ಮುಂಬೈ, ಮಾರ್ಚ್ 3: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ (Ayatollah Ali Khamenei) ಸಾವಿನ ಬಗ್ಗೆ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಹಾರಾಷ್ಟ್ರದ ಮುಂಬೈನಲ್ಲಿ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಮೌಲಾನಾ ಹಸನ್ ಅಲಿ ರಜನಿ, “ಅಲ್ಲಿ ಮಡಿದವರಿಗೆ ನಾವು ನಮ್ಮ ಸಂತಾಪ ಸೂಚಿಸುತ್ತೇವೆ. ನಾವು ಕೂಡ ಅವರ ದುಃಖವನ್ನು ಹಂಚಿಕೊಳ್ಳುತ್ತೇವೆ. ಆದರೆ ಪ್ರತಿಯೊಂದು ದೇಶವು ತನ್ನ ವಿವಾದಗಳನ್ನು ತನ್ನ ದೇಶದೊಳಗೆ ಇಟ್ಟುಕೊಳ್ಳಬೇಕು, ಅವುಗಳನ್ನು ಬೇರೆಡೆಗೆ ತರಬಾರದು” ಎಂದು ಹೇಳಿದ್ದಾರೆ.
“ಇಂದು ಪ್ರಪಂಚದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ, ಅವು ಭಾರತದಲ್ಲಿರಲಿ ಅಥವಾ ಪಾಕಿಸ್ತಾನದಲ್ಲಿರಲಿ, ಏಕೆಂದರೆ ಸಾಯುತ್ತಿರುವವರು ನಮ್ಮ ನಾಯಕರಲ್ಲ. ನಾವು ನಮ್ಮ ದೇಶಕ್ಕೆ ನಿಷ್ಠರಾಗಿರಬೇಕು. ಬೇರೆ ದೇಶದ ಹಿಂಸಾಚಾರಗಳು ನಮ್ಮ ದೇಶದೊಳಗೆ ಪ್ರವೇಶಿಸಬಾರದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ