
ಕೋಲಾರ, ಏಪ್ರಿಲ್ 17: ಜನಸ್ಪಂದನ ಕಾರ್ಯಕ್ರಮದಲ್ಲಿ ಪಿಡಿಒ ವಿರುದ್ಧ ಶಾಸಕ ಸಮೃದ್ಧಿ ಮಂಜುನಾಥ್ ಗರಂ ಆದ ಪ್ರಸಂಗ ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದಲ್ಲಿ ನಿನ್ನೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಡೆದಿದೆ. 78 ಅರ್ಜಿಗಳ ಪೈಕಿ 56 ಅರ್ಜಿಗಳ ಕಾರ್ಯವೈಖರಿ ಬಗ್ಗೆ ದೂರು ಹಿನ್ನೆಲೆ ಗ್ರಾಮಗಳಲ್ಲಿ ಸಮಸ್ಯೆಗಳ ಸರಮಾಲೆ ಕಂಡ ಶಾಸಕರು ತಾಯಲೂರು ಪಿಡಿಒ ಶ್ರೀನಿವಾಸರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ನೈರ್ಮಲ್ಯ, ಅನಧಿಕೃತ ಅಂಗಡಿಗಳ ತೆರವು, ಚರಂಡಿ ಸ್ವಚ್ಛತೆ, ದೇವಾಲಯದ ಎದುರು ಮಾಂಸದ ಅಂಗಡಿಗೆ ಅನುಮತಿ ಸೇರಿದಂತೆ ಗ್ರಾಮಸ್ಥರಿಂದ ಹಲವು ದೂರು ಬಂದ ಹಿನ್ನೆಲೆ ಕೂಡಲೇ ಪಿಡಿಒ ವರ್ಗಾವಣೆಗೆ ಅಧಿಕಾರಿಗಳಿಗೆ ಶಾಸಕರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.