ಕೊಲ್ಕತ್ತಾ, ಮೇ 5: ಪಶ್ಚಿಮ ಬಂಗಾಳದಲ್ಲಿ (West Bengal Election Results) ಬಿಜೆಪಿ ಯಾರೂ ಊಹಿಸದ ರೀತಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿದೆ. ಭಾರೀ ಬಹುಮತದಿಂದ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಗೆಲುವು ಯಾವೆಲ್ಲ ರೀತಿಯ ಬದಲಾವಣೆಗಳನ್ನು ತರಬಹುದು ಎಂಬ ಕುತೂಹಲ ಇಡೀ ದೇಶದ ಜನರಲ್ಲಿ ಇದೆ. ಏಕೆಂದರೆ, ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಒಂದು ಬಾರಿಯೂ ಬಿಜೆಪಿ ಅಧಿಕಾರ ಪಡೆದಿರಲಿಲ್ಲ. ಬಿಜೆಪಿ ಗೆದ್ದ ಮರುದಿನವೇ ಹಲವಾರು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಅಸನ್ಸೋಲ್ ದುರ್ಗಾ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ.
ಪಶ್ಚಿಮ ಬಂಗಾಳದ ಪಶ್ಚಿಮ ಬಂಗಾಳದಲ್ಲಿ ಶ್ರೀ ಶ್ರೀ ದುರ್ಗಾಮಾತಾ ಚಾರಿಟೇಬಲ್ ಟ್ರಸ್ಟ್ ನಿರ್ವಹಿಸುತ್ತಿರುವ ದುರ್ಗಾ ದೇವಸ್ಥಾನವು ಹಲವಾರು ವರ್ಷಗಳಿಂದ ಮುಚ್ಚಲ್ಪಟ್ಟಿತ್ತು. ಇಂದು ಈ ದೇವಾಲಯ ಭಕ್ತರಿಗೆ ಮತ್ತೆ ತೆರೆಯಲ್ಪಟ್ಟಿದೆ. ಈ ದೇವಾಲಯದ ಪುನರಾರಂಭದ ನಂತರ, ಸ್ಥಳೀಯ ಬಿಜೆಪಿ ನಾಯಕರು ಇದನ್ನು ಈ ಪ್ರದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ವಾತಾವರಣದ ಸಂಕೇತವೆಂದು ಎತ್ತಿ ತೋರಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಅಸನ್ಸೋಲ್ ದಕ್ಷಿಣ ಸ್ಥಾನವನ್ನು 40,839 ಮತಗಳ ಅಂತರದಿಂದ ಗೆದ್ದಿರುವ ಅಗ್ನಿಮಿತ್ರ ಪಾಲ್ ಬಂಗಾಳದ ಮುಖ್ಯಮಂತ್ರಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯಲ್ಲೂ ಇದ್ದಾರೆ.
#WATCH | A Durga temple, managed by the Shri Shri Durgamata Charitable Trust in West Bengal’s Asansol, reopened to devotees after remaining shut for several years.
BJP leader Agnimitra Paul won the Asansaol Dakshin seat with a margin of 40,839 votes. pic.twitter.com/CojN84s6mp
— ANI (@ANI) May 5, 2026
ಇದನ್ನೂ ಓದಿ: ಪಶ್ಚಿಮ ಬಂಗಾಳದಿಂದ ಕೇರಳ ವರೆಗೆ… ಶಾಸಕರಾಗಿ ಆಯ್ಕೆಯಾದ ಮುಸ್ಲಿಮರೆಷ್ಟು ಗೊತ್ತೇ? ಅಚ್ಚರಿಯ ಅಂಕಿಅಂಖ್ಯೆ ಇಲ್ಲಿದೆ ನೋಡಿ
ಅಸನ್ಸೋಲ್ ಉತ್ತರ ಕ್ಷೇತ್ರದಿಂದ ಹೊಸದಾಗಿ ಆಯ್ಕೆಯಾದ ಶಾಸಕ ಕೃಷ್ಣೇಂದು ಮುಖರ್ಜಿ ಅವರು ತಮ್ಮ ಗೆಲುವಿನ ನಂತರ ಈ ದುರ್ಗಾ ದೇವಾಲಯಕ್ಕೆ ಭೇಟಿ ನೀಡಿದರು. ಅವರು ಈ ಹಿಂದೆ ತಮ್ಮ ಪ್ರಚಾರದ ಸಮಯದಲ್ಲಿ ವರ್ಷವಿಡೀ ದೇವಾಲಯ ತೆರೆದಿರುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಂತೆ ಅವರು ಗೆದ್ದ ಮರುದಿನವೇ ಈ ದೇವಸ್ಥಾನದ ಬಾಗಿಲು ತೆರೆಯಲಾಗಿದೆ.
Hindus in Asansol open gates of Bastin Bazar Durga Mandir.
It was closed due to appeasement of Jihadi community.
Joy Maa Durga 🥹 pic.twitter.com/PT6y2m4RO4— IronHeart (@iron_heart9) May 5, 2026
ಇದನ್ನೂ ಓದಿ: ಎಸ್ಐಆರ್ನಲ್ಲಿ ಅತಿ ಹೆಚ್ಚು ಮತದಾರರು ಡಿಲೀಟ್ ಆಗಿದ್ದ ಕ್ಷೇತ್ರಗಳಲ್ಲಿ ಟಿಎಂಸಿ ಪ್ರದರ್ಶನ ಹೇಗಿತ್ತು?
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 294 ಸದಸ್ಯರ ವಿಧಾನಸಭೆಯಲ್ಲಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಎರಡರಷ್ಟು ಬಹುಮತವನ್ನು ದಾಟಿ ಐತಿಹಾಸಿಕ ಗೆಲುವು ಸಾಧಿಸಿತು. ಈ ಫಲಿತಾಂಶವು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ನ ದೀರ್ಘ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ್ ಸ್ಥಾನವನ್ನು ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದರಿಂದ ಈ ಚುನಾವಣೆಯು ಟಿಎಂಸಿಯ ಅಧಃಪತನದ ಮುನ್ನುಡಿ ಎಂದೇ ಪರಿಗಣಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ