Headlines

ದಿನ ಭವಿಷ್ಯ: ಇಂದು ಈ ರಾಶಿಯವರು ಕೆಲವನ್ನು ಪ್ರತ್ಯಕ್ಷವಾಗಿ ಕಂಡರೂ ಪರಿಶೀಲನೆ ಮಾಡುವುದು ಮುಖ್ಯ… – Kannada News | Daily Horoscope for August 01, 2026: Dakshinayana Greeshma season, Ashada Masa Krishna Paksha Satursday astrology Prediction

ಮೇಷ ರಾಶಿ:

ಇಂದು ನಿಮಗೆ ಪ್ರಭಾವಿಗಳ ಭೇಟಿಯಾಗಲಿದೆ. ಅತಿಯಾಗಿ ಉದ್ಯೋಗವನ್ನು ಬದಲಾಯಿಸುವುದು ಸೂಕ್ತವಲ್ಲ. ದಿನ ಇತರರಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಇಂದು ಒಂದುರೀತು ಆತಂಕ ಮತ್ತು ಉದ್ವೇಗ ಇರಲಿದೆ. ಅಪಾಯಗಳನ್ನು ತೆಗೆದುಕೊಳ್ಳಬೇಡ. ಅಮೂಲ್ಯವಾದ ನಿಮ್ಮ ವಸ್ತುವು ಕಾಣಿಸದೇ ಇದ್ದೀತು ಅಥವಾ ಕಳ್ಳತನವೂ ಆಗಬಹುದು. ಮಕ್ಕಳಿಂದ ನಿಮಗೆ ಪ್ರಶಂಸೆಯು ಸಿಗಬಹುದು. ನಿಮ್ಮ ನೆಚ್ಚಿನ ಜನರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ.

ವೃಷಭ ರಾಶಿ:

ತಾವೇ ಶ್ರೇಷ್ಠ ಎಂಬ ಭಾವನೆ ನಿಮಗೆ ಬರಲಿದೆ. ನಿಮಗೆ ಪ್ರಶಂಸೆಗಳು ಸಿಗಲಿವೆ. ಸೃಜನಶೀಲ ಕೆಲಸದಿಂದ ಯಶಸ್ಸು ಸಿಗಲಿದೆ‌. ರಪ್ತು ಕಾರ್ಯದಿಂದ ಲಾಭವನ್ನು ಪಡೆಯುವಿರಿ. ಕೆಲಸದಲ್ಲಿ ತಾಳ್ಮೆಯಿಂದ ವರ್ತಿಸುವುದರಿಂದ ಯಶಸ್ಸು ಸಿಗುತ್ತದೆ. ನಿಮ್ಮ ತಲೆಯಲ್ಲಿ ನೂರಾರು ಆಲೋಚನೆಗಳು ಇದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಸಮಯವು ಹಿಡಿಯಬಹುದು. ಇಂದಿನ‌ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ‌ ಉತ್ಸಾಹವನ್ನು ಜಾಗರೂಕಗೊಳಿಸುವುದು.

ಮಿಥುನ ರಾಶಿ:

ಪರೀಕ್ಷೆಗಾಗಿ ನಿಮ್ಮ ಶ್ರಮ ಸಾಲದಾಗುವುದು. ಹಿರಿಯರು ನಿಮಗೆ ಕಾಲಕ್ಕೆ ಬೇಕಾದುದನ್ನು ಹೇಳಿಕೊಟ್ಟಾರು. ಸರಳತೆಯನ್ನು ರೂಢಿಸಿಕೊಳ್ಳಲು ನಿಮಗೆ ಇಷ್ಟವಿದ್ದರೂ ನಿಮ್ಮವರು ಅದನ್ನು ಬಿಡರು. ಉಪಯುಕ್ತವಾದ ತಂತ್ರಾಂಶವನ್ನು ನೀವು ಪಡೆಯುವಿರಿ. ನಿಮ್ಮ ಸಮಯವನ್ನು ಇತರರಿಗೆ ನೀಡುವುದು ಅಪ್ರಯೋಜಕ ಎನಿಸಬಹುದು. ನಿಮ್ಮ ಕೊರತೆಯೇ ನಿಮಗೆ ಶಾಪವಾಗಬಹುದು. ಕೇಳಿದಷ್ಟು ಹಣವನ್ನು ಕೊಟ್ಟು ಹೊಸ ವಸ್ತುವನ್ನು ಖರೀದಿಸುವಿರಿ.

ಕರ್ಕಾಟಕ ರಾಶಿ:

ಆತುರವು ಕೆಲಸವು ದಿನವನ್ನು ಹಾಳುಮಾಡಿಕೊಳ್ಳಲು ಸಾಕು. ರಾಜಕೀಯ ಕುಟಂಬದ ವ್ಯಕ್ತಿಯನ್ನು ನೀವು ಭೇಟಿ ಮಾಡಲಿದ್ದು ಕೆಲವು ಅನುಕೂಲತೆಗಳು ಆಗಲಿವೆ. ಇಂದು ಪ್ರೇಮ ಸಂಬಂಧಗಳು ಹೊಂದಾಣಿಕೆಯ ಅಗತ್ಯವಿದೆ. ಸರ್ಕಾರಿ ಕೆಲಸಗಳು ಅಂದುಕೊಂಡಂತೆ ವೇಗವಾಗಿ ಮುಂದುವರಿಯುವುದು. ಹಣಕಾಸಿನ ವಿಚಾರದಲ್ಲಿ ಆದಾಯ ಮತ್ತು ಖರ್ಚುಗಳು ಸಮವಾಗಿರಲಿದೆ. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ.

ಸಿಂಹ ರಾಶಿ:

ಮಕ್ಕಳಿಗೆ ನಿಮ್ಮ ಪ್ರೀತಿ ಹೆಚ್ಚಾಗುವುದು. ನಿಮ್ಮ ಕೆಲಸದ ಸಮಯವನ್ನು ಸರಿಮಾಡಿಕೊಳ್ಳಿ. ಆರ್ಥಿಕ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ನಿಮ್ಮ ಮೇಲೆ ನಿಮಗೆ ನಂಬಿಕೆಯು ಕಡಿಮೆಯಾಗುವುದು.‌ ಹೊಸತನ್ನು ಕಲಿಯುವ ಬಯಕೆ ಇದ್ದರೂ ಸಮಯ, ವ್ಯವಸ್ಥೆಯು ಕಷ್ಟವಾದೀತು. ಯಾವ ಒತ್ತಡವೂ ನಿಮ್ಮನ್ನು ಏನೂ ಮಾಡಲಾಗದು. ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ.

ಕನ್ಯಾ ರಾಶಿ:

ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚುತ್ತದೆ. ರಾಜಕೀಯ ವ್ಯಕ್ತಿಗಳಿಂದ ಉದ್ಯಮಕ್ಕೆ ಬಂದ ಅಡೆತಡೆಗಳು ನಿವಾರಣೆಯಾಗಲಿವೆ. ನಿಮ್ಮ ಬುದ್ಧಿವಂತಿಕೆಯಿಂದ ಯಶಸ್ಸಿನ ಅವಕಾಶಗಳನ್ನು ಸೃಷ್ಟಿಸುತ್ತದೆ ಪ್ರಯಾಣವು ನೋವಿನಿಂದ ಕೂಡಿದೆ, ಹಾಗಾಗಿ ಬಿಟ್ಟುಬಿಡಿ. ವ್ಯಾಪಾರ ಲಾಭದಾಯಕ ಆಗಬಹುದು‌. ಅಧಿಕಾರದ ಆಸೆಯಿಂದ ಅವ್ಯವಹಾರವನ್ನು ಮಾಡಲು ಪ್ರೇರಣೆ ಸಿಗಬಹುದು. ನಿಮ್ಮ ದುರ್ದೈವಕ್ಕೆ ಯಾರನ್ನೋ ಹೀಗಳೆಯುವುದು ಯೋಗ್ಯವಲ್ಲ. ಕೇವಲ ಕಲ್ಪನೆಯಿಂದ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ.

ತುಲಾ ರಾಶಿ:

ದೂರ ಪ್ರಯಾಣವು ನಿಮ್ಮ ಇಚ್ಛೆಯಾಗಲಿದೆ. ಯಾವುದೇ ತೊಂದರೆಗೆ ಸಿಲುಕದೇ ಇರುವಂತೆ ನೋಡಿಕೊಳ್ಳಿ. ನಿಮ್ಮ ಶತ್ರುಗಳನ್ನು ಅನ್ಯರಿಂದ ತಿಳಿದುಕೊಳ್ಳುವಿರಿ. ನಿಮ್ಮ ನಿಖರತೆಯ ಅಂಕಿ ಅಂಶಗಳು ಅಚ್ಚರಿ ಕೊಡಬಹುದು. ನಿಮ್ಮ ಸಂಗಾತಿಯನ್ನು ನೋಡಿಕೊಳ್ಳಿ. ಆಪ್ತ ಬಂಧುವನ್ನು ನೀವು ಕಳೆದುಕೊಳ್ಳುವಿರಿ. ಮಕ್ಕಳಿಗೆ ಹಣವನ್ನು ಕೊಟ್ಟು ತಪ್ಪು ದಾರಿಗೆ ಕಳುಹಿಸುವಿರಿ. ನಿಮ್ಮ ಬಗೆಗಿನ ಪೊಳ್ಳು ಹೇಳಿಕೆಗಳು ನಿಲ್ಲದೇ ಹೋಗಬಹುದು.

ವೃಶ್ಚಿಕ ರಾಶಿ:

ವ್ಯವಸ್ಥಿತ ವ್ಯಾಪಾರವು ನಿಮಗೆ ಆದಾಯಕ್ಕಿಂತ ಹೆಚ್ಚಾಗಿ ನೆಮ್ಮದಿ ಕೊಡುವುದು. ಇದರಿಂದ ಆದಾಯೂ ಹೆಚ್ಚಲಿದೆ. ಹೊರಗೂ ನೀವು ಸಂತೋಷವಾಗಿರಲಿ ಮುಕ್ತವಾಗಿ ಮಾತನಾಡಲು ಇಷ್ಟಪಡುವಿರಿ. ಬಹಳ‌ ದಿನಗಳ ಸಂಬಂಧವು ಹಳಸಿಹೋಗುವ ಸಾಧ್ಯತೆ ಇದೆ. ಅಪರಿಚಿತ ವ್ಯಕ್ತಿಗಳು ಉದ್ಯೋಗಕ್ಕೆ ಒತ್ತಾಯ ಮಾಡಬಹುದು. ಪಿತ್ರಾರ್ಜಿತ ಆಸ್ತಿಯ ಅನುಭವಿಸುವ ಬಯಕೆಯನ್ನು ಇಟ್ಟುಕೊಂಡಿದ್ದರೆ ಸ್ವಲ್ಪ ಸಮಯ ಕಾಯಬೇಕಾದೀತು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು.

ಧನು ರಾಶಿ:

ಯಂತ್ರೋಪಕರಣಗಳನ್ನು ಉಪಯೋಗಿಸುವಾಗ ಜಾಗರೂಕರಾಗಿರಬೇಕು. ನಿಮ್ಮ ಅಮೂಲ್ಯ ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗುವುದು. ಆರೋಗ್ಯಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗುವುದು. ಮೊಂಡು ವಾದವನ್ನು ಹಿರಿಯರ ಜೊತೆ ಮಾಡಬೇಡಿ. ಸರಿಮಾಡಿಕೊಳ್ಳುವ ಬಗ್ಗೆ ಚಿಂತಿಸಿ. ಗೆಳೆತನಕ್ಕೆ ಒಳ್ಳೆಯ ವ್ಯಕ್ತಿಗಳು ಸಿಗಬಹುದು. ಆರೋಗ್ಯದ ಮೇಲೆ ಗಮನವಿರಲಿ. ಆಧಿಕ ಖರ್ಚನ್ನು ಮಾಡಿಕೊಳ್ಳುವುದು ಬೇಡ.

ಮಕರ ರಾಶಿ:

ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳು ಪ್ರಯತ್ನಗಳು ಸಫಲವಾಗಲಿದೆ. ನೀವು ನಿಮ್ಮನ್ನು ಇಷ್ಟಪಡುವವರಿಂದ ಉಡುಗೊರೆ ಬರಲಿದೆ. ಹೂಡಿಕೆಯಲ್ಲಿ ನಿಮ್ಮ ಬುದ್ಧಿ ಚಂಚಲವಾಗಲಿದೆ. ಇಂದಿನ ಪ್ರಮುಖ ಕೆಲಸವು ವ್ಯತ್ಯಾಸ ಆಗಬಹುದು. ಇನ್ನೊಬ್ಬರ ಮೇಲೆ‌ಕರುಣೆ ಬರಬಹುದು. ಆಪ್ತರಿಗೆ ಧನಸಹಾಯವನ್ನು ಮಾಡುವಿರಿ. ಮಕ್ಕಳ ಪಕ್ಷದಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಸಂಗಾತಿಯಿಂದ ನೀವು ಎಲ್ಲದಕ್ಕೂ ಬೆಂಬಲ ಪಡೆಯುವಿರಿ.

ಕುಂಭ ರಾಶಿ:

ಬಹಳ ದಿನಗಳಿಂದ ಮರೆತುಹೋದ ಸ್ನೇಹಿತರನ್ನು ಅನಿರೀಕ್ಷೀತ ಭೇಟಿಯಾಗುವಿರಿ. ನೀವು ಜೀವನಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ನಿಮ್ಮ ವೇತನದ ಮೌಲ್ಯ ಹೆಚ್ಚಾಗಲಿದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ಹಳೆಯ ನೋವಿನಿಂದ ನೀವು ಬಳಲಬಹುದು. ಕುಟುಂಬದವರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಸುಳ್ಳನ್ನು ಯಾರಾದರೂ ನಂಬಬಹುದು.

ಮೀನ ರಾಶಿ:

ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡಬೇಕಾಗಬಹುದು. ಕಳೆದುದರ ಬಗ್ಗೆ ನಿಮಗೆ ಚಿಂತೆ ಇರದಿದ್ದರೂ ಅದು ನಿಮ್ಮನ್ನು ಕಾಡಬಹುದು. ಅನಿರೀಕ್ಷಿತ ವಾರ್ತೆಯು ನಿಮ್ಮ ಕೆಲಸವನ್ನು ವ್ಯತ್ಯಾಸ ಮಾಡೀತು. ಭೂಮಿಯ ವಿಚಾರದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನೀವು ಹಾಕಿಕೊಂಡ ಕಾರ್ಯವು ಆಗದೇಹೋಗುವುದು. ಸಂತಾನ ಸುದ್ದಿಯು ನಿಮಗೆ ಖುಷಿ ಕೊಟ್ಟೀತು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಪೂರ್ವಾಭಾದ್ರಾ, ಯೋಗ : ಸುಕರ್ಮ, ಕರಣ : ಬವ, ಸೂರ್ಯೋದಯ – 06 – 06 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:16 – 10:51, ಯಮಗಂಡ ಕಾಲ 14:01 – 15:36, ಗುಳಿಕ ಕಾಲ 06:06 – 07:41

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:37 am, Sat, 1 August 26

Source link

Leave a Reply

Your email address will not be published. Required fields are marked *