ಬೂದಿ ಮುಚ್ಚಿದ ಕೆಂಡದಂತಾಗಿದೆ ಭಟ್ಕಳ, ಮೂರಿನ್ ಕಟ್ಟೆ ಧ್ವಂಸಗೊಳಿಸಿದ್ದಕ್ಕೆ ಸಮರ್ಥಿಸಿಕೊಂಡ ಮುಸ್ಲಿಂ ಮುಖಂಡ – Kannada News | Bhatkal Murin Katte Row: Muslim Leader Talks about Why opposed

ಕಾರವಾರ, (ಮೇ 25): ತಣ್ಣಗಾಗಿದ್ದ ಕರಾವಳಿಯ ಸೂಕ್ಷ್ಮ ಪ್ರದೇಶ ಭಟ್ಕಳದಲ್ಲಿ ಮೂರಿನಕಟ್ಟೆ ವಿವಾದ ಮತ್ತೆ ಕಿಚ್ಚು ಹೊತ್ತಿಸಿದೆ. ಭಟ್ಕಳದ ವೆಂಕಟಾಪುರದ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದ ಮೂರಿನಕಟ್ಟೆಯನ್ನು ಭಾನುವಾರ ರಾತ್ರಿ ಅನ್ಯಕೋಮಿನ ಯುವಕರು ಸೇರಿ ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಭಟ್ಕಳ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಿಷೇಧಾಜ್ಞೆ ಹೊರಡಿಸಲಾಗಿದೆ. ಇನ್ನು ಭಟ್ಕಳದಲ್ಲಿನ ಹಿಂದೂಗಳ ಮೂರಿನ್ ಕಟ್ಟೆ ಧ್ವಂಸಗೊಳಿಸಿರುವುದಕ್ಕೆ ಮುಸ್ಲಿಂ ಮುಖಂಡ ಸಮರ್ಥನೆ ಮಾಡಿಕೊಂಡಿದ್ದಾರೆ.

ಇನ್ನು ಈ ಬಗ್ಗೆ Tv9 ಜೊತೆ ಭಟ್ಕಳ ತಂಜೀಮ್ ಅಧ್ಯಕ್ಷ ಇನಾಯತವುಲ್ಲಾ ಶಾಂಬಾಂದ್ರಿ ಮಾತನಾಡಿದ್ದು, ಮೂರಿನ್ ಕಟ್ಟೆ ಇದ್ದಲ್ಲಿಯೇ ಇದ್ರೆ ನಮಗೆ ಸಮಸ್ಯೆ ಇಲ್ಲ. ಆದ್ರೆ ಹೊಸ ಮೂರಿನ್ ಕಟ್ಟೆ ನಿರ್ಮಾಣಕ್ಕೆ ನಮ್ಮ ವಿರೋಧ ಇದೆ. ಈ ಬಗ್ಗೆ ತಹಶೀಲ್ದಾರ್ ಹಾಗೂ ಪೊಲೀಸರ ಗಮನಕ್ಕೆ ತಂದಿದ್ವಿ. ಹೊಸ ಮೂರಿನ್ ಕಟ್ಟೆ ಮುಸ್ಲಿಂ ಮನೆ ಮುಂದೆ ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ಮತ್ತೆ ಸಮಸ್ಯೆ ಆಗಬಾರದೆಂದು ನಾವು ವಿರೋಧ ಮಾಡಿದ್ವಿ. ನಮ್ಮ ಹುಡುಗರಿಗೆ ಕಂಟ್ರೋಲ್ ಆಗಲಿಲ್ಲ ನಿನ್ನೆ ಒಡೆದ ಹಾಕಿದ್ದಾರೆ. ಇನ್ಮೂಂದೆಯೂ ಯಾವುದೇ ಕಾರಣಕ್ಕೂ ಅಲ್ಲಿ ನಿರ್ಮಾಣ ಮಾಡಬಾರದು. ಸ್ವಲ್ಪ ಮುಂದೆ ಹಿಂದೂ ಮನೆಗಳಿವೆ ಅಲ್ಲಿ ನಿರ್ಮಾಣ ಮಾಡಲಿ. ಈ ಬಗ್ಗೆ ಈಗಾಗಲೇ ಡಿಸಿ ಹಾಗೂ ಎಸ್ಪಿ ಗಮನಕ್ಕೆ ತಂದಿದ್ದೆವೆ. ಅದೆ ಸ್ಥಳದಲ್ಲಿ ಮತ್ತೆ ನಿರ್ಮಾಣ ಮಾಡುವುದಾದ್ರೆ ನಮ್ಮ ವಿರೋಧ ಇದೆ. ಮುಂದೆ ನಾವು ಕಾನೂನು ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *