ದೆಹಲಿ, ಮೇ.4: ಕೊಯಮತ್ತೂರಿನ ಸಾಮಾಜಿಕ ಉದ್ಯಮಿ ಹಾಗೂ ‘ಪ್ಯಾಡ್ಮ್ಯಾನ್’ ಖ್ಯಾತಿಯ ಅರುಣಾಚಲಂ ಮುರುಗಾನಂದಂ ಅವರು 2026ರ ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ನಾಮನಿರ್ದೇಶನದ ಸುದ್ದಿ ಕೇಳಿ ತಮಗೆ ಮೊದಲು ನಂಬಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ. ನೋಬೆಲ್ ಪ್ರಶಸ್ತಿಗೆ ನಾವಾಗಿಯೇ ಹೆಸರು ಸಲ್ಲಿಸಲು ಅಥವಾ ಕುಟುಂಬದವರು ಶಿಫಾರಸು ಮಾಡಲು ಸಾಧ್ಯವಿಲ್ಲ, ಇದನ್ನು ಮೂರನೇ ವ್ಯಕ್ತಿಗಳೇ ಮಾಡಬೇಕು ಎಂದು ಹೇಳಿದ್ದಾರೆ. ಪಾಂಡಿಚೇರಿಯ ಅರವಿಂದ್ ಕಣ್ಣಿನ ಆಸ್ಪತ್ರೆಯ ಡೀನ್ ಮತ್ತು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ತಂಡಗಳು ಮುರುಗಾನಂದಂ ಅವರ ಹೆಸರನ್ನು ನಾಮನಿರ್ದೇಶನಕ್ಕಾಗಿ ಸಲ್ಲಿಸಿದ್ದವು. ಇವರು ಸಲ್ಲಿಸಿದ ನಾಮನಿರ್ದೇಶನವು ಕೇವಲ 24 ಗಂಟೆಗಳ ಒಳಗಾಗಿ ಅಂಗೀಕರಿಸಲ್ಪಟ್ಟಿದೆ.
ಯಾರು ಈ ಅರುಣಾಚಲಂ ಮುರುಗಾನಂದಂ?
ಅರುಣಾಚಲಂ ಮುರುಗಾನಂದಂ ಅವರು ಗ್ರಾಮೀಣ ಮಹಿಳೆಯರ ಋತುಸ್ರಾವದ ನೈರ್ಮಲ್ಯಕ್ಕಾಗಿ ಕಡಿಮೆ ವೆಚ್ಚದ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರವನ್ನು ಸಂಶೋಧಿಸಿದವರು. ಶಾಲೆಯಿಂದ ಅರ್ಧಕ್ಕೇ ಹೊರಬಂದಿದ್ದ ಇವರು, ತಮ್ಮ ಪತ್ನಿ ಅನುಭವಿಸುತ್ತಿದ್ದ ತೊಂದರೆಯನ್ನು ಕಂಡು ಈ ಯಂತ್ರವನ್ನು ತಯಾರಿಸಲು ನಿರ್ಧರಿಸಿದರು. ಇವರನ್ನು 2026ರ ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಈ ನಾಮನಿರ್ದೇಶನವನ್ನು ಪಾಂಡಿಚೇರಿಯ ಅರವಿಂದ್ ಕಣ್ಣಿನ ಆಸ್ಪತ್ರೆಯ ಡೀನ್ ಮತ್ತು ಅಮೆರಿಕದ ತಂಡಗಳು ಸಲ್ಲಿಸಿದ್ದು, ಕೇವಲ 24 ಗಂಟೆಗಳಲ್ಲಿ ಇದನ್ನು ಅಂಗೀಕರಿಸಲಾಗಿದೆ.
ಇಲ್ಲಿದೆ ನೋಡಿ ಸ್ಟೋರಿ:
#WATCH | Coimbatore, Tamil Nadu | Social entrepreneur Arunachalam Muruganantham, who is famously known as the ‘Padman,’ has been listed as a nominee for the 2026 Nobel Peace Prize.
He says, “I couldn’t believe it at first… For the Nobel Prize, you can not submit your name, nor… pic.twitter.com/unHNj0tSrF
— ANI (@ANI) May 3, 2026
ಪ್ರಮುಖ ಸಾಧನೆಗಳು
ಮಾರುಕಟ್ಟೆಯಲ್ಲಿ ದೊರೆಯುವ ಪ್ಯಾಡ್ಗಳಿಗಿಂತ ಹತ್ತನೇ ಒಂದು ಭಾಗದಷ್ಟು ಕಡಿಮೆ ಬೆಲೆಯಲ್ಲಿ ಪ್ಯಾಡ್ ತಯಾರಿಸುವ ಯಂತ್ರವನ್ನು ಕಂಡುಹಿಡಿದರು. ಜಯಶ್ರೀ ಇಂಡಸ್ಟ್ರೀಸ್ ಎಂಬ ಕಂಪನಿಯನ್ನು ಸ್ಥಾಪಿಸಿ. ಇವರ ಈ ಸಂಸ್ಥೆಯ ಮೂಲಕ ಭಾರತದಾದ್ಯಂತ ಮತ್ತು 11ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಾವಿರಾರು ಯಂತ್ರಗಳನ್ನು ಅಳವಡಿಸಲಾಗಿದೆ. ಈ ಯಂತ್ರಗಳ ಮೂಲಕ ಸಾವಿರಾರು ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ‘R’ ಅಕ್ಷರದಿಂದ ಹೆಸರು ಪ್ರಾರಂಭವಾಗುವವರ ಸ್ವಭಾವ ಹೇಗಿರುತ್ತೆ ಗೊತ್ತಾ?
ಇವರಿಗೆ ಸಿಕ್ಕ ಗೌರವಗಳು:
ಭಾರತ ಸರ್ಕಾರವು 2016ರಲ್ಲಿ ಇವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. 2014ರಲ್ಲಿ ಟೈಮ್ಸ್ ನಿಯತಕಾಲಿಕೆಯು ಇವರನ್ನು ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿಸಿತ್ತು. ಇವರ ಜೀವನದ ಹೋರಾಟವನ್ನು ಆಧರಿಸಿ ಅಕ್ಷಯ್ ಕುಮಾರ್ ಅಭಿನಯದ ‘ಪ್ಯಾಡ್ ಮ್ಯಾನ್’ ಸಿನಿಮಾ ನಿರ್ಮಿಸಲಾಗಿದೆ. ಇವರ ಕಥೆಯನ್ನು ಹೇಳುವ ‘ಪೀರಿಯಡ್. ಎಂಡ್ ಆಫ್ ಸೆಂಟೆನ್ಸ್’ ಎಂಬ ಸಾಕ್ಷ್ಯಚಿತ್ರವು ಆಸ್ಕರ್ ಪ್ರಶಸ್ತಿಯನ್ನೂ ಪಡೆದಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ