Headlines

ತೆಂಗಿನ ಗರಿಯಲ್ಲಿ ಅರಳಿದ ಡಾ. ಶಿವಕುಮಾರ ಸ್ವಾಮೀಜಿ ಕಲಾಕೃತಿಯ ಚಿತ್ತಾರ ಹೇಗಿದೆ ನೋಡಿ! – Kannada News | Dr. Shivakumara Swamiji 7th death Anniversary: Swamiji Portrait Blossoms on Coconut Leaf, Mesmerising Art Goes Viral

ತುಮಕೂರು, ಜನವರಿ 21: ಸಿದ್ಧಗಂಗಾ ಮಠದಲ್ಲಿ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ವೈಶಿಷ್ಟ್ಯಪೂರ್ಣವಾಗಿ ಜರುಗುತ್ತಿದೆ. ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದ ಮನು ಅವರು ತೆಂಗಿನ ಗರಿಗಳಿಂದ ರಚಿಸಿದ ಶಿವಕುಮಾರ ಸ್ವಾಮೀಜಿಗಳ ಸುಂದರ ಕಲಾಕೃತಿಯು ಗಮನ ಸೆಳೆದಿದೆ. ಈ ಕಲಾಕೃತಿ, ಸಂಪೂರ್ಣವಾಗಿ ತೆಂಗಿನ ಗರಿಗಳನ್ನು ಬಳಸಿ ತಯಾರಿಸಲಾಗಿದ್ದು, ಇದರ ನಿರ್ಮಾಣಕ್ಕೆ ಎಂಟು ತೆಂಗಿನ ಗರಿಗಳು ಬಳಕೆಯಾಗಿವೆ. ಕಲಾವಿದ ಮನು ಮತ್ತು ಅವರ ಟೀಮ್ ಗಜಸೇನಾ ಕಲಾವಿದರು ಸತತ 48 ಗಂಟೆಗಳ ಕಾಲ ಶ್ರಮವಹಿಸಿ ಈ ಮೂರ್ತಿಯನ್ನು ರೂಪಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *