಥಿಕ ಲಾಭಕ್ಕೆ ಇದು ಪೂರಕವಾಗಿದೆ. ಮಹಿಳೆಯರಿಂದ ಅಥವಾ ಸಂಗಾತಿಯಿಂದ ಲಾಭವಿರುತ್ತದೆ.
ಮಿಶ್ರ ಫಲ ನೀಡುವ ಗ್ರಹ :
ಸೂರ್ಯನು ಎಂಟನೇ ಮನೆಯಲ್ಲಿ ಉಚ್ಚನಾಗಿದ್ದರೂ, ಇದು ಅಷ್ಟಮ ರವಿ ಎನಿಸಿಕೊಳ್ಳುತ್ತಾನೆ. ಇದರಿಂದ ಆರೋಗ್ಯದಲ್ಲಿ ಏರುಪೇರು ಅಥವಾ ಅನಗತ್ಯ ಅಲೆದಾಟ ಉಂಟಾಗಬಹುದು. ಸರ್ಕಾರಿ ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಈ ಸಮಯದಲ್ಲಿ ಕೋಪದ ಮೇಲೆ ನಿಯಂತ್ರಣವಿರಲಿ.
ಶನಿ, ಕುಜ ಮತ್ತು ಬುಧ ಏಳನೇ ಮನೆಯಲ್ಲಿ ಈ ಮೂರು ಗ್ರಹಗಳ ಸಂಯೋಗವು ಸ್ವಲ್ಪ ಸವಾಲಿನಿಂದ ಕೂಡಿದೆ. ಶನಿ ಮತ್ತು ಕುಜರು ದಾಂಪತ್ಯ ಜೀವನದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರದಲ್ಲಿ ಘರ್ಷಣೆಗಳು ಉಂಟಾಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಗಮನಹರಿಸುವುದು ಮುಖ್ಯ.
ನಿಮ್ಮ ರಾಶ್ಯಾಧಿಪತಿಯಾದ ಬುಧನು ಏಳನೇ ಮನೆಯಲ್ಲಿ ನೀಚಾವಸ್ಥೆಯಲ್ಲಿರುವುದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು. ಚರ್ಮದ ಸಮಸ್ಯೆ ಅಥವಾ ನರಗಳ ದೌರ್ಬಲ್ಯ ಕಾಡಬಹುದು.
ಗುರು ಮತ್ತು ಶುಕ್ರನ ಬಲವಿರುವುದರಿಂದ ಹಣಕಾಸಿನ ಹರಿವು ಚೆನ್ನಾಗಿರುತ್ತದೆ. ಆದರೆ, ಬುಧ ನೀಚನಾಗಿರುವುದರಿಂದ ದೊಡ್ಡ ಹೂಡಿಕೆ ಮಾಡುವ ಮುನ್ನ ಅನುಭವಸ್ಥರ ಸಲಹೆ ಪಡೆಯಿರಿ. ರವಿ ಮತ್ತು ಕುಜನ ಪ್ರಭಾವದಿಂದ ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಕಾಯಿಲೆಗಳ ಬಗ್ಗೆ ಎಚ್ಚರವಿರಲಿ.
ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸುವುದು ಅಥವಾ ಕೇಳುವುದು ಬುಧನ ದೋಷವನ್ನು ಕಡಿಮೆ ಮಾಡುತ್ತದೆ. ಶನಿ ಮತ್ತು ಕುಜನ ಶಾಂತಿಗಾಗಿ ಶನಿವಾರದಂದು ಆಂಜನೇಯ ಸ್ವಾಮಿಯ ದರ್ಶನ ಮಾಡಿ.
ಏಪ್ರಿಲ್ ತಿಂಗಳು ನಿಮಗೆ ವೃತ್ತಿಜೀವನದಲ್ಲಿ ಯಶಸ್ಸನ್ನು ನೀಡಿದರೂ, ವೈಯಕ್ತಿಕ ಸಂಬಂಧ ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಸಂಯಮ ತಂದುಕೊಳ್ಳಿ.
– ಲೋಹಿತ ಹೆಬ್ಬಾರ್