ಬೆಂಗಳೂರು, ಜುಲೈ 24: ಫುಟ್ಪಾತ್ ಒತ್ತುವರಿ ವಿರುದ್ಧ ಸಚಿವ ಕೃಷ್ಣಬೈರೇಗೌಡ ದೊಡ್ಡ ಸಮರವೇ ಸಾರಿದ್ದರು. ಆ ಬಳಿಕ ರಸ್ತೆ ಬದಿ ವರ್ಷಗಳಿಂದ ನಿಂತಲ್ಲೇ ನಿಂತ ವಾಹನಗಳ ತೆರವಿಗೂ ಕೈ ಹಾಕಿದ್ದಾರೆ. ಈಗಾಗಲೇ ರಸ್ತೆ ಬದಿ ಅನಾಥವಾಗಿ ನಿಂತಿರುವ ವಾಹನಗಳಿಗೆ 15 ದಿನಗಳ ಮುಂಚಿತವಾಗಿಯೇ ನೋಟಿಸ್ ಕೂಡ ಅಂಟಿಸಲಾಗಿದೆ. ಸದ್ಯ ರಿಚ್ಮಂಡ್ ಟೌನ್ ಸುತ್ತಮುತ್ತಲೂ 30ಕ್ಕೂ ಹೆಚ್ಚು ಬಿಡಾಡಿ ವಾಹನಗಳನ್ನ ಗುರುತಿಸಿ ಜಿಬಿಎ ಅಧಿಕಾರಿಗಳು ಖುದ್ದು ಸ್ಟಿಕರ್ ಅಂಟಿಸಿದ್ದರು. ಆದರೆ ವಾಹನಗಳ ಮಾಲೀಕರು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಜಿಬಿಎ ಮತ್ತು ಸಂಚಾರ ಪೊಲೀಸ್ ಇಲಾಖೆ ಸಿಬ್ಬಂದಿ ನೇರವಾಗಿ ವಾಹನಗಳನ್ನ ಟಾಯಿಂಗ್ ಮುಖಾಂತರ ಜಾಪ್ತಿ ಮಾಡುತ್ತಿದ್ದಾರೆ.
ವರದಿ: ಅರುಣ್ ಕುಮಾರ್
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.