ಕಾವೇರಿ (Cauvery) ಪ್ರಾಧಿಕಾರವು, ತಮಿಳುನಾಡಿಗೆ ನೀರು ಹರಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿದೆ. ಅದರ ಬೆನ್ನಲ್ಲೆ ಕಾವೇರಿ ವಿವಾದ ಭುಗಿಲೆದ್ದಿದೆ. ರಾಜ್ಯದ ಕೆಲವೆಡೆ ಪ್ರತಿಭಟನೆಗಳು ಆರಂಭವಾಗಿವೆ. ಚಿತ್ರರಂಗದವರು ಇಂದು (ಜುಲೈ 30) ಸಭೆ ಸೇರಿದ್ದು ಇದೇ ವಿಷಯವಾಗಿ ಚರ್ಚೆ ನಡೆಸುತ್ತಿದ್ದಾರೆ. ಕನ್ನಡಪರ ಸಂಘಟನೆಗಳು ಕೆಲವೆಡೆ ಈಗಾಗಲೇ ಬೀದಿಗಿಳಿದಿವೆ. ಮಂಡ್ಯದಲ್ಲಿ ತಮಿಳು ಸಿನಿಮಾಗಳಿಗೆ ನಿಷೇಧ ಹೇರಲಾಗಿದೆ. ‘ಜನ ನಾಯಗನ್’ ಶೋ ರದ್ದು ಮಾಡಲಾಗಿದೆ. ಇದೀಗ ನಟ, ಬಿಗ್ಬಾಸ್ ಮಾಜಿ ವಿನ್ನರ್ ಪ್ರಥಮ್, ಈ ವಿಷಯವಾಗಿ ಮಾತನಾಡಿದ್ದು, ‘ವಿಜಯ್ ಅವರು ಬಲವಂತದಿಂದ ನೀರು ಪಡೆಯುವ ಪ್ರಯತ್ನ ಮಾಡಬಾರದು’ ಎಂದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ