ಯುವ ರೈತ ಚೇತನ್ ಅವರು ‘ದೇವಿ’ (Devi) ಸಿನಿಮಾದ ಮೂಲಕ ಹೀರೋ ಆಗುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 10 ಮಂದಿ ನಿರ್ದೇಶಕರಿಂದ ತಮಗೆ ಮೋಸ ಆಗಿದೆ ಎಂದು ಅವರು ಹೇಳಿದ್ದಾರೆ. ‘ಒಂದೂವರೆ ವರ್ಷದ ಹಿಂದೆ ಒಬ್ಬರು ನಿರ್ದೇಶಕರು ಬಂದಿದ್ದರು. ಸಿನಿಮಾಗೆ ಹಣ ಹಾಕು ಎಂದರು, ನಾನು ನಂಬಿದೆ. ಆ ಮೇಲೆ ಆ ನಿರ್ದೇಶಕರೇ ಕಾಣಿಸಲಿಲ್ಲ. ಚಿತ್ರರಂಗ ನಮಗೆ ಸೆಟ್ ಆಗಲ್ಲ ಅಂತ ಮತ್ತೆ ಊರಿಗೆ ವಾಪಸ್ ಹೋಗಲು ನಿರ್ಧರಿಸಿದೆ. ಆ ವೇಳೆ ಇನ್ನೊಬ್ಬರು ಫೋನ್ ಮಾಡಿದರು. ನಿಮ್ಮನ್ನು ಹೀರೋ ಮಾಡುತ್ತೇನೆ ಅಂತ ಭರವಸೆ ನೀಡಿದರು. ಆ ಚಿತ್ರದ ಶೂಟಿಂಗ್ ಕೆಲವು ದಿನ ನಡೆಯಿತು. ಆ ನಿರ್ದೇಶಕನಿಗೆ ಕೆಲಸವೇ ಬರಲ್ಲ ಅಂತ ಆಗ ಗೊತ್ತಾಯಿತು. ಈ ರೀತಿ 10 ನಿರ್ದೇಶಕರು ಮೋಸ ಮಾಡಿದ ಮೇಲೆ 11ನೇ ಸಿನಿಮಾದ ಕಥೆಯನ್ನು ನಾನೇ ಬರೆದಿದ್ದೇನೆ. 20 ನಿಮಿಷದಲ್ಲಿ ಸಿದ್ಧಪಡಿಸಿದ ಕಥೆ ಇದು’ ಎಂದು ಚೇತನ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.