ರಾಯಚೂರು, ಜನವರಿ 1: ಹೊಸ ವರ್ಷ 2026ಕ್ಕೆ ಜಗತ್ತು ಕಾಲಿಟ್ಟಾಗಿದೆ. ‘ರಾಯರೇ, ಎಲ್ಲಾ ಒಳಿತು ಮಾಡಪ್ಪ’ ಎಂದು ಮಂತ್ರಾಲಯಕ್ಕೆ ಭಕ್ತಸಾಗರವೇ ಹರಿದು ಬಂದಿದೆ. 2025ರ ವರ್ಷಾಂತ್ಯ, 2026 ರ ಆರಂಭದ ಹಿನ್ನೆಲೆ ರಾಯಚೂರಿನ ಮಂತ್ರಾಲಯದ ರಾಯರ ಮಠಕ್ಕೆ ಸಾಗರೋಪಾದಿಯಲ್ಲಿ ಬಂದ ಜನರು ತುಂಗಾಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾದರು. ಕ್ರಿಸ್ಮಸ್, ಈಯರ್ ಎಂಡ್, ನ್ಯೂ ಇಯರ್ ಅಂತ ವೆಕೇಷನ್ ಮೂಡ್ನಲ್ಲಿರುವ ಜನರು ಮಂತ್ರಾಲಯದತ್ತ ಮುಖ ಮಾಡಿದ್ದಾರೆ.