
ಹನೂರು, ಆ.6: ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿರುವ ತೋಟದ ಮನೆಯೊಂದಕ್ಕೆ ವಿಷಕಾರಿ ‘ಕೊಳಕು ಮಂಡಲ’ (ರಕ್ತ ಮಂಡಲ) ಹಾವು ನುಗ್ಗಿದ್ದು, ಮನೆ ಮಂದಿಯನ್ನೆಲ್ಲ ಭೀತಿಗೊಳಿಸಿದ ಘಟನೆ ನಡೆದಿದೆ. ಹನೂರು ಪಟ್ಟಣದ ನಿವಾಸಿ ಆನಂದ್ ಎಂಬುವವರ ತೋಟದ ಮನೆಯಲ್ಲಿ ಈ ಬೃಹತ್ ಕೊಳಕು ಮಂಡಲ ಹಾವು ಕಾಣಿಸಿಕೊಂಡಿದೆ. ಹಾವನ್ನು ಕಂಡು ಆತಂಕಗೊಂಡ ಮನೆ ಮಾಲೀಕ ಆನಂದ್, ತಕ್ಷಣವೇ ಸ್ಥಳೀಯ ಉರಗ ತಜ್ಞ ಸ್ನೇಕ್ ಮಧು ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಮಧು, ಮನೆಯಲ್ಲಿದ್ದ ಕೊಳಕು ಮಂಡಲ ಹಾವನ್ನು ಚಾಣಾಕ್ಷತನದಿಂದ ರಕ್ಷಿಸುವಲ್ಲಿ ಯಶಸ್ವಿಯಾದರು. ಮನೆಯವರ ಆತಂಕ ದೂರ ಮಾಡಿದ ಬಳಿಕ, ಸೆರೆಹಿಡಿದ ಹಾವನ್ನು ಅರಣ್ಯ ಪ್ರದೇಶದ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಬಿಡುಗಡೆ ಮಾಡಿದ್ದಾರೆ. ಸ್ನೇಕ್ ಮಧು ಅವರ ಸಮಯಪ್ರಜ್ಞೆ ಹಾಗೂ ಉರಗ ರಕ್ಷಣೆಯ ಕಾರ್ಯಕ್ಕೆ ಮನೆ ಮಾಲೀಕರು ಹಾಗೂ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ