
ನಿರ್ದೇಶಕ ಆದಿತ್ಯ ಧಾರ್ (Aditya Dhar) ಅವರು ಈಗ ಸುದ್ದಿಯಲ್ಲಿದ್ದಾರೆ. ಅವರ ನಿರ್ದೇಶನದ ‘ಧುರಂಧರ್’ ಸಿನಿಮಾ ಅದ್ಭುತ ಯಶಸ್ಸು ಕಂಡಿತು. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1300 ಕೋಟಿ ರೂಪಾಯಿ ಗಳಿಕೆ ಮಾಡಿತು. ಈ ಮೂಲಕ ಹಲವು ದಾಖಲೆಗಳನ್ನು ಬರೆಯಿತು. ಹಿಂದಿ ಚಿತ್ರವೊಂದು ವಿಶ್ವ ಮಟ್ಟದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಸಿದ್ದು ಇದೇ ಮೊದಲು. ಇನ್ನು, ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಲವು ದಾಖಲೆಗಳನ್ನು ಮಾಡಲು ರೆಡಿ ಆಗಿದೆ. ಈ ಮಧ್ಯೆ ಚಿತ್ರದ ನಿರ್ದೇಶಕ ಆದಿತ್ಯ ಧಾರ್ ಅವರ ಬಗ್ಗೆ ಚರ್ಚೆ ಆಗುತ್ತಿದೆ. ಅವರು ಕ್ರಿಕೆಟರ್ ಆಗಹೊರಟಿದ್ದರು. ಆದರೆ, ಅಲ್ಲಿನ ರಾಜಕೀಯ ಅವರಿಗೆ ಅವಕಾಶ ನೀಡಲೇ ಇಲ್ಲ.
ಕ್ರಿಕೆಟ್ ಅಲ್ಲಿ ಹೆಸರು ಮಾಡಬೇಕು ಎಂದು ಆದಿತ್ಯಧಾರ್ ಪ್ರಯತ್ನಿಸಿದ್ದರು. ಏನೇ ಮಾಡಿದರೂ ಅದರ ಒಳಗೆ ಎಂಟ್ರಿ ಸಿಗಲೇ ಇಲ್ಲ. ಈ ಕಾರಣದಿಂದ ಅವರು ಸಿನಿಮಾದತ್ತ ವಾಲಿದರು. ಅಲ್ಲಿ ಅವರಗೆ ದೊಡ್ಡ ಯಶಸ್ಸು ಸಿಕ್ಕಿತು. ಈ ಬಗ್ಗೆ ನಿರ್ದೇಶಕ ಪ್ರಿಯದರ್ಶನ್ ಮಾತನಾಡಿದ್ದಾರೆ.
‘ಆದಿತ್ಯ ಧಾರ್ ಕ್ರಿಕೆಟಿಗರಾಗಿದ್ದರು. ಆದರೆ ಕೆಲವು ರಾಜಕೀಯ ಪ್ರಭಾವದಿಂದಾಗಿ ಅಂಡರ್ -19 ತಂಡಕ್ಕೆ ಸೇರಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರನ್ನು ಹೊರಹಾಕಲಾಯಿತು. ಮನೆಯಲ್ಲಿ ಕುಳಿತಿದ್ದಾಗ ಅವರು ತುಂಬಾ ನಿರಾಶೆಗೊಂಡಿದ್ದರು. ಯಾರೋ ಅವರಿಗೆ ಸಿನಿಮಾ ನೋಡಲು ಬರುವಂತೆ ಕರೆ ನೀಡಿದರು. ಅದು ಗಾರ್ಡಿಶ್ ಹೆಸರಿನ ಸಿನಿಮಾ ಆಗಿತ್ತು. ಚಿತ್ರ ನೋಡಿದ ಬಳಿಕ ಅವರಿಗೆ ಸಿನಿಮಾ ಮಾಡುವ ಬಯಕೆ ಬಂತು’ ಎಂದು ನಿರ್ದೇಶಕ ಪ್ರಿಯದರ್ಶನ್ ಹೇಳಿದ್ದಾರೆ.
ಇದನ್ನೂ ಓದಿ: ‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು
ಆದಿತ್ಯ ಧಾರ್ ಮುಂಬೈಗೆ ಬಂದರು. ಇಲ್ಲಿ ಸಿನಿಮಾ ಮಾಡಲು ಆರಂಭಿಸಿದರು. ಆದರೆ, ಅವರಿಗೆ ಕ್ರೆಡಿಟ್ ಸಿಗಲಿಲ್ಲ. ಕೊನೆಗೆ 2010ರ ಸಮಯದಲ್ಲಿ ಆದಿತ್ಯ ಅವರು ಪ್ರಿಯದರ್ಶನ್ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಆ ಬಳಿಕ ಅವರು ಪೂರ್ಣಪ್ರಮಾಣದ ನಿರ್ದೇಶಕರಾದರು. ಈಗ ಎಲ್ಲರೂ ತಿರುಗಿ ನೋಡುವ ರೀತಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.