ಕೆಎಲ್ ರಾಹುಲ್ ನಟನೆಗೆ ‘ಆಸ್ಕರ್’ ಪ್ರಶಸ್ತಿ ನೀಡಬೇಕು: ಗ್ರೇಮ್ ಸ್ವಾನ್ – Kannada News

ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಎರಡು ಕಾರಣಗಳಿಂದ ಸುದ್ದಿಯಾಗಿದ್ದಾರೆ. ಮೊದಲಿಗೆ ಡಿಆರ್‌ಎಸ್​ನಿಂದ ಪಾರಾಗಿ ಸುದ್ದಿಯಾಗಿದ್ದ ರಾಹುಲ್, ಆ ಬಳಿಕ ಸೆಂಚುರಿ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಡಿಆರ್​ಎಸ್​​ ಹಾಗೂ ಸೆಂಚುರಿಗಳಿಂದ ಸುದ್ದಿಯಾಗಲು ಮುಖ್ಯ ಕಾರಣ 11ನೇ ಓವರ್​ನಲ್ಲೇ ಸಿಕ್ಕ ಜೀವದಾನ!

11ನೇ ಓವರ್‌ನಲ್ಲಿ ಅಫ್ಘಾನಿಸ್ತಾನ್ ವೇಗಿ ಝಿಯಾವುರ್ ರೆಹಮಾನ್ ಶರೀಫಿ ಎಸೆದ ಚೆಂಡನ್ನು ರಾಹುಲ್ ಕಟ್ ಮಾಡಲು ಪ್ರಯತ್ನಿಸಿದ್ದರು. ಆದರೆ ಚೆಂಡು ಅವರ ಬ್ಯಾಟ್‌ನ ತುದಿಗೆ ಸವರಿ ನೇರವಾಗಿ ವಿಕೆಟ್ ಕೀಪರ್ ಅಫ್ಸರ್ ಜಜಾಯ್ ಕೈ ಸೇರಿತು.

ಅಫ್ಘಾನಿಸ್ತಾನದ ಆಟಗಾರರು ಔಟ್ ಎಂದು ಜೋರಾಗಿ ಅಪೀಲ್ ಮಾಡಿದರೂ, ಅಂಪೈರ್ ಅದನ್ನು ನಾಟೌಟ್ ಎಂದು ಘೋಷಿಸಿದರು. ಈ ವೇಳೆ ಕೆಎಲ್ ರಾಹುಲ್ ಯಾವುದೇ ಆತಂಕವಿಲ್ಲದೆ, ತಮಗೇನೂ ತಿಳಿಯದಂತೆ ಅತ್ಯಂತ ಶಾಂತವಾಗಿ ತಲೆಯಾಡಿಸಿದರು.

ಅಷ್ಟೇ ಅಲ್ಲದೆ ಅಫ್ಘಾನ್ ಆಟಗಾರರು ಡಿಆರ್​ಎಸ್​ ತೆಗೆದುಕೊಳ್ಳಲು ಕೆಎಲ್ ರಾಹುಲ್ ಅವರ ಹಾವಭಾವನ್ನು ಗಮನಿಸಿದ್ದಾರೆ. ಈ ವೇಳೆ ಅವರು ಬ್ಯಾಟ್​ನ ಹ್ಯಾಂಡಲ್​ನಿಂದ ಸೌಂಡ್ ಬಂದಂತೆ ಪರೀಕ್ಷಿಸುತ್ತಿದ್ದ ನಿಂತಿದ್ದರು.

ಇದಾಗ್ಯೂ  ಸ್ಲಿಪ್‌ನಲ್ಲಿದ್ದ ರಹಮಾನುಲ್ಲಾ ಗುರ್ಬಾಝ್ ರಿವ್ಯೂ ತೆಗೆದುಕೊಳ್ಳುವಂತೆ ನಾಯಕ ಹಶ್ಮತುಲ್ಲಾ ಶಾಹಿದಿಗೆ ಒತ್ತಾಯಿಸಿದರು. ಆದರೆ ರಾಹುಲ್ ಅವರ ಮುಖದ ಹಾವಭಾವ ನೋಡಿ ಗೊಂದಲಕ್ಕೊಳಗಾದ ಕೀಪರ್ ಮತ್ತು ನಾಯಕ ರಿವ್ಯೂ ಬೇಡ ಎಂದು ನಿರ್ಧರಿಸಿದರು.

ಮುಂದಿನ ಕೆಲವು ನಿಮಿಷಗಳಲ್ಲಿ ಟಿವಿ ರಿಪ್ಲೇನಲ್ಲೇ ಬ್ಯಾಟ್‌ಗೆ ಚೆಂಡು ಸ್ಪಷ್ಟವಾಗಿ ತಗುಲಿರುವುದು ದೊಡ್ಡ ಸ್ಪೈಕ್ ಮೂಲಕ ಸಾಬೀತಾಯಿತು. ಇದನ್ನು ನೋಡಿ ಅಫ್ಘಾನ್ ಆಟಗಾರರು ತಲೆಮೇಲೆ ಕೈ ಹೊತ್ತು ಕುಳಿತುಕೊಂಡರು. ಅಂದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಅಫ್ಘಾನ್ ಆಟಗಾರರು ವಿಫಲರಾದರು.

ರಾಹುಲ್ ನಟನೆಗೆ ಆಸ್ಕರ್ ಪ್ರಶಸ್ತಿ ನೀಡಬೇಕು!

ಈ ಎಲ್ಲಾ ಸನ್ನಿವೇಶಗಳನ್ನು ಗಮನಿಸುತ್ತಿದ್ದ ಮಾಜಿ ಇಂಗ್ಲೆಂಡ್ ಸ್ಪಿನ್ನರ್ ಗ್ರೇಮ್ ಸ್ವಾನ್ ಈ ಬಗ್ಗೆ ಲೈವ್ ಕಾಮೆಂಟರಿಯಲ್ಲಿ ಮಾತನಾಡುತ್ತಾ, “ಕೆ.ಎಲ್. ರಾಹುಲ್ ಇಲ್ಲಿ ಅದ್ಭುತ ಆಟ ಆಡಿದ್ದಾರೆ. ನಾಯಕ ಮತ್ತು ಕೀಪರ್ ರಾಹುಲ್ ಮುಖ ನೋಡಿದಾಗ ಅವರು ಏನೂ ಆಗಿಲ್ಲ ಎಂಬಂತೆ ತಲೆಯಾಡಿಸಿದರು. ಎದುರಾಳಿಗಳು ಅದನ್ನು ನಂಬಿಯೇ ಬಿಟ್ಟರು. ರಾಹುಲ್ ಅವರ ಈ ನಟನೆಗೆ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನ ಮಾಡಬೇಕು” ಎಂದು ಲೇವಡಿ ಮಾಡಿದ್ದಾರೆ.

ಅಂದರೆ ಗ್ರೇಮ್ ಸ್ವಾನ್ ಪ್ರಕಾರ, ಕೆಎಲ್ ರಾಹುಲ್ ತಮ್ಮ ನಟನೆಯ ಮೂಲಕ ಅಫ್ಘಾನಿಸ್ತಾನ್ ಆಟಗಾರರು ಡಿಆರ್​ಎಸ್​ ತೆಗೆದುಕೊಳ್ಳುದಂತೆ ಮಾಡಿದ್ದಾರೆ. ಸಿನಿಮಾಗಳಲ್ಲಿ ಅತ್ಯುತ್ತಮವಾಗಿ ನಟಿಸುವ ನಟ-ನಟಿಯರಿಗೆ ವಿಶ್ವದ ಅತ್ಯುನ್ನತ ‘ಆಸ್ಕರ್ ಪ್ರಶಸ್ತಿ’ ನೀಡಲಾಗುತ್ತದೆ. ಇಲ್ಲಿ ಕೆ.ಎಲ್. ರಾಹುಲ್ ಮೈದಾನದಲ್ಲಿ ಒಬ್ಬ ವೃತ್ತಿಪರ ನಟನಿಗಿಂತಲೂ ಅದ್ಭುತವಾಗಿ ನಟಿಸಿ ಎದುರಾಳಿ ತಂಡವನ್ನು ದಾರಿ ತಪ್ಪಿಸಿದ್ದಾರೆ ಎಂದು ಗ್ರೇಮ್ ಸ್ವಾನ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಒಂದೇ ತಂಡವಾದ ಎರಡು ಟೀಮ್​​ಗಳು..!

ಸೆಂಚುರಿ ಸಿಡಿಸಿದ ಕನ್ನಡಿಗ:

ಕೇವಲ 16 ರನ್ ಗಳಿಸಿದ್ದಾಗ ಸಿಕ್ಕ ಈ ಜೀವದಾನವನ್ನು ಪೂರ್ಣವಾಗಿ ಬಳಸಿಕೊಂಡ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 165 ಎಸೆತಗಳಲ್ಲಿ ಭರ್ಜರಿ ಶತಕ (100 ರನ್) ಬಾರಿಸಿದರು. ಇವರೊಂದಿಗೆ ನಾಯಕ ಶುಭ್‌ಮನ್ ಗಿಲ್ (103*) ಕೂಡ ಶತಕ ಸಿಡಿಸಿದರು. ಪರಿಣಾಮ, ಭಾರತ ತಂಡವು  ಮೊದಲ ದಿನದ ಆಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 368  ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ.

Source link

Leave a Reply

Your email address will not be published. Required fields are marked *