ರಾಮನಗರ, ಆಗಸ್ಟ್ 10: ‘ಬಿಡದಿ ಟೌನ್ಶಿಪ್ ಯೋಜನೆಯ ಹಿಂದಿನ ಉದ್ದೇಶ ಏನು. ಯಾರಿಗೆ ಅನುಕೂಲ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ ಆದ 60 ದಿನದಲ್ಲಿ ಮಾಡಲು ಏಕೆ ಹೊರಟಿದ್ದಾರೆ’ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಸಿಎಂ ಡಿಕೆ ಶಿವಕುಮಾರ್ಗೆ ಪ್ರಶ್ನೆ ಮಾಡಿದ್ದಾರೆ. ಬಿಡದಿ ಟೌನ್ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಎರಡನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿ ಬಳಿಕ ಟಿವಿ9 ಜೊತೆಗೆ ಮಾತನಾಡಿದ ದೇವೇಗೌಡರು, ‘ಡಿಕೆ ಶಿವಕುಮಾರ್ ಡಿಸಿಎಂ ಆಗಿದ್ದಾಗ ಅವರೇ ಉಸ್ತುವಾರಿ, ಆಗ ಏಕೆ ಮಾಡಿಲ್ಲ. ಇಷ್ಟು ವರ್ಷ ಇಲ್ಲದ ಟೌನ್ಶಿಪ್ನ್ನು ಈಗ ಏಕೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 20,000ಕ್ಕಿಂತ ಹೆಚ್ಚು ಬಿಡಿಎ ಸೈಟ್ ಖಾಲಿ ಬಿದ್ದಿದೆ. ಹೆಚ್.ಡಿ.ಕುಮಾರಸ್ವಾಮಿ ಟೌನ್ಶಿಪ್ ಯೋಜನೆ ಘೋಷಣೆ ಮಾಡಿದ್ದರು. ನಾವು ಈಗ ಮುಂದುವರಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರ ಟೌನ್ಶಿಪ್ ಕೂಸನ್ನು ಅಬಾರ್ಷನ್ ಮಾಡಿದ್ದು ಕಾಂಗ್ರೆಸ್’ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.