Headlines

ರಸ್ತೆ ಬದಿ ಅಡ್ಡಾದಿಡ್ಡಿ ನಿಲ್ಲಿಸಿದ್ದ ವಾಹನಗಳ ಹರಾಜಿಗೆ ಸಿದ್ಧತೆ: GBA ಮತ್ತು ಪೊಲೀಸರಿಂದ ಭರ್ಜರಿ ಜಂಟಿ ಕಾರ್ಯಾಚರಣೆ! – Kannada News | GBA and Police Joint Drive: 6,544 Abandoned Vehicles Reported, Auctions Soon

ಬೆಂಗಳೂರು, ಆಗಸ್ಟ್ 08: ರಸ್ತೆ ಬದಿಗಳಲ್ಲಿ ದೀರ್ಘಕಾಲದಿಂದ ಬಿದ್ದಿರುವ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಪರಿತ್ಯಕ್ತ ವಾಹನಗಳ ವಿರುದ್ಧ ಜಿಬಿಎ (GBA) ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಭರ್ಜರಿ ತೆರವು ಕಾರ್ಯಾಚರಣೆ ಆರಂಭಿಸಿವೆ. ಕಳೆದ ಜುಲೈ 10 ರಿಂದ ಶುರುವಾದ ಈ ವಿಶೇಷ ಆಪರೇಷನ್ ತೀವ್ರಗತಿಯಲ್ಲಿ ಸಾಗುತ್ತಿದ್ದು, ಇನ್ನು ಮುಂದೆ ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ಭಾರಿ ದಂಡದ ಬಿಸಿ ತಟ್ಟಲಿದೆ.

6,500ಕ್ಕೂ ಹೆಚ್ಚು ವಾಹನಗಳ ಪತ್ತೆ!

ಕಾರ್ಯಾಚರಣೆ ಆರಂಭವಾದ ದಿನದಿಂದ ಇಂದಿನವರೆಗೆ ಒಟ್ಟು 6,544 ವಾಹನಗಳು ವರದಿಯಾಗಿವೆ. ಇದರಲ್ಲಿ ಸಾರ್ವಜನಿಕರೇ ಜವಾಬ್ದಾರಿಯಿಂದ ಮುಂದೆ ಬಂದು 4,108 ಅಬಾಂಡೆಂಟ್ ವಾಹನಗಳನ್ನು ಪತ್ತೆ ಹಚ್ಚಿ ಮಾಹಿತಿ ನೀಡಿದ್ದಾರೆ. ಇನ್ನುಳಿದ 2,436 ವಾಹನಗಳನ್ನು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಿಪೋರ್ಟ್ ಮಾಡಿದ್ದಾರೆ. ಈ ಪೈಕಿ ಒಟ್ಟು 3,100 ವಾಹನಗಳು ಕಂಪ್ಲೀಟ್ ಆಗಿ ರಸ್ತೆ ಬದಿಯಲ್ಲೇ ಬಿದ್ದಿರುವುದು ದಾಖಲಾಗಿದೆ.

7 ದಿನಗಳ ಗಡುವು

ರಸ್ತೆ ಬದಿ ಬಿದ್ದಿರುವ ವಾಹನಗಳನ್ನು ಜಪ್ತಿ ಮಾಡುವ ಮುನ್ನ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಈಗಾಗಲೇ GBA ಅಧಿಕಾರಿಗಳು ಒಟ್ಟು 1,780 ವಾಹನಗಳಿಗೆ ನೋಟಿಸ್ ಸ್ಟಿಕ್ಕರ್ ಅಂಟಿಸಿದ್ದಾರೆ. ಸದ್ಯ ಪ್ರತಿದಿನ 50 ರಿಂದ 100 ವಾಹನಗಳಿಗೆ ಸ್ಟಿಕ್ಕರ್ ಹಾಕುವ ಕೆಲಸ ನಡೆಯುತ್ತಿದೆ. ನಿಯಮಗಳ ಪ್ರಕಾರ, ಸ್ಟಿಕ್ಕರ್ ಅಂಟಿಸಿದ 7 ದಿನಗಳ ಒಳಗೆ ಮಾಲೀಕರು ವಾಹನವನ್ನು ತೆರವುಗೊಳಿಸದಿದ್ದರೆ ಆ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ. ಈಗಾಗಲೇ ಇಂತಹ 352 ವಾಹನಗಳನ್ನು ಯಶಸ್ವಿಯಾಗಿ ಟೋಯಿಂಗ್ ಮಾಡಿ ಸುರಕ್ಷಿತವಾಗಿ ಜಪ್ತಿ ಮಾಡಲಾಗಿದೆ.

ಹರಾಜು ಪ್ರಕ್ರಿಯೆ

ಟೋಯಿಂಗ್ ಮಾಡಿದ ಎಲ್ಲಾ ವಾಹನಗಳಿಗೆ ವೀಲ್ ಕ್ಯಾಪ್ ಅಳವಡಿಸಿ ನಿಗದಿತ ಯಾರ್ಡ್ ಅಥವಾ ಸ್ಥಳಗಳಲ್ಲಿ ಜಾಗರೂಕತೆಯಿಂದ ನಿಲ್ಲಿಸಲಾಗಿದೆ. ಜಪ್ತಿಯಾದ ವಾಹನಗಳನ್ನು ಬಿಡಿಸಿಕೊಳ್ಳಲು ಮಾಲೀಕರಿಗೆ 15 ದಿನಗಳ ಗಡುವು ನೀಡಲಾಗುತ್ತದೆ. ಈ ಅವಧಿಯಲ್ಲಿ ಮಾಲೀಕರು ಬರದೇ ಇದ್ದರೆ, GBA ಅಧಿಕಾರಿಗಳು ಆ ವಾಹನಗಳನ್ನು ಕಾನೂನುಬದ್ಧವಾಗಿ ಹರಾಜು ಹಾಕಲಿದ್ದಾರೆ. ಈಗಾಗಲೇ 600 ವಾಹನ ಮಾಲೀಕರು ನೋ ಪಾರ್ಕಿಂಗ್ ಶುಲ್ಕ ಪಾವತಿಸಿ ತಮ್ಮ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ.

ದಂಡ ಮತ್ತು ಟೋಯಿಂಗ್ ಶುಲ್ಕದ ವಿವರ

  • ದ್ವಿಚಕ್ರ ವಾಹನಗಳು (Two Wheelers): ನೋ ಪಾರ್ಕಿಂಗ್ ಶುಲ್ಕ 500 ರೂ. + ಟೋಯಿಂಗ್ ಚಾರ್ಜ್ 650 ರೂ. (ಒಟ್ಟು ರೂ.1,150)
  • ನಾಲ್ಕು ಚಕ್ರದ ವಾಹನಗಳು (Four Wheelers): ಟೋಯಿಂಗ್ ಚಾರ್ಜ್ 1,000 ರೂ. (ಜೊತೆಗೆ ಅನ್ವಯಿಸುವ ನೋ ಪಾರ್ಕಿಂಗ್ ದಂಡ)

ರಸ್ತೆಗಳನ್ನು ಸ್ವಚ್ಛವಾಗಿಡಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಸಾರ್ವಜನಿಕರು ರಸ್ತೆ ಬದಿಗಳಲ್ಲಿ ವಾಹನಗಳನ್ನು ಅನಾಥವಾಗಿ ಬಿಡದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *