
ಬೆಂಗಳೂರು, ಮಾ,20: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬೇಸಿಗೆಯ ಬಿಸಿ ಕನ್ನಡಿಗರನ್ನು ಕಂಗಾಲಾಗಿಸಿದೆ. ಇಂದು (ಮಾರ್ಚ್ 20, 2026) ರಾಜ್ಯದ ಪ್ರಮುಖ ನಗರಗಳಲ್ಲಿ ದಾಖಲಾದ ಹವಾಮಾನ ಬದಲಾವಣೆಗಳ ವಿವರ ಇಲ್ಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 34°C – 35°C ತಲುಪುವ ಸಾಧ್ಯತೆಯಿದೆ. ಸಂಜೆಯ ವೇಳೆ ಭಾಗಶಃ ಮೋಡ ಕವಿದ ವಾತಾವರಣವಿದ್ದರೂ, ಉಷ್ಣಾಂಶ ಕಡಿಮೆಯಾಗುವ ಲಕ್ಷಣಗಳಿಲ್ಲ.
ಕಲ್ಬುರ್ಗಿ, ರಾಯಚೂರು ಮತ್ತು ಬಳ್ಳಾರಿಯಲ್ಲಿ ತಾಪಮಾನವು 40°C ಗಡಿ ದಾಟುತ್ತಿದೆ. ಈ ಭಾಗದಲ್ಲಿ ಬಿಸಿ ಗಾಳಿ (Heat Wave) ಬೀಸುವ ಸಾಧ್ಯತೆ ಇರುವುದರಿಂದ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸಾರ್ವಜನಿಕರು ಹೊರಬರಬೇಡಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಮಂಗಳೂರು, ಉಡುಪಿ ಭಾಗದಲ್ಲಿ ತಾಪಮಾನದ ಜೊತೆಗೆ ಉಸಿರುಕಟ್ಟುವಂತಹ ಆರ್ದ್ರತೆ (Humidity) ಹೆಚ್ಚಾಗಿದ್ದು, ಗರಿಷ್ಠ ತಾಪಮಾನ 36°C ಆಸುಪಾಸಿನಲ್ಲಿದೆ.

ಹವಾಮಾನ ಇಲಾಖೆಯ ಪ್ರಕಾರ, ಮಲೆನಾಡು ಜಿಲ್ಲೆಗಳಾದ ಕೊಡಗು ಮತ್ತು ಶಿವಮೊಗ್ಗದ ಕೆಲವು ಭಾಗಗಳಲ್ಲಿ ಅತಿ ಸಣ್ಣ ಪ್ರಮಾಣದಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ತುಂತುರು ಮಳೆಯಾಗುವ ಸಾಧ್ಯತೆ ತೀರಾ ವಿರಳವಾಗಿದೆ. ಇನ್ನು ಗದಗdಲ್ಲಿ ಶುಷ್ಕ ಹವಾಮಾನ ಮತ್ತು ಅತಿ ಹೆಚ್ಚು ಬಿಸಿಲು ಇರಲಿದೆ. ತಾಪಮಾನ ಗರಿಷ್ಠ 39°C, ಕನಿಷ್ಠ 24°C ಇರಲಿದೆ. ಮೋಡಗಳ ಸುಳಿವೇ ಇಲ್ಲದೆ ಸೂರ್ಯನ ಪ್ರತಾಪ ಹೆಚ್ಚಿರಲಿದೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರುವಾಗ ಎಚ್ಚರಿಕೆ ವಹಿಸಿ.
ಇದನ್ನೂ ಓದಿ: ದಿನ ಭವಿಷ್ಯ: ಇಂದು ಈ ರಾಶಿಯವರೇ ನಿಮ್ಮ ಸಹಾಯಕ್ಕೆ ಆಗುವರು
ಹಾವೇರಿಯಲ್ಲಿ ತೀವ್ರ ಬಿಸಿಲು ಮತ್ತು ಸೆಕೆ ಇರಲಿದೆ. ತಾಪಮಾನ ಗರಿಷ್ಠ 38°C, ಕನಿಷ್ಠ 23°C ಇರಲಿದೆ. ಗಾಳಿಯ ವೇಗ ಕಡಿಮೆ ಇರಲಿದ್ದು, ಸೆಕೆಯಿಂದಾಗಿ ಜನರು ಹೈರಾಣಾಗುವ ಸಾಧ್ಯತೆಯಿದೆ. ಇನ್ನು ಚಿಕ್ಕಮಗಳೂರಿನಲ್ಲಿ ಆಹ್ಲಾದಕರವಾಗಿದ್ದರೂ ಬಿಸಿಲಿನ ತೀವ್ರತೆ ಹೆಚ್ಚಿದೆ. ತಾಪಮಾನ ಗರಿಷ್ಠ 33°C, ಕನಿಷ್ಠ 19°C ಇರಲಿದೆ. ಮಧ್ಯಾಹ್ನ ಬಿಸಿಲು ಹೆಚ್ಚಿರುತ್ತದೆ, ಆದರೆ ಸಂಜೆ ವೇಳೆ ಗುಡ್ಡಗಾಡು ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಬಹುದು. ಹಾಸನದಲ್ಲಿ ಸಾಧಾರಣ ಬಿಸಿಲು ಮತ್ತು ಶುಷ್ಕ ಹವಾಮಾನ. ತಾಪಮಾನ ಗರಿಷ್ಠ 34°C, ಕನಿಷ್ಠ 21°C ಇರಲಿದೆ. ಮಳೆಯ ಯಾವುದೇ ಮುನ್ಸೂಚನೆ ಇಲ್ಲ. ಬಯಲು ಸೀಮೆಯ ಪ್ರಭಾವದಿಂದ ಸೆಕೆ ಹೆಚ್ಚಾಗಿರಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ