Headlines

ಡಾಂಬರೀಕರಣದಲ್ಲಿ ಕಳ್ಳಾಟ: ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಮೊದಲ ವಿಕೆಟ್ ಪತನ – Kannada News | Minister Krishna byre gowda Suspends GBA Assistant Engineer Over Poor Road Repair In bengaluru

ಬೆಂಗಳೂರು, (ಜೂನ್ 20): ಹಲವು ಗೊಂದಲಗಳ ನಡುವೆಯೇ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಕೃಷ್ಣಭೈರೇಗೌಡ ಅವರು ಮೊದಲ ಸಭೆಯಲ್ಲೇ ನಗರದ ರಸ್ತೆಗಳ ಬಗ್ಗೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದರು. ಬೆಂಗಳೂರು ರಸ್ತೆ ಗುಂಡಿ ಮುಚ್ಚೋದು ರಾಕೆಟ್ ಸೈನ್ಸಾ? ಎಂದು ಜಿಬಿಎ ಅಧಿಕಾರಿಗಳ ಚಳಿ ಬಿಡಿಸಿದ್ದರು. ಇದರ ಮಧ್ಯೆಯೇ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಮೊದಲ ವಿಕೆಟ್ ಪತನವಾಗಿದೆ. ಹೌದು… ಕ್ರೆಸೆಂಟ್ ರಸ್ತೆಯ ಡಾಂಬರೀಕರಣದಲ್ಲಿ ಕಳ್ಳಾಟವಾಡಿ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಸಂಪಂಗಿರಾಮನಗರ ಸಹಾಯಕ ಇಂಜಿನಿಯರ್ ಪೂಜಾರಪ್ಪ ಅಮಾನತುಗೊಂಡವರು.

ಸರಿಯಾದ ಪ್ರಮಾಣದಲ್ಲಿ ಮತ್ತು ದಪ್ಪ ಆಸ್ಪಾಲ್ಟಿಂಗ್ ಮಾಡದೇ ಅಸಡ್ಡೆ ಬೇಜವಾಬ್ದಾರಿತನದಿಂದ ಕರ್ತವ್ಯಲೋಪ ಹಿನ್ನಲೆಯಲ್ಲಿ ಎಇ ಪೂಜಾರಪ್ಪನನ್ನು ಜಿಬಿಎ ಅಮಾನತು ಮಾಡಿದೆ. ಅಲ್ಲದೇ ಕೃಷ್ಣಭೈರೇಗೌಡ ಅವರು, ರಸ್ತೆ ಮಾಡಿದ ಗುತ್ತಿಗೆದಾರರನ ಪೂರ್ಣ ವಿವರ ಕೇಳಿದ್ದು, ಜೊತೆಗೆ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ ಸೇರ್ಪಡೆಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಗುಂಡಿ ಇಲ್ಲದ ರಸ್ತೆ ನಿರ್ಮಾಣ ರಾಕೆಟ್ ಸೈನ್ಸಾ? ಮೊದಲ ಸಭೆಯಲ್ಲೇ ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಕ್ಲಾಸ್

Source link

Leave a Reply

Your email address will not be published. Required fields are marked *